ರೇಬಿಸ್ ಸಾರ್ವಜನಿಕರಲ್ಲಿ ಇನ್ನೂ ಜಾಗೃತಿ ಮೂಡಿಸುವುದಗತ್ಯ: ಮಗದುಮ್
Public awareness about rabies still needs to be raised: Magadum
ಮಾಂಜರಿ 15: ರೇಬಿಸ್ ಓಷಧದಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮಾರಕವಾಗಲಿದೆ ಎಂದು ಡಾ.ಎನ್.ಎ. ಮಗದುಮ್ ಹೇಳಿದರು.
ಸೋಮವಾರ ರಂದು ಸಮೀಪದ ಅಂಕಲಿ ಗ್ರಾಮದ ಡಾ.ಎನ್.ಎ.ಮಗ್ಗುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರೇಬಿಸ್ ಓಷಧಿ ಕುರಿತು ಏರಿ್ಡಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇದರ ಬಗ್ಗೆ ಇನ್ನೂ ತಿಳುವಳಿಕೆ ಕಡಿಮೆಯಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಪ್ರಾಣಿಗಳ ಕಡಿತ, ಗೀರುಗಳು ಮತ್ತು ನಂತರ ಏನು ಮಾಡಬೇಕೆಂಬುದರ ಬಗ್ಗೆ ಮಾಹಿತಿ ಪ್ರತಿ ಮನೆಗೂ ತಲುಪಬೇಕು. ಕಾಲೇಜಿನ ಚಟುವಟಿಕೆಗಳ ಮೂಲಕ ನಿರಂತರ ಸಮುದಾಯ-ಆಧಾರಿತ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಡಾ.ದತ್ತಾ ಪಾಟೀಲ ಮತ್ತು ಡಾ.ಗೀರೀಶ್ ಕುಲಕರ್ಣಿ ಅವರು ರೇಬಿಸ್ ತಡೆಗಟ್ಟುವ ಕ್ರಮ, ಕಡಿತದ ನಂತರ ತಕ್ಷಣದ ಆರೈಕೆ, ತುರ್ತು ಚಿಕಿತ್ಸೆ ಮತ್ತು ಲಸಿಕೆಯ ಮಹತ್ವದ ಕುರಿತು ವಿವರವಾದ ಮಾಹಿತಿ ನೀಡಿದರು. ಪ್ರಾಚಾರ್ಯ ಡಾ.ಪ್ರಸನ್ನ ಸವಣೂರ, ಉಪಪ್ರಾಚಾರ್ಯ ಡಾ.ರಾಮಗೊಂಡ ಪಾಟೀಲ ಮಾರ್ಗದರ್ಶನ ಮಾಡಿದರು. ಡಾ.ವಿಶಾಲ್ ಚೌಗುಲೆ, ಯಾಕೂಬ್ ತಾಂಬಟ್, ಸುನಿಲ್ ಜನಾಜ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 