ಹೋಳಿ ಹುಣ್ಣಿಮೆ, ರಮ್ಜಾನ್ ಹಬ್ಬದ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಗಳ ಪೆರೆಡ್
Rowdy sheeters parade at local police station as a precautionary measure for Holi, Ramzan
ಹೋಳಿ ಹುಣ್ಣಿಮೆ, ರಮ್ಜಾನ್ ಹಬ್ಬದ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಗಳ ಪೆರೆಡ್
ಮಹಾಲಿಂಗಪುರ, 06: ರಾಷ್ಟ್ರೀಯ ಸಾರ್ವತ್ರಿಕ ಹೋಳಿ ಹಬ್ಬ ಮತ್ತು ಮುಸಲ್ಮಾನರ ಪವಿತ್ರ ರಮ್ಜಾನ್ ಹಬ್ಬದ ಸಲುವಾಗಿ ಪಟ್ಟಭದ್ರ ಹಿತಾಸಕ್ತಿಗಳಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಪೋಲೀಸ್ ಠಾಣೆ ಆವರಣದಲ್ಲಿ ಈಗಾಗಲೇ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಗಳ ಪೆರೆಡ್ ನಡೆಯಿತು. ಈ ಸಂದರ್ಭದಲ್ಲಿ ಮಹಾಲಿಂಗಪುರ ಪೋಲಿಸ್ ಠಾಣೆಯ ಉಪನೀರೀಕ್ಷಕರಾದ ಕಿರಣ ಸತ್ತಿಗೇರಿ ಕ್ರಮವಾಗಿ ರೌಡಿ ಶೀಟರ್ ಗಳಿಗೆ ಪಾಠ ಮಾಡುತ್ತ, ಕಾನೂನಿನ ಅನ್ವಯ ಊರಿನಲ್ಲಿ ಸಣ್ಣ ತಪ್ಪುಗಳು ನಡೆದರೂ ಅದಕ್ಕೆ ಮೊದಲು ನಿಮ್ಮಿಂದಲೇ ವಿಚಾರಣೆ ಆರಂಭ. ಸಮಾಜದಲ್ಲಿ ಮತ್ತೊಮ್ಮೆ ತಮ್ಮಿಂದ ಅಪರಾಧ ಪ್ರಕರಣಗಳು ನಡೆಯದಂತೆ ತಾವು ಜಾಗೂರುಕತೆ ವಹಿಸಬೇಕು. ನಿಮ್ಮನ್ನು ಕೆಲವು ವರ್ಗದ ಕ್ರಿಮಿನಲ್ ಗಳು ಉಪಯೋಗಿಸಿ ತಮ್ಮ ಬೇಳೆ ಬೇಯಿಸಿಕ್ಕೊಳ್ಳುವ ತವಕದಲ್ಲಿರುತ್ತಾರೆ ಇದಕ್ಕೆ ಆಸ್ಪದ ನೀಡಬೇಡಿ.ಅವರಿಂದ ದೂರವಿದ್ದು ಸಮಾಜದಲ್ಲಿ ಸನ್ನಡತೆಯ ವ್ಯಕ್ತಿಗಳಾಗಿ ನಿಮ್ಮ ಪರಿವಾರದ ನೆಮ್ಮದಿಗಾಗಿ ಬದುಕಿ ಎಂದು ರೌಡಿ ಶೀಟರ್ ಗಳಿಗೆ ಕಳಕಳಿಯ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಪಿಎಐ ಕಿರಣ್ ಸತ್ತಿಗೇರಿ ಅಪರಾಧ ವಿಭಾಗ ಪಿಎಸ್ಐ ಮಧು ಎಲ್ ಸಹಕಾರ ನೀಡಿದರು. ಸಿಬ್ಬಂದಿ ಜನರಾದ ವಾಯ್ ವಾಯ್. ಗಚ್ಚನ್ನವರ, ಬಿ ಜಿ.ದೇಸಾಯಿ ವಿ ಎಸ್ ಅಜ್ಜನಗೌಡರ ಕೃಷ್ಣ ಲಮಾಣಿ ಮತ್ತು ಎ ಎಂ. ಜಮಖಂಡಿ ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 