ರೇಬಿಸ್ ಸಾರ್ವಜನಿಕರಲ್ಲಿ ಇನ್ನೂ ಜಾಗೃತಿ ಮೂಡಿಸುವುದಗತ್ಯ: ಮಗದುಮ್
Public awareness about rabies still needs to be raised: Magadum
ಮಾಂಜರಿ 15: ರೇಬಿಸ್ ಓಷಧದಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮಾರಕವಾಗಲಿದೆ ಎಂದು ಡಾ.ಎನ್.ಎ. ಮಗದುಮ್ ಹೇಳಿದರು.
ಸೋಮವಾರ ರಂದು ಸಮೀಪದ ಅಂಕಲಿ ಗ್ರಾಮದ ಡಾ.ಎನ್.ಎ.ಮಗ್ಗುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರೇಬಿಸ್ ಓಷಧಿ ಕುರಿತು ಏರಿ್ಡಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇದರ ಬಗ್ಗೆ ಇನ್ನೂ ತಿಳುವಳಿಕೆ ಕಡಿಮೆಯಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಪ್ರಾಣಿಗಳ ಕಡಿತ, ಗೀರುಗಳು ಮತ್ತು ನಂತರ ಏನು ಮಾಡಬೇಕೆಂಬುದರ ಬಗ್ಗೆ ಮಾಹಿತಿ ಪ್ರತಿ ಮನೆಗೂ ತಲುಪಬೇಕು. ಕಾಲೇಜಿನ ಚಟುವಟಿಕೆಗಳ ಮೂಲಕ ನಿರಂತರ ಸಮುದಾಯ-ಆಧಾರಿತ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಡಾ.ದತ್ತಾ ಪಾಟೀಲ ಮತ್ತು ಡಾ.ಗೀರೀಶ್ ಕುಲಕರ್ಣಿ ಅವರು ರೇಬಿಸ್ ತಡೆಗಟ್ಟುವ ಕ್ರಮ, ಕಡಿತದ ನಂತರ ತಕ್ಷಣದ ಆರೈಕೆ, ತುರ್ತು ಚಿಕಿತ್ಸೆ ಮತ್ತು ಲಸಿಕೆಯ ಮಹತ್ವದ ಕುರಿತು ವಿವರವಾದ ಮಾಹಿತಿ ನೀಡಿದರು. ಪ್ರಾಚಾರ್ಯ ಡಾ.ಪ್ರಸನ್ನ ಸವಣೂರ, ಉಪಪ್ರಾಚಾರ್ಯ ಡಾ.ರಾಮಗೊಂಡ ಪಾಟೀಲ ಮಾರ್ಗದರ್ಶನ ಮಾಡಿದರು. ಡಾ.ವಿಶಾಲ್ ಚೌಗುಲೆ, ಯಾಕೂಬ್ ತಾಂಬಟ್, ಸುನಿಲ್ ಜನಾಜ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 