ನಿವೃತ್ತಿ ಆದ ಸಿಪಿಐ ಸುರೇಶ ಬಾಬು ಅವರಿಗೆ ಸತ್ಕಾರ

ನಿವೃತ್ತಿ ಆದ ಸಿಪಿಐ ಸುರೇಶ ಬಾಬು ಅವರಿಗೆ ಸತ್ಕಾರ Retired CPI Suresh Babu felicitated

ಗೋಕಾಕ 01 : ಪೋಲೀಸ್ ವೃತ್ತದ ಸಿಪಿಆಯ್ ಆಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿದ  ಸುರೇಶ್ ಬಾಬು ಅವರಿಗೆ ಕನ್ನಡ ಸೇನೆ ಕರ್ನಾಟಕ ಸಂಘಟನೆ ಗೋಕಾಕ ತಾಲೂಕು ಘಟಕದ ವತಿಯಿಂದ  ಮಂಗಳವಾರದಂದು  ಸನ್ಮಾನ ಮಾಡಿ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತಿ ಜೀವನಕ್ಕೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ  ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಕನ್ನಡ ಸೇನೆ ಗೋಕಾಕ ತಾಲೂಕು ಅಧ್ಯಕ್ಷರಾದ ಅಪ್ಪಾಸಾಬ ಮುಲ್ಲಾ, ಕನ್ನಡ ಸೇನೆ ಗೋಕಾಕ ತಾಲೂಕು ನಿರ್ದೇಶಕರು ಮತ್ತು ಗೋಕಾಕ ನಗರ ಬಿಜೆಪಿ  ಮುಖಂಡರಾದ ಸುರೇಶ್ ಪತ್ತಾರ, ಷರೀಫ್ ಕಬ್ಬೂರ (ಘಟಪ್ರಬಾ)  ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ರಾಜೇಶ್ವರಿ ವಡೆಯರ್  ,ಯುವ ಮುಖಂಡರಾದ ಮಲ್ಲು, ಅಂಬಲಿ, ಗೋಕಾಕ  ಮುಂತಾದವರು ಹಾಜರಿದ್ದರು.