ಮೋಡ ಬಿತ್ತನೆ ಗದಗನಲ್ಲಿ ರೆಡಾರ್ ಸ್ಥಾಪನೆ
ಗದಗ 01: ಗದಗ ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಸಹಾಯಕವಾಗುವ ದತ್ತಾಂಶ ಸಂಗ್ರಹಕ್ಕಾಗಿ ರೆಡಾರ್ ಕೇಂದ್ರ ಅಳವಡಿಸಲಾಗಿದೆ.
2018 ರ ಸೆಪ್ಟಂಬರ್ ರಲ್ಲಿ ಗದಗದಲ್ಲಿ ರೆಡಾರ್ ಕೇಂದ್ರ ಸ್ಥಾಪಿಸಿ ತುಂಗಭದ್ರಾ, ಮಲಪ್ರಭಾ ಜಲಾನಯನ ಪ್ರದೇಶಗಳಲ್ಲಿ ಮೋಡ ಬಿತ್ತನೆ ನಡೆಸಲಾಗಿತ್ತು. ಕನರ್ಾಟಕ ರಾಜ್ಯವು ದೇಶದಲ್ಲಿ ಎರಡನೇ ಶುಷ್ಕ ಹೊಂದಿರುವಂತ ರಾಜ್ಯವಾಗಿದ್ದು. ಕಳೆದ 14 ವರ್ಷಗಳಿಂದ ಅನುಯೋಜಿತ ಕೊರತೆ ಹಾಗೂ ಮಳೆಗಾಲ ಸಾಮಮನ್ಯವಾಗಿದೆ.
ಕಳೆದ ಸಾಲಿನಲ್ಲಿ ಸ್ವಲ್ಪ ಮೆಟ್ಟಿಗೆ ಮಳೆ ಆಗಿದ್ದರು ಸಹ ಬಹುಪಾಲು ತಾಲೂಕುಗಳ ಹಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ಆವರಿಸಿರುವ ಬರದ ಛಾಯೆಯಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆ ಕಡಿಮೆಯಾಗಿದೆ. ಮತ್ತು ವ್ಯವಸಾಯ ಚಟುವಟಿಕೆಗಳು ತೊಂದರೆಯಾಗಿದೆ. ಇದರ ನಿವಾರಣೆಗಾಗಿ ರಾಜ್ಯ ಸಕರ್ಾರ ಮೋಡ ಬಿತ್ತನೆಗೆ ಮುಂದಾಗಿದೆ. ಈ ಕಾರ್ಯಕ್ರಮಗಳ ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗಗಳಿಂದ ನಿರ್ವಹಿಸಲಿದೆ.
ಗದಗ ರೆಡಾರ ಕೇಂದ್ರದಿಂದ 200 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಮೋಡಗಳಲ್ಲಿ ನೀರಿನ ಸಾಂದ್ರತೆ ತೇವಾಂಶ ಗುರುತಿಸಿ ಅವುಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ಪಡೆಯಲು ಸಾಧನವಾಗಲಿದೆ. ತಜ್ಞರು ತಂಡವು ಈ ದತ್ತಾಂಶವನ್ನು ಆಧರಿಸಿ ಮೋಡ ಬಿತ್ತನೆ ಕಾಯರ್ಾಚರಣೆ ನಡೆಸುವ ಕುರಿತು ವಿಮಾನ ಫೈಲಟ್ಗೆ ಮಾಹಿತಿಯನ್ನು ನೀಡುತ್ತದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮಾಡುತ್ತದೆ. ವಿಮಾನ ಹಾರಾಟ ನಡೆಲಿದ್ದು ದತ್ತಾಂಶ ಆಧರಿಸಿ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ, ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
ಪ್ರಸ್ತುತ ಮೋಡ ಬಿತ್ತನೆ ಕಾಯರ್ಾಚರಣೆಯನ್ನು ಬೆಂಗಳೂರಿನ ಖ್ಯಾತಿ ಕ್ಲೈಮೆಟ್ ಮೊಡಿಫಿಕೇಶನ್ ಕಂಪನಿ ಅನುಷ್ಠಾನಗೊಳಿಸುತ್ತಿದ್ದು ಯಶಸ್ವಿ ಅನುಷ್ಟಾನಕ್ಕೆ ರಾಜ್ಯ ಸಕರ್ಾರ ತಜ್ಞರು ಮತ್ತು ಪರಿಣಿತ ವಿಜ್ಞಾನಿಗಳ ತಂತ್ರವನ್ನು ರಚಿಸಿದೆ. ಮೋಡ ಬಿತ್ತನೆ ರೆಡಾರ್ ಕೇಂದ್ರದ ಗದಗ ರೆಡಾರ್ ಕೇಂದ್ರದ ನಿವೃತ್ತ ಹವಮಾನ ತಜ್ಷ ಜಿ.ಆರ್.ನದಾಫ್ ಅವರು ತಿಳಿಸಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 