ರಿಶೇಲ್ ಪ್ರಕರಣ: ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು : ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ

ರಿಶೇಲ್ ಪ್ರಕರಣ: ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು : ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ  Richel case: Accused produced in court, remanded in police custody for further questioning

         ಕಾರವಾರ 31 :  ಜನೇವರಿ 9 ರಂದು ಕದ್ರಾದ ಯುವತಿ ರಿಶೆಲ್ ಡಿಸೋಜಾ  ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತನಾಗಿದ್ದ ಚಿರಾಗ್ ನನ್ನು ಚೆನೈನಲ್ಲಿ ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ದೀಪನ್ ಎಂ.ಎನ್‌. ಹೇಳಿದರು.ಕಾರವಾರದ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಆರೋಪಿ ಪತ್ತೆಗಾಗಿ ಮೂವರು  ಇನ್ಸ್ಪೆಕ್ಟರ್ ಹಾಗೂ  ಆರು ಪಿಎಸ್ಸೈಗಳು ಕರ್ತವ್ಯ ನಿರ್ವಹಿಸಿದ್ದರು ಎಂದರು. ಚಿರಾಗ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆತನ ಚಿಕ್ಕಮ್ಮ  ಸುವರ್ಣ ಹಾಗೂ  ಅಂಕಲ್  ನಿತಿನ್ ಗಾಂವ್ಕರ್  ಅವರ ಮೇಲೆಯೂ ಆರೋಪಿಗೆ ಆಶ್ರತ ನೀಡಿದ   (ಹಾರ್ಬರಿಂಗ್ ಸೆಕ್ಷನ್  ) ಪ್ರಕರಣ ದಾಖಲಾಗಿದೆ. 

         ಅವರನ್ನು ಕರೆದು ವಿಚಾರಣೆ  ಮಾಡುತ್ತೇವೆ. ಅಲ್ಲದೇ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದರು.ಆರೋಪಿಯು ತಪ್ಪಿಸಿಕೊಳ್ಳಲು ಬೆಂಗಳೂರು, ಪುಣೆ, ಮಹಾರಾಷ್ಟ್ರ ಹಾಗೂ ಹೈದರಾಬಾದ್ ಗೆ ಓಡಾಡಿದ್ದು ಕಂಡು ಬಂದಿದೆ. ಮರು ಮರಣೋತ್ತರ ಪರೀಕ್ಷೆಯ ವರದಿಯನ್ನು ಎಫ್ ಎಸ್ ಎಲ್ ತನಿಖೆಗೆ ಕಳುಹಿಸಲಾಗಿದೆ ಹಾಗೂ ಇಬ್ಬರ ಮೊಬೈಲ್  ಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ . ವರದಿ ಬಂದ ನಂತರ ನಿಖರ ವಿಶ್ಲೇಷಣೆ ಸಾಧ್ಯ.  ಬಳಿಕ ತನಿಖೆ  ಅಂತಿಮವಾಗಲಿದೆ ಎಂದರು. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಲೋಪ ಕಂಡು ಬಂದಿತ್ತು. ಹೀಗಾಗಿಯೇ ಪಿಎಸ್ಸೈ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯುತ್ತದೆ ಎಂದರು.....