ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ
Release of SF Siddan Gowda calendar
ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ
ಧಾರವಾಡ. 30 : 2025 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ದಿ: 29/01/2025 ರಂದು ಸಾಯಂಕಾಲ 600 ಘಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಜಿಲ್ಲಾ ಘಟಕ ಧಾರವಾಡದಲ್ಲಿ ಜರುಗಿತು. ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷ ಶಿವಾನಂದ ನಾಗೂರ ಮಾತನಾಡಿ ಲಿಂಗಾಯತ ನೌಕರರ ಸಂಘದ ರೂಪುರೇಷೆಗಳನ್ನು ತಿಳಿಸಿ ಎಲ್ಲರೂ ಸೇರಿ ಬಸವ ತತ್ವಗಳನ್ನು ಅನುಸೋಣ ಎಂದರು. ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ ಮಾಡಿ ಲಿಂಗಾಯತ ಸಮಾಜದ ನೌಕರರು ನೌಕರರಿಗೆ ಸ್ಪಂದಿಸುವುದರ ಜೊತೆಗೆ ಸಮಾಜದ ಸೇವೆಯನ್ನು ಸಹಿತವಾಗಿ ಮಾಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಇತರರನ್ನು ಸಹಿತವಾಗಿ ಸೇರಿಸಿಕೊಂಡು ಮೇಲು ಕೀಳು ಎನ್ನದೆ ಸಮಾಜದ ಕೆಲಸಗಳನ್ನು ಮಾಡೋಣ ಎಂದು ಹೇಳಿದರು. ಕೆ.ಎಫ್.ಜಾವೂರು ನಿರೂಪಿಸಿದರು, ಮಹೇಶ ಬಾಳಗಿ ಸ್ವಾಗತಿಸಿದರು. ಗುರು ತಿಗಡಿ ವಂದಿಸಿದರು. ಮಂಜುನಾಥ ಅಡವೇರ, ರಮೇಶ ಲಿಂಗದಾಳ, ಮಂಜುನಾಥ ಯಡಳ್ಳಿ, ಚಂದ್ರು ತಿಗಡಿ, ಗೀರೀಶ ಚೌಡಕಿ, ಬಿ ಆರ್ ಪಾಟೀಲ,ಆತ್ಮಾನಂದ ಗದ್ದಿಕೇರಿ. ಪಿ.ಬಿ. ಕುರಬೆಟ್ಟ್, ಎನ್. ಎಸ್. ಕಮ್ಮಾರ ಮತ್ತು ಇತರರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 