ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ
Release of SF Siddan Gowda calendar
ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ
ಧಾರವಾಡ. 30 : 2025 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ದಿ: 29/01/2025 ರಂದು ಸಾಯಂಕಾಲ 600 ಘಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಜಿಲ್ಲಾ ಘಟಕ ಧಾರವಾಡದಲ್ಲಿ ಜರುಗಿತು. ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷ ಶಿವಾನಂದ ನಾಗೂರ ಮಾತನಾಡಿ ಲಿಂಗಾಯತ ನೌಕರರ ಸಂಘದ ರೂಪುರೇಷೆಗಳನ್ನು ತಿಳಿಸಿ ಎಲ್ಲರೂ ಸೇರಿ ಬಸವ ತತ್ವಗಳನ್ನು ಅನುಸೋಣ ಎಂದರು. ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ ಮಾಡಿ ಲಿಂಗಾಯತ ಸಮಾಜದ ನೌಕರರು ನೌಕರರಿಗೆ ಸ್ಪಂದಿಸುವುದರ ಜೊತೆಗೆ ಸಮಾಜದ ಸೇವೆಯನ್ನು ಸಹಿತವಾಗಿ ಮಾಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಇತರರನ್ನು ಸಹಿತವಾಗಿ ಸೇರಿಸಿಕೊಂಡು ಮೇಲು ಕೀಳು ಎನ್ನದೆ ಸಮಾಜದ ಕೆಲಸಗಳನ್ನು ಮಾಡೋಣ ಎಂದು ಹೇಳಿದರು. ಕೆ.ಎಫ್.ಜಾವೂರು ನಿರೂಪಿಸಿದರು, ಮಹೇಶ ಬಾಳಗಿ ಸ್ವಾಗತಿಸಿದರು. ಗುರು ತಿಗಡಿ ವಂದಿಸಿದರು. ಮಂಜುನಾಥ ಅಡವೇರ, ರಮೇಶ ಲಿಂಗದಾಳ, ಮಂಜುನಾಥ ಯಡಳ್ಳಿ, ಚಂದ್ರು ತಿಗಡಿ, ಗೀರೀಶ ಚೌಡಕಿ, ಬಿ ಆರ್ ಪಾಟೀಲ,ಆತ್ಮಾನಂದ ಗದ್ದಿಕೇರಿ. ಪಿ.ಬಿ. ಕುರಬೆಟ್ಟ್, ಎನ್. ಎಸ್. ಕಮ್ಮಾರ ಮತ್ತು ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 