ನಿವೃತ್ತಿ ಗೊಂಡ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಏಜಾಜ್ ಹುಸೇನ್ ಗೆ ಗೋನಾಳ್ ಸ್ನೇಹ ಬಳಗ ದಿಂದ ಸನ್ಮಾನ
Retired Water Resources Department Secretary Ejaz Hussain honored by Gonal Friends Group
ಕೊಪ್ಪಳ 11: ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆ ಬೆಂಗಳೂರಿನಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಇತ್ತೀಚಿಗೆ ನಿವೃತ್ತಿಗೊಂಡ ಬಳಿಕ ಕೊಪ್ಪಳಕ್ಕೆ ಆಗಮಿಸಿದ ಏಜಾಜ್ ಹುಸೇನ್ ರವರಿಗೆ ನಗರದ ಪದಗಿ ಲೇಓಟ್ ನಲ್ಲಿರುವ ಹಿರಿಯ ಸಾಹಿತಿ ಪತ್ರಕರ್ತ ಮತ್ತು ಪ್ರಕಾಶಕ ಜಿ,ಎಸ್ ಗೋನಾಳ ರವರ ಬಸವ ಸದನ ನಿವಾಸ ದಲ್ಲಿ ಸನ್ಮಾನಿಸಿ ಶುಭ ಕೋರಿ ಅಭಿನಂದಿಸಲಾಯಿತು, ಏಜಾಜ್ ಹುಸೇನ್ ರವರ ಪ್ರಾಥಮಿಕ ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಕೊಪ್ಪಳದಲ್ಲಿ ಮುಗಿಸಿಕೊಂಡು ವಿವಿಧ ಇಲಾಖೆಯಲ್ಲಿ ದಕ್ಷ ಆಡಳಿತ ಸೇವೆ ಸಲ್ಲಿಸಿ ಮುನಿರಾಬಾದ್ ಡ್ಯಾಮಿನ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರಾಗಿ ಅತ್ಯುತ್ತಮ ಆಡಳಿತ ನೀಡಿ ನಂತರ ಬಳ್ಳಾರಿಯಲ್ಲಿ ಅಧಿಕಕ್ಷಕ ಅಭಿಯಂತರಾಗಿ ,ಮುಖ್ಯ ಅಭಿಯಂತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ನಂತರ ಉನ್ನತ ಬಡ್ತಿ ಹೊಂದಿ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಾಮಾನ್ಯ ಜನರ ,ಜನಪ್ರತಿನಿಧಿಗಳ ಮತ್ತು ಅಧಿಕಾರಿ ವರ್ಗದವರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಬಳಿಕ ಕೊಪ್ಪಳಕ್ಕೆ ಆಗಮಿಸಿದ ಈ ಸಂದರ್ಭದಲ್ಲಿ ಅವರನ್ನು ಜಿ,ಎಸ್ ಗೋನಾಳ ರವರ ವಿಶಾಲ ಪ್ರಕಾಶನ ಮತ್ತು ಸಿರಿಗನ್ನಡ ವೇದಿಕೆಯ ಸಂಘಟನೆಯ ಮೂಲಕ ಸನ್ಮಾನಿಸಿ ಶುಭ ಕೋರಿ ಅಭಿನಂದಿಸಲಾಯಿತು ,ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿ ಆಸಿಫ್, ಮಕ್ಕಳ ಸಾಹಿತಿ ಶ್ರೀನಿವಾಸ ಚಿತ್ರಗಾರ, ಯುವ ನ್ಯಾಯವಾದಿ ಮೇಘರಾಜರೆಡ್ಡಿ ಗೋನಾಳ್, ಮತ್ತು ಜಿ,ಎಸ್, ಗೋನಾಳ ರವರ ಪತ್ನಿ ಶ್ರೀಮತಿ ರತ್ನಮ್ಮ, ಜಿ ,ಗೋನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 