ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ : ರಾಯಣ್ಣನ ವಿಷಯಕ್ಕೆ ಅಭಿಮಾನಿಗಳ ಬಿಗಿ ಪಟ್ಟು
Rayanna statue installation: Fans' strong support for Rayanna's cause
ಮುಂಡಗೋಡ 18 : ತಾಲೂಕಿನ ಮುಖ್ಯ ರಸ್ತೆ ವಾರ್ಡಗಳಿಗೆ ನಾಮಫಲಕಗಳು ಹಾಗೂ ಮುಖ್ಯ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸುವ ಕುರಿತು ಮಂಗಳವಾರ ತಹಶೀಲ್ದಾರ್ರ ರಿಗೆ, ಲೋಕೋಪಯೋಗಿ ಇಲಾಖೆ ,ಪಟ್ಟಣ ಪಂಚಾಯತ್ ಹಾಗೂ ಅರಣ್ಯ ಇಲಾಖೆ ಗೆ ತಾಲೂಕಾ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ.ಯು ಅಭಿಮಾನಿ ಬಳಗವು ಮನವಿ ಅರ್ಿಸಿದರು ಮನವಿಯಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ರಸ್ತೆಯ ಆಂಜನೇಯ ದೇವಸ್ಥಾನದ ಹತ್ತಿರ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಹಾಗೂ ಅದನ್ನು ವೃತ್ತವಾಗಿ ಅಭಿವೃದ್ಧಿಪಡಿಸಬೇಕು. ತಾಲೂಕಿನ ಬಂಕಾಪುರ ರಸ್ತೆಗೆ ಹಳೆಯ ಕಾಲದಿಂದಲೂ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ರಸ್ತೆ ಎಂಬ ಹೆಸರಿದ್ದು.
ಈ ರಸ್ತೆಗೆ ಯಾವುದೇ ನಾಮಪಲಕಗಳಿಲ್ಲ. ಹುಬ್ಬಳ್ಳಿ-ಶಿರಸಿ ರಸ್ತೆಗೆ ಕಿತ್ತೂರು ರಾಣಿ ಚೆನ್ನಮ್ಮ ಎಂಬ ನಾಮಕರಣವು ಹಳೆಯ ಕಾಲದಿಂದಲೂ ಇದ್ದರೂ ಸಹ ಈವರೆಗೂ ಯಾವುದೇ ನಾಮಫಲಕಗಳು ಇಲ್ಲ! ತಾಲೂಕಿನ ಮುಖ್ಯ ರಸ್ತೆಗಳಿಗೆ ನಾಮಫಲಕಗಳನ್ನು ಹಾಕಿಸಿ ಹಾಗೂ ತಾಲೂಕಿನ ಮುಖ್ಯ ರಸ್ತೆಗಳ ಹೆಸರುಗಳು ಕ್ರಾಂತಿಯ ವೀರರ ಹೆಸರುಗಳಿದ್ದರೂ ಸಹ ಮುಖ್ಯ ರಸ್ತೆಗಳಲ್ಲಿ ಕ್ರಾಂತಿಯ ವೀರರ ಪ್ರತಿಮೆಗಳು ಇಲ್ಲದಿರುವುದು ಬೇಸರದ ಸಂಗತಿ.ದಯಮಾಡಿ ಮಾನ್ಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಮುಖ್ಯ ರಸ್ತೆಗಳಲ್ಲಿ ಕ್ರಾಂತಿಯ ವೀರರ ಪುತ್ಥಳಿಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸುತ್ತೇವೆ. ಈ ವೇಳೆಯಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸಂಸ್ಥಾಪಕ ಅಧ್ಯಕ್ಷರಾದ ಹುಬ್ಬಳ್ಳಿಯ ಸುರೇಶ್ ಗೋಕಾಕ್, ಅಶೋಕ್ ಹಾದಿಮನಿ ಮುಂಡಗೋಡಿನ ಅಯ್ಯಪ್ಪ ಭಜಂತ್ರಿ, ಪ್ರಕಾಶ್ ಹುದ್ಲಮನಿ , ಅರುಣ್ ಭಜಂತ್ರಿ,ಮಂಜುನಾಥ್ ಕುರುಬರ,ಮಾರುತಿ ರಾಮಗೇರಿ,ಮಂಜುನಾಥ್ ಸಾಗರ್ , ನವೀನ್ ಕೊಮರ್ಸಿಕೊಪ್ಪ, ರೇವಣ ಭಜಂತ್ರಿ, ಮಂಜುನಾಥ್ ಕೊಪ್ಪ,ಸಂಕೇತ್ ಗೌಡ್ರು, ಪವನ್ ಬಡಿಗೇರ್ ಹಾಗೂ ಇತರರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 