ಎಸ್‌.ಬಿ.ಐ.ನಿಂದ ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಅರಿವು

ಎಸ್‌.ಬಿ.ಐ.ನಿಂದ ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಅರಿವು SBI creates awareness among the public about banking transactions and financial discipline


ಕೊಪ್ಪಳ 12 : ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಫೆ. 9 ರಿಂದ 13 ರವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾದ ಐದು ದಿನಗಳ ಆರ್ಥಿಕ ಸಾಕ್ಷರತಾ ಸಪ್ತಾಹದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.ಹಣಕಾಸು ಸೇವೆಗಳ ಇಲಾಖೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌.ಬಿ.ಐ) ನಿರ್ದೇಶನದಂತೆ ಜಿಲ್ಲಾ ಮಾರ್ಗದರ್ಶಕ ಬ್ಯಾಂಕ್ ವತಿಯಿಂದ ಕುಣಕೇರಿ ಗ್ರಾಮದಲ್ಲಿ ಆಯೋಜಿಸಿಲಾದ ಈ ಕಾರ್ಯಕ್ರಮದ ಅಂಗವಾಗಿ ಉಪಸ್ಥಿತರಿದ್ದ ಜನರಿಗೆ ಸಪ್ತಾಹದ ಮುಖ್ಯ ಉದ್ದೇಶವಾಗಿ ನಿಮ್ಮ ಖಾತೆ, ನಿಮ್ಮ ಹಣ, ಎರಡನೆಯದಾಗಿ ಅಪರಿಚಿತ ಲಿಂಕ್‌ಗಳು, ಅಪರಿಚಿತ ಅಪಾಯಗಳು ಹಾಗೂ ನಿಮ್ಮ ಕೇವೈಸಿಯನ್ನು ನವೀಕರಿಸಲಾಗುವುದು ಮತ್ತು ಕೆವೈಸಿ ಐಡಿ ನಿಮ್ಮ ಎಲ್ಲಾ ಕೆವೈಸಿ ಅಗತ್ಯಗಳಿಗೆ ಒಂದು ಕೀಲಿಕೈ ಎಂಬ ನಾಲ್ಕು ಅಂಶಗಳ ಬಗ್ಗೆ ತಿಳಿಸಲಾಯಿತು.  ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಾರತೀಯ ರಿಜರ್ವ್‌ ಬ್ಯಾಂಕಿನ ವ್ಯವಸ್ಥಾಪಕ ಮೌನಿರಾಜ ಬೃಹ್ಮ, ಕೊಪ್ಪಳ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ ಕೆ. ಕರಪಾನಿ, ಕುಣಕೆರಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅಲ್ಲಾಬಕ್ಷಾ ನದಾಪ್, ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ ಬಸವರಾಜ ವಡಗೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.  ಈ ಸಪ್ತಾಹ ಕಾರ್ಯಕ್ರಮ ಫೆ. 13 ರವರೆಗೆ ನಡೆಯಲಿದೆ ಎಂದು ಕೊಪ್ಪಳ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ ಕೆ. ಕರಪಾನಿ ಅವರು ತಿಳಿಸಿದ್ದಾರೆ. 


Banking Awareness Financial Literacy Week State Bank of India (SBI)