ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ
Release of SF Siddan Gowda calendar
ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ
ಧಾರವಾಡ. 30 : 2025 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ದಿ: 29/01/2025 ರಂದು ಸಾಯಂಕಾಲ 600 ಘಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಜಿಲ್ಲಾ ಘಟಕ ಧಾರವಾಡದಲ್ಲಿ ಜರುಗಿತು. ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷ ಶಿವಾನಂದ ನಾಗೂರ ಮಾತನಾಡಿ ಲಿಂಗಾಯತ ನೌಕರರ ಸಂಘದ ರೂಪುರೇಷೆಗಳನ್ನು ತಿಳಿಸಿ ಎಲ್ಲರೂ ಸೇರಿ ಬಸವ ತತ್ವಗಳನ್ನು ಅನುಸೋಣ ಎಂದರು. ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್ ಎಫ್ ಸಿದ್ದನಗೌಡರ ಕ್ಯಾಲೆಂಡರ್ ಬಿಡುಗಡೆ ಮಾಡಿ ಲಿಂಗಾಯತ ಸಮಾಜದ ನೌಕರರು ನೌಕರರಿಗೆ ಸ್ಪಂದಿಸುವುದರ ಜೊತೆಗೆ ಸಮಾಜದ ಸೇವೆಯನ್ನು ಸಹಿತವಾಗಿ ಮಾಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಇತರರನ್ನು ಸಹಿತವಾಗಿ ಸೇರಿಸಿಕೊಂಡು ಮೇಲು ಕೀಳು ಎನ್ನದೆ ಸಮಾಜದ ಕೆಲಸಗಳನ್ನು ಮಾಡೋಣ ಎಂದು ಹೇಳಿದರು. ಕೆ.ಎಫ್.ಜಾವೂರು ನಿರೂಪಿಸಿದರು, ಮಹೇಶ ಬಾಳಗಿ ಸ್ವಾಗತಿಸಿದರು. ಗುರು ತಿಗಡಿ ವಂದಿಸಿದರು. ಮಂಜುನಾಥ ಅಡವೇರ, ರಮೇಶ ಲಿಂಗದಾಳ, ಮಂಜುನಾಥ ಯಡಳ್ಳಿ, ಚಂದ್ರು ತಿಗಡಿ, ಗೀರೀಶ ಚೌಡಕಿ, ಬಿ ಆರ್ ಪಾಟೀಲ,ಆತ್ಮಾನಂದ ಗದ್ದಿಕೇರಿ. ಪಿ.ಬಿ. ಕುರಬೆಟ್ಟ್, ಎನ್. ಎಸ್. ಕಮ್ಮಾರ ಮತ್ತು ಇತರರು ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 