ರಾಯಣ್ಣ ಅಂದ್ರೆ ವ್ಯಕ್ತಿಯಲ್ಲ, ದೇಶದ ಒಂದು ಶಕ್ತಿ: ಕಾಂಗ್ರೆಸ್ ಮುಖಂಡ ಅಶ್ವಥ್ ವೈದ್ಯ
Rayanna is not an individual, but a force in the country: Congress leader Ashwath Vaidya
ಯರಗಟ್ಟಿ 22: ಸಮೀಪದ ಕೊಟೂರ ಶಿವಾಪೂರ ಗ್ರಾಮದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯನ್ನು ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ ರವರ ಸಹೋದರ ಅಶ್ವತ್ ವೈದ್ಯ ರವರು ಉದ್ಘಾಟನೆ ಮಾಡಿ ಮಾತನಾಡಿದರು.ಸಂಗೊಳ್ಳಿ ರಾಯಣ್ಣನ ಮೂರ್ತಿ ನೋಡಿದಾಗ ಅವರ ಪಾತ್ರದಲ್ಲಿ ಮಾಡಿದ ಚಲನಚಿತ್ರ ನೆನಪಿಗೆ ಬಂತು. ನಂದಗಡ ಗ್ರಾಮಕ್ಕೆ ಇಡೀ ಸಂಗೊಳ್ಳಿ ರಾಯಣ್ಣನ ಮಾಡಿದ ಸಾಧನೆ ಬಿತ್ತರಿಸುವ ಅನೇಕ ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿದೆ. ಮಹಾನ್ ನಾಯಕರನ್ನು ಪೂಜಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಮಹಾನ್ ವ್ಯಕ್ತಿಗಳ ಸೇವೆ ಸಲ್ಲಿಸೋದು ನಮ್ಮ ಪುಣ್ಯ.ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಪಾಲಿಸಿ ನಾವು ಜೀವನ ನಡಿಸೋಣ. ದೇಶಾಭಿಮಾನ ಸ್ವಾಭಿಮಾನ ಹಾಗೂ ಸ್ವಾಮಿನಿಷ್ಠೆಯೊಂದಿಗೆ ತಾಯಿ ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಸಂಗೊಳ್ಳಿ ರಾಯಣ್ಣ ಎಲ್ಲರಲ್ಲೂ ದೇಶಪ್ರೇಮ ಬೆಳೆಯಲು ಪ್ರೇರಣೆಯಾಗಿದ್ದಾರೆ.ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಹೋರಾಟ, ಶೌರ್ಯ ಯುವ ಪೀಳಿಗೆಗೂ ಮಾದರಿಯಾಗಬೇಕು ಎಂದರು.
ಶಿವಾಪುರದ ಜಡೆತೇಲೆ ಮರಳುಸಿದ್ಧ ಮಹಾಸ್ವಾಮಿಗಳು ಮಾತನಾಡಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನವರು ನಮಗೆ ಆದರ್ಶರಾಗಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಮ್ಮ ತಮ್ಮ ಜೀವನವನ್ನು ಸುಧಾರಿಸಿಕೊಳ್ಳಿ ಎಂದರು.ಈ ಸಂದರ್ಭದಲ್ಲಿ ಬೆಮೂಲ್ ನಿರ್ದೇಶಕ ಬೆಳಗಾವಿ ಹಾಗೂ ಯರಗಟ್ಟಿ ತಾಲೂಕಾ ಕುರುಬ ಸಂಘದ ಅಧ್ಯಕ್ಷ ಶಂಕರ ಇಟ್ನಾಳ, ಶಿವಾಪುರ ಗ್ರಾ. ಪ. ಅಧ್ಯಕ್ಷ ತವನಪ್ಪ ಟೋಪಣ್ಣವರ, ಪ್ರಕಾಶ ವಾಲಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಬಂಗಾರೆಪ್ಪ ಹರಳಿ, ಶಿವಾನಂದ ಕರಿಗೋನ್ನವರ, ಆರ್ ಕೆ ಪಟಾತ್, ಯಲ್ಲಪ್ಪ ನರಿ, ಮಹಾದೇವ ಮುರಗೋಡ, ನಂದಕುಮಾರ ಚಂದರಗಿ, ಶಿವಲಿಂಗಯ್ಯ ಮಠಪತಿ, ಲಕ್ಷ್ಮಣ ಚಂದರಗಿ, ಛಾಯಪ್ಪ ಹುಂಡೇಕಾರ, ಲಕ್ಷ್ಮಣ ಕುಂಟಿರ್ಪಗೊಳ, ಕಡಬಿ ಗ್ರಾ. ಪ. ಅಧ್ಯಕ್ಷ ಪ್ರಕಾಶ ಸುಣದೋಳಿ, ಪರಮೇಶಿ ಚಂದರಗಿ, ಹಾಗೂ ಹಾಲುಮತ ಸಮುದಾಯದ ಹಿರಿಯರು, ಯುವಕರು, ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 