ವಿದ್ಯಾರ್ಥಿ ಚಳುವಳಿ ಬಲಪಡಿಸಲು ಎಸ್‌ಎಫ್‌ಐ ರಾಜ್ಯ ಅಧ್ಯಯನ ಶಿಬಿರ ಆಯೋಜನೆ

SFI organizes state study camp to strengthen student movement

ವಿದ್ಯಾರ್ಥಿ ಚಳುವಳಿ ಬಲಪಡಿಸಲು ಎಸ್‌ಎಫ್‌ಐ ರಾಜ್ಯ ಅಧ್ಯಯನ ಶಿಬಿರ ಆಯೋಜನೆ  

ಹಾವೇರಿ 25: ಶಾಂತಿ, ಸೌಹಾರ್ದತೆ, ಐಕ್ಯತೆಗಾಗಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಜ್ಯ ಸಮಿತಿ ಆಯೋಜಿಸಿದ ಅಧ್ಯಯನ ಶಿಬಿರದ ಕರಪತ್ರಗಳನ್ನು ಭಾನುವಾರ ದೇವಗಿರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜಎಸ್ ಮಾತನಾಡಿದರು. ಎಸ್‌ಎಫ್‌ಐ ದೇಶದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದದ ಆಶಯಗಳನ್ನೊತ್ತು, ವಿದ್ಯಾರ್ಥಿಗಳನ್ನು ಅಭ್ಯಾಸ ಮತ್ತು ಹೋರಾಟ ಎಂಬ ಘೋಷ ವಾಕ್ಯದಡಿಯಲ್ಲಿ, ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ದುಡಿಯುವಂತೆ ಮಾಡಲು ಅಣಿನೆರೆಸುತ್ತಿದೆ.ದೇಶದ ರೈತ, ಕಾರ್ಮಿಕ, ಕೃಷಿ ಕೂಲಿ ಕಾರ್ಮಿಕರ, ಬಡದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು 55 ವರ್ಷಗಳಿಂದ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿ, ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಮತ್ತುಅದರ ಬಲವರ್ಧನೆಗಾಗಿ ಕೊಠಾರಿ ಆಯೋಗದಂತೆ ಶಿಕ್ಷಣಕ್ಕೆ ಅನುದಾನ ನೀಡಲು ಸರ್ಕಾರದ ಗಮನ ಸೆಳೆಯುತ್ತಾ ಬಂದಿದೆ. ಶಿಕ್ಷಣದ ಕೇಸರೀಕರಣ, ಕೋಮುವಾದೀಕರಣ ಮತ್ತು ಖಾಸಗೀಕರಣದ ವಿರುದ್ಧ ಬಲಿಷ್ಠ ಚಳವಳಿಯನ್ನು ಎಸ್‌ಎಫ್‌ಐ ಮುನ್ನಡೆಸುತ್ತಿದೆ.ಶಿಕ್ಷಣದ ಹಕ್ಕುಗಳ ಪರವಾಗಿ ಮಾತನಾಡುವ ಉಪನ್ಯಾಸಕರನ್ನು ಹಾಗೂ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ದಾಳಿಗಳನ್ನು ಸಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದ ಮೇಲೆ ನಡೆಯುತ್ತಿರುವ ಈ ಎಲ್ಲಾ ದಾಳಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ’ಶಾಂತಿ, ಸೌಹಾರ್ದತೆ, ಐಕ್ಯತೆಗಾಗಿ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಆಗ್ರಹಿಸಿ" ವಿದ್ಯಾರ್ಥಿ ಚಳವಳಿಯನ್ನು ಬಲಿಷ್ಠಗೊಳಿಸಲು ರಾಮನಗರ ಜಿಲ್ಲೆಯ ಜಾನಪದ ಲೋಕದ                                                                    ದೊಡ್ಡಮನಿ, ಮಂಟಪ ಸಭಾಂಗಣದಲ್ಲಿ ದಿನಾಂಕ: 2025 ಮೇ 29, 30, 31 ಮತ್ತುಜೂನ್ 01 ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯಮಟ್ಟದ ಸೈದ್ಧಾಂತಿಕ ಅಧ್ಯಯನ ಶಿಬಿರ ನಡೆಸಲಾಗುತ್ತಿದೆ.  

ಶಿಬಿರವನ್ನು ಡಾ. ಪುರುಷೋತ್ತಮ ಬಿಳಿಮಲೆ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರಇವರುಉದ್ಘಾಟಿಸಲಿದ್ದು, ಶಿಬಿರದ ಸಮಾರೋಪಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಅಶೋಕ, ಹಿರಿಯ ಸಿನಿಮಾ ನಟರು ಬೆಂಗಳೂರು ಭಾಗಿಯಾಗಲಿದ್ದಾರೆ. ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿ ಮುಖಂಡರು, ಶಿಬಿರಾರ್ಥಿಗಳು ಭಾಗಿಯಾಗಲಿದ್ದಾರೆ. ಶಿಕ್ಷಣ ಪ್ರೇಮಿಗಳಾದ ತಾವುಗಳು ಈ ಉದ್ಘಾಟನಾಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಕೃಷ್ಣ ನಾಯಕ, ಹಾಸ್ಟೆಲ್ ಘಟಕ ಅಧ್ಯಕ್ಷ ಸಂಜಯ್ ಎಮ್, ಕಾರ್ಯದರ್ಶಿ ಪ್ರಮೋದ್ ಪಿ, ವಿಶಾಲ್ ವಾಲಿ, ರೋಹಿತ್ ಸಿ ಕೆ, ಮಾಲತೇಶ್‌ಎಸ್ ಹೆಚ್, ಚೇತನ ನೆಗಳೂರ, ಅಂಕಿತಾ ಕುಮಾರ ಎನ್, ದರ್ಶನ ಇ, ಪ್ರಕಾಶ್ ಹೆಚ್,  ಸುನೀಲ್ ವಿ ಪತ್ತಾರ, ಅಭಿಷೇಕ್ ವಿರಕ್ತಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು