ಶ್ರೀ ಗುರು ಶ್ರಿಶ ವಿಠಲ ದಾಸರ ಆರಾಧನೆ ಮಹೋತ್ಸವನ್ನು ಕಾರ್ಯಕ್ರಮ
Program for worshiping Shri Guru Shrisha Vithala Dasa
ಶ್ರೀ ಗುರು ಶ್ರಿಶ ವಿಠಲ ದಾಸರ ಆರಾಧನೆ ಮಹೋತ್ಸವನ್ನು ಕಾರ್ಯಕ್ರಮ
ಬಳ್ಳಾರಿ 01: ದಾಸ ಪರಂಪರೆಯಲ್ಲಿ ಬಹುದೊಡ್ಡ ಹೆಸರು ಮಾಡಿದ ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆಯನ್ನು ನಗರದ ಗಾಂಧಿನಗರ ಬಡಾವಣೆಯ ದ್ವಾರಕಾ ನಿವಾಸದಲ್ಲಿ ಸೋಮವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಜಹಾಗಿರದಾರ್ ಕುಟುಂಬದವರ ನೇತೃತ್ವದಲ್ಲಿ ಪ್ರತಿ ವರ್ಷ ನೆರವೇರಿಸಲಾಗುತ್ತಿರುವ ಶ್ರೀಗುರು ಶ್ರಿಶವಿಠಲ ದಾಸರ ಆರಾಧನೆ ಮಹೋತ್ಸವನ್ನು ಆಚರಿಸಲಾಯಿತು. ಬೆಳಿಗ್ಗೆ ವಿಶೇಷ ಪೂಜೆ, ಅಲಂಕಾರ, ಮಹಾನೈವೇದ್ಯ, ದಾಸರ ತಂಬೂರಿಗೆ ವಿಶೇಷ ಪೂಜೆ, ಅಲಂಕಾರ, ಮಹಾ ಮಂಗಳಾರತಿ, ವಿವಿಧ ಪಂಡಿತರಿಂದ ವಿಶೇಷ ಉಪನ್ಯಾಸ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಂತರ ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ದಾಸವಾಣಿ ಕಾರ್ಯಕ್ರಮ: ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆ ಮಹೋತ್ಸವ ನಿಮಿತ್ತ ಸಂಜೆ ದಾಸ ವಾಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ಕಲಾವಿದ ಶ್ರೀ ಸುಜಯಿಂದ್ರ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಂಜಿಕೆನ್ಯಾತಕಯ್ಯ, ಕರೆದರೆ ಬರ ಬಾರದೇ ಗುರುರಾಜನೇ, ಏಳುಬೆಟ್ಟದ ಮೇಲೆ, ಎದ್ದು ಬರುತಾರೆ ನೋಡೇ, ಯಾದವ್ ನಿ ಬಾ ಸೇರಿದಂತೆ ವಿವಿಧ ಗೀತೆಗಳನ್ನು ಪ್ರಸ್ತುತ ಪಡಿಸಿ ನೆರೆದ ಸಾವಿರಾರು ಪ್ರೇಕ್ಷಕರಿಂದ ಚಪ್ಪಳೆ ಗಿಟ್ಟಿಸಿಕೊಂಡರು. ಧಾರವಾಡದ ಶ್ರೀಹರಿ ದಿಗ್ಗಾವಿ ತಬಲಾ, ಮೋಹನ್ ಕುಲಕರ್ಣಿ ಹಾರ್ಮೋನಿಯಂ, ಅನಿಲ್ ಶಾಖಾಪುರ್ ತಾಳವಾದನ ಸಾಥ್ ನೀಡಿದರು. ಕಲಾವಿದರಾದ ಜಯತೀರ್ಥ ಜಹಗಿರ ದಾರ್ ಪ್ರಾಸ್ತಾವಿಕ ಮಾತನಾಡಿದರು. ವಿಭಾ ಕುಲಕರ್ಣಿ ಪ್ರಾರ್ಥಿಸಿದರು. ಟಿ.ಗುರುರಾಜ್ ಆಚಾರ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 