ರಸ್ತೆ ಕಾಮಗಾರಿಗೆ ರಾಹುಲ್ ಜಾರಕಿಹೊಳಿ ಚಾಲನೆ

ರಸ್ತೆ ಕಾಮಗಾರಿಗೆ ರಾಹುಲ್ ಜಾರಕಿಹೊಳಿ ಚಾಲನೆ Rahul Jarakiholi drive for road works

         ಯಮಕನಮರಡಿ, 30 ; ಇವತ್ತು ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಅನುದಾನದಲ್ಲಿ ಸಚಿವರ ಸೂಚನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಅವರು ಯಮಕನಮರಡಿ ಮತ ಕ್ಷೇತ್ರದಲ್ಲಿ ಬರುವ 1) ಅರ್ಜುನ್ ವಾಡ್ ಗ್ರಾಮದಲ್ಲಿ 80 ಲಕ್ಷ ಸಿಸಿ ರಸ್ತೆ. 2) ಕುರ್ಣಿ ಗ್ರಾಮದಲ್ಲಿ 50 ಲಕ್ಷ ವೆಚ್ಚದ ಸಿಸಿ ರಸ್ತೆ. ಹಾಗೂ ಕುರಣಿ ಗ್ರಾಮದ ಸಿಸಿ ರಸ್ತೆ 30 ಲಕ್ಷ ಕುರುಣಿ ಗ್ರಾಮದ ಹೊಲದ ರಸ್ತೆ 57 ಲಕ್ಷ ವೆಚ್ಚದಲ್ಲಿ.ಒಟ್ಟು 2 ಕೋಟಿ 17 ಲಕ್ಷ ವೆಚ್ಚದಲ್ಲಿ ಊರಿನ ಗ್ರಾಮಸ್ಥರೊಂದಿಗೆ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಾಂತೇಶ್ ಮಗದುಮ್ ಸಚಿವರ ಆಪ್ತ ಸಹಾಯಕರಾದ ಶ್ರೀ ಪ್ರಕಾಶ್ ಬಸಾಪುರಿ ಹಾಗೂ ಜನಪ್ರತಿನಿಧಿಗಳು ಊರಿನ ಸಮಸ್ತ ಗುರು ಹಿರಿಯರು ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು.