ಪ್ರಧಾನ ಮಂತ್ರಿ ಯೋಜನೆಗಳು : ಚಿತ್ರ ಕಲೆ ಸ್ಪರ್ಧೆ

ಪ್ರಧಾನ ಮಂತ್ರಿ ಯೋಜನೆಗಳು : ಚಿತ್ರ ಕಲೆ ಸ್ಪರ್ಧೆ Prime Minister's Schemes: Art Competition

 ಗದಗ 30: ನಗರದ ಪ್ರತಿಷ್ಠಿತ ಕೆ. ಎಲ್‌. ಇ.ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗದಗದಲ್ಲಿ,ಎನ್‌. ಎಸ್‌. ಎಸ್ ಘಟಕದ ವತಿಯಿಂದ ಇತ್ತೀಚಿಗೆ ಪ್ರಧಾನ ಮಂತ್ರಿ ಯೋಜನೆಗಳು ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಚಿತ್ರ ಕಲೆ ಸ್ಪರ್ಧೆಯನ್ನು ಸೋರಟೂರು ಗ್ರಾಮದ ತೋಂಟದಾರ್ಯ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿತ್ತು.ಪ್ರಧಾನ ಮಂತ್ರಿ ಯೋಜನೆಬಗ್ಗೆ ಅರಿವು ಮೂಡಿಸಲು ಮತ್ತು ಮಾಹಿತಿಯನ್ನು ನೀಡಲು ಎನ್‌. ಎಸ್‌. ಎಸ್‌. ತಂಡಗಳು ಈ ಸ್ಪರ್ಧೆಯನ್ನು ಶಾಲಾ ಮಕ್ಕಳಿಗೆ ನೇಡೆಸಿದರು,ಪ್ರಶಸ್ತಿ ವಿಜೇತರು ಈ ಕೆಳಗಿನಂತಿದ್ದಾರೆ:  ಪ್ರಥಮ ಬಹುಮಾನ : ಫಜ್ರಾನ ಸಂಶಿ ದ್ವಿತೀಯ ಬಹುಮಾನ : ಕುಮಾರ. ಪ್ರದೀಪ ಲಮಾಣಿ ತೃತೀಯ ಬಹುಮಾನ : ಕುಮಾರಿ. ಮುಸ್ಕಾನ ಬಾಬುಖಾನವರ ಆ ಶಾಲೆಯ ಶಿಕ್ಷಕರು ತೀರ​‍್ುಗಾರರಾಗಿ ಉಪಸ್ಥಿತರಿದ್ದರು, ಎನ್‌. ಎಸ್‌. ಎಸ್‌. ಕಾರ್ಯಕ್ರಮ ಅಧಿಕಾರಿ ಪ್ರೊ. ವಾಗೀಶ್ ಜಿ. ರೇಶ್ಮಿ, ಎನ್‌. ಎಸ್‌. ಎಸ್ ಘಟಕದ ಕಾರ್ಯನಿರ್ವಾಹಕರಾದ ಕುಮಾರಿ. ನೀಲಮ್ಮ ಸೀತಾರಳ್ಳಿ ಕುಮಾರ. ಆಕಾಶ ಕಳಗಣ್ಣನವರ, ಎನ್‌. ಎಸ್‌. ಎಸ್‌. ತಂಡಗಳ ನಾಯಕರು ಕುಮಾರ. ಮಹಾದೇವಪ್ಪ ಬೊಳನವರ, ಕುಮಾರ. ಪಕ್ಕೀರೇಶ ಒಂಟಿ ಮತ್ತು ಎನ್‌. ಎಸ್‌. ಎಸ್‌. ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.