ಕನ್ನಡಪರ ಹೋರಾಟಗಾರ ಶಂಕರ ಹೂಗಾರರಿಗೆ ಕನ್ನಡ ನುಡಿಶ್ರೀ ಪ್ರಶಸ್ತಿಗೆ ಆಯ್ಕೆ

ಕನ್ನಡಪರ ಹೋರಾಟಗಾರ ಶಂಕರ ಹೂಗಾರರಿಗೆ ಕನ್ನಡ ನುಡಿಶ್ರೀ ಪ್ರಶಸ್ತಿಗೆ ಆಯ್ಕೆ  Pro-Kannada activist Shankara Hoogara selected for Kannada Nudishri Award

ಯಲಬುರ್ಗಾ  28: ಕನ್ನಡಪರ ಹೋರಾಟಗಾರರು,ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯಧ್ಯಕ್ಷರು ಆಗಿರುವ ತಾಲೂಕಿನ ಕಲ್ಲೂರು ಗ್ರಾಮದ ಶಂಕರ ಹೂಗಾರ ಅವರಿಗೆ ಕನ್ನಡ ನುಡಿಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.ಅಖಂಡ ಕರ್ನಾಟಕ ಏಕೀರಣ ಮತ್ತು ಭಾರತ ಸ್ವಾತಂತ್ಯ ಸಂಗ್ರಾಮ  ಮುಂಚೂಣಿಯಲ್ಲಿದ್ದು,ನಾಗನೂರು ಸ್ವಾಮೀಗಳು ಎಂದೇ ಗಡಿಭಾಗ ಬೆಳಗಾವಿಯಲ್ಲಿ ಹೆಸರು ಪಡೆದಿರುವ ರುದ್ರಾಕ್ಷಿಮಠವು ನಾಡಿನ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ,ಸಾಹಿತ್ಯಿಕ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತ ಬಂದಿದೆ. ಈ ನಿಟ್ಟಿನಲ್ಲಿ ಇದೇ ಡಿಸೆಂಬರ 6 ರಂದು ಬೆಳಗಾವಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಗಾಗಿ ಹೋರಾಟಗಾರರನ್ನು ಗುರ್ತಿಸಿ ರುದ್ರಾಕ್ಷಿಮಠದಿಂದ ಕೊಡಮಾಡುವ ಕನ್ನಡ ನುಡಿಶ್ರೀ ಪ್ರಶಸ್ತಿಗೆ ತಾಲೂಕಿನ ಕಲ್ಲೂರು ಗ್ರಾಮದವರೇ ಆಗಿರುವ ಬೆಂಗಳೂರಿನಲ್ಲಿರುವ ಕನ್ನಡಪರ ಹೋರಾಟಗಾರರು,ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯಧ್ಯಕ್ಷ ಶಂಕರ ಹೂಗಾರ ಅವರಿಗೆ ಕನ್ನಡ ನುಡಿಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಬೆಳಗಾವಿಯ ನಾಗನುರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮಿಜಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.