ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ
Protest by blocking the road, demanding to make way for the farm
ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ
ದೇವರಹಿಪ್ಪರಗಿ 25: ರೈತರು ತಮ್ಮ ಜಮೀನಿಗಳಿಗೆ ಹೋಗಲು ದಾರಿ ಬಿಡಿಸಿಕೊಡಲು ಆಗ್ರಹಿಸಿ ಯಾಳವಾರ ಹಾಗೂ ನಾಗರಾಳ ಡೋಣ ಗ್ರಾಮದ ರೈತರು ದೇವರಹಿಪ್ಪರಗಿ ತಾಳಿಕೋಟಿ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಯಾಳವಾರ ಹಾಗೂ ನಾಗರಾಳ ಡೋಣ ಗ್ರಾಮದ ರೈತರು ತಮ್ಮ ಜಮೀನಿಗಳಿಗೆ ಈಗ ಕೆಲ ಬಲಾಡ್ಯರು ದಾರಿಯನ್ನು ಬಿಡದೆ ಅಡ್ಡಪಡಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಹಾಗೂ ಸಿಪಿಐ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಹಲವಾರು ರೈತರು ಮಾತನಾಡಿ ಈಗಷ್ಟೇ ಮುಂಗಾರು ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ರೈತರು ತಮ್ಮ ಹೊಲಗಳಿಗೆ ಹೋಗಲು ದಾರಿ ಬಿಡಿಸಿಕೊಡಬೇಕೆಂದು ಒತ್ತಾಯಿಸಿದರು.
ರೈತರು ಹೊಲಗಳಿಗೆ ಹೋಗಲು ಕಾಲುದಾರಿ, ಬಂಡಿದಾರಿಗಳನ್ನು ಸಹ ಬಂದ್ ಮಾಡಲಾಗಿದೆ. ಇದರಿಂದ ಜಮೀನುಗಳು ಇದ್ದು ಸಹ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.ತಹಶೀಲ್ದಾರ್ ಅವರು ಬರುತ್ತೇನೆ ಎಂದು ಅನಿವಾರ್ಯ ಕಾರಣದಿಂದ ಬಾರದಕ್ಕೆ ಮಂಗಳವಾರ ಸಂಜೆ 5ಗಂಟೆಯ ನಂತರ ದೇವರಹಿಪ್ಪರಗಿ ತಾಳಿಕೋಟೆ ರಸ್ತೆ ಬಂದ್ ಮಾಡಿ ಮುಳ್ಳು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರುಗಳಾದ ವಿಜಯಕುಮಾರ ನಾಡಗೌಡ, ಸಂಗನಗೌಡ ತೆಗ್ಗಿನಮನಿ, ಸಂತೋಷ ಮುಸುಗುರಿ, ರಾಮನಗೌಡ ಉಮ್ಮಣ್ಣವರ, ಮಡಿವಾಳಪ್ಪ ಉಮ್ಮಣ್ಣವರ, ಬಸಯ್ಯ ಚರಂತಿಮಠ,ಬಸಯ್ಯ ಹಿರೇಮಠ, ಸೋಮಯ್ಯ ಹಿರೇಮಠ,ದೇವೇಂದ್ರ ಖಾನಾಪುರ, ಬಸನಗೌಡ ಬಿರಾದಾರ,ನಿಂಗನಗೌಡ ಖಾನಾಪುರ, ಭೀಮಣ್ಣ ಉಪ್ಪಾರ, ಬಸನಗೌಡ ದೊಡ್ಡಮನಿ, ರಮೇಶ್ ಗುರುಮಠ ಸೇರಿದಂತೆ ಎರಡು ಗ್ರಾಮದ ರೈತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 