ಮಜದೂರ ಯುನಿಯನ್ ಅಧ್ಯಕ್ಷರಾಗಿ ರವೀಂದ್ರ ಕುರಬರ ಆಯ್ಕೆ
Ravindra Kuraba elected as Mazdoor Union President
ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಸೈದಾಪುರ -ಸಮೀರವಾಡಿಯ ಗೋದಾವರಿ ಬಯೋರಿಫೈನರೀಸ್ ಸಮೀರವಾಡಿ ಮಜದೂರ ಯುನಿಯನ್ ಚುನಾವಣೆ 2025-27 ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳ ಚುನಾವಣೆ ಶುಕ್ರವಾರ ನಡೆಯಿತು. ಕಾರ್ಖಾನೆಯ ಸೆಕ್ಯೂರಿಟಿ ಆಫೀಸ್, ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ಜರುಗಿತು. ಅದರಲ್ಲಿ ಎಂಟು ಪದಾಧಿಕಾರಿಗಳು ಜಯಶಾಲಿ ಆಗಿದ್ದರು. ಅಧ್ಯಕ್ಷರಾಗಿ ರವೀಂದ್ರ ದತ್ತು ಕುರಬರ, ಕಾರ್ಯಾಧ್ಯಕ್ಷರಾಗಿ ಬಸಪ್ಪ ವೀರ್ಪ ಮೇಲಪ್ಪಗೋಳ, ಉಪಾಧ್ಯಕ್ಷರಾಗಿ ಪಾಂಡು ಕ. ಹಂಚಿನಾಳ, ರಾಜು ಅ. ಹಳಿಂಗಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಗನಗೌಡ ಭೀಮನಗೌಡ ಬಿರಾದಾರಪಾಟೀಲ, ಕಾರ್ಯದರ್ಶಿಯಾಗಿ ಚನ್ನಬಸಪ್ಪ ಮಹದೇವಪ್ಪ ಅಥಣಿ, ಸಹ ಕಾರ್ಯದರ್ಶಿಯಾಗಿ ನಿರುಪಾದಯ್ಯಾ ಈರಬಸಯ್ಯಾ ಕತ್ತಿ, ಕೋಶಾಧಿಕಾರಿಯಾಗಿ ಸಲೀಮಸಾಬ ಹಸನಸಾಬ ಮುಧೋಳ ಆಯ್ಕೆಯಾಗಿದ್ದಾರೆ. ಸಮೀರವಾಡಿ ಯುನಿಯನ್ ಚುನಾವಣಾ ಅಧಿಕಾರಿ ಸುನೀಲ ಅಕ್ಕತಂಗಿಹಾಳ ಫಲಿತಾಂಶ ಘೋಷಿಸಿದರು. ಗೋದಾವರಿ ಬಯೋರಿಫೈನರೀಸ್ ಲಿ., ಸಮೀರವಾಡಿಯಲ್ಲಿ ಎಲ್ಲ ಕಾರ್ಮಿಕರು ಪಟಾಕಿ ಮತ್ತು ಗುಲಾಲ ಮುಖಾಂತರ ವಿಜಯೋತ್ಸವ ಆಚರಿಸಿದರು. ಚುನಾವಣಾ ಪ್ರಕ್ರಿಯೇ ಶಾಂತ ರೀತಿಯಿಂದ ನಡೆಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 