ಗುತ್ತಿಗೆದಾರ ಸಂಘದ ಪೂರ್ವಭಾವಿ ಸಭೆ
ಮುದ್ದೇಬಿಹಾಳ, 06: ಇಂದು ದೇಶದಲ್ಲಿ ಉತ್ತರ ಭಾರತಕ್ಕೆ, ರಾಜ್ಯದಲ್ಲಿ ದಕ್ಷೀಣ ಭಾಗಕ್ಕೆ ಸೀಮಿತವಾಗಿ ರಾಜಕೀಯ ಪ್ರಾರಂಭಗೊಂಡಿದೆ ಆದರೇ ದಕ್ಷೀಣ ಭಾರತ ಉತ್ತರ ಕರ್ನಾಟಕ ಭಾಗವು ಸಂಪೂರ್ಣ ನಿರ್ಲಕ್ಷಕ್ಕೋಳಗಾಗಿದೆ ಎಂದರೆ ಕಾರಣ ಗುತ್ತಿಗೆದಾರರು ಯಾವೂದೇ ಪಕ್ಷಕ್ಕೆ ಸೀಮಿತಗೊಳ್ಳದೇ ಗುತ್ತಿಗೆದಾರರ ಸಮಸ್ಯೆ ಪರಿಹರಿಸಿಕೊಳ್ಳಬೇಕಾದರೇ ಸಂಘದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಶಕ್ತಿ ಬಲಪಡಿಸಲು ಶ್ರಮಿಸಬೇಕು ಅಂದಾಗ ಮಾತ್ರ ಯಾವೂದೇ ಸರಕಾರವಿರಲಿ ನ್ಯಾಯ ಪಡೆದುಕೊಳ್ಳಲು ಸಾಧ್ಯ ಎಂದು ಮುಖಂಡ ವೆಂಕನಗೌಡ ಪಾಟೀಲ ಹೇಳಿದರು. ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಭವನ ದಲ್ಲಿ ಬುಧವಾರ ಸಾಯಂಕಾಲ ಹಮ್ಮಿಕೊಂಡಿದ್ದ ಗುತ್ತಿಗೆದಾರ ಸಂಘದ ಪೂರ್ವಭಾವಿ ಸಭೆಯಲ್ಲಿ ಬಾಗವಹಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ರಾಜ್ಯದಲ್ಲಿ ಸಾವಿರಾದ ಸರಕಾರದ ಕೆಲಸವನ್ಬು ಗುತ್ತಿಗೆ ಪಡೆದ ಕೆಲಸ ಮಾಡಿದರೂ ಕಳೆದ ಎರಡು ಮೂರು ವರ್ಷಗಳಿಂದ ಕೆಲಸ ಮಾಡಿದ ಬಾಕಿ ಹಣ ಪಾವತಿ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರವಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗತೊಡಗಿವೆ. ರಾಜ್ಯದಲ್ಲಿ ಆಡಳಿತ ಸರಕಾರ ಪಕ್ಷ, ವಿರೋಧ ಪಕ್ಷದವರು ತಮ್ಮ ತಮ್ಮ ರಾಜಕೀಯ ಅಧಿಕಾರಕ್ಕಾಗಿ ಪೈಪೋಟಿ ಯಲ್ಲಿ ತೊಡಗಿದ್ದಾರೆ ವಿನಃ ಗುತ್ತಿಗೆದಾರರ ಸಮಸ್ಯೆ ಬಗೆಹರಿಸುವಲ್ಲಿ ಯಾವ ಪಕ್ಷದವರೂ ಮನಸ್ಸು ಮಾಡುತ್ತಿಲ್ಲ ಕಾರಣ ರಾಜ್ಯದಾಧ್ಯಂತ ಸಂಘಟನಾ ಶಕ್ತಿ ಹೆಚ್ಚಿಸಿ ಸರಕಾರದವಿರುದ್ದ ಉಗ್ರ ಹೋರಾಟ ಕೈಗೊಂಡು ಸರಕಾರದ ಕಣ್ಣು ತೆರೆಸಬೇಕು ಎಂದರು. ಈ ವೇಳೆ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅರುಣ ಮಠ ಅವರು ಮಾತನಾಡಿ ಕಳೆದ ಮೂರು ವರ್ಷಗಳಿಂದ ಸರಕಾರದಿಂದ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೊಳಿಸಿಲ್ಲ ಕಾರಣ ಇದೇ ದಿ 14 ರಂದು ವಿಜಯಪುರ ನಗರದಲ್ಲಿ ಜಿಲ್ಲಾ ಗುತ್ತಿಗೆದಾರ ಸಂಘಟದಿಂದ ಸರಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತಿದೆ. ನಮ್ಮ ಹೋರಾಟ ಯಾವೂದೇ ಸರಕಾರದ, ಪಕ್ಷದ, ಶಾಸಕರ, ಮಂತ್ರಿಗಳ ವಿರುದ್ಧವಾಗಿ ಹೋರಾಟ ನಡೆಸುತ್ತಿಲ್ಲ, ರಾಜ್ಯದ ಗುತ್ತಿಗೆದಾರರು ಬ್ಯಾಂಕನಲ್ಲಿ ಸಾಲ ಪಡೆದು, ಹೋರ ಸಾಲ ಪಡೆದು ಗುತ್ತಿಗೆ ಪಡೆದ ಕಾಮಗಾರಿಗಳನ್ನು ಮಾಡಿದ್ದೇವೆ. ಸರಕಾರದ ಅಧಿಕಾರಿಗಳು ಸಮರ್ಕವಾಗಿ ನಮಗೆ ಸ್ಪಂದಿಸುತ್ತಿಲ್ಲ ಬಾಕಿ ಹಣ ಪಾವತಿ ಮಾಡುತ್ತಿಲ್ಲ ಇದರಿಂದ ಗುತ್ತಿಗೆದಾರರು ಸೇರಿದಂತೆ ಸಾವಿರಾರು ಜನ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ ಕಾರಣ ನಮ್ಮಗೆ ನ್ಯಾಯ ನೀಡಿ ಎಂದರು. ತಾಲೂಕಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಅವರು ಮಾತನಾಡಿ ಗುತ್ತಿಗೆದಾರರು ಯಾವ ಜಾತಿ ಪಕ್ಷಕ್ಕೆ ಸೀಮೀತವಾದವರಲ್ಲ ಯಾರೆ ಅಧಿಕಾರದಲ್ಲಿರೂ ಸಹ ಟೆಂಡೆರ ಮೂಲಕ ಕಾಮಗಾರಿ ಪಡೆದ ಕೆಲಸ ಮಾಡುತ್ತೇವೆ. ಜಿಲ್ಲಾ ಗುತ್ತಿಗೆದಾರರು ಸಂಘದ ಬಲವರ್ಧನೆಗೆ ಪ್ರಾಮಾಣಿಕವಾಗಿ ಒಗ್ಗಟ್ಟು ಪಪ್ರದರ್ಶಿಸಬೇಕು ಜತೆಗೆ ಒಂದು ಕೋಟಿಯ ಕಾಮಗಾರಿಗೆ ಆಯಾ ತಾಲೂಕಿನ ಜನರಿಗೆ ಅವಕಾಶ ನೀಡುವಂತೆ ಮಾಡಿದರೇ ಅಲ್ಲಿಯ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರು ಕೆಲಸ ಮಾಡಿ ಜೀವನ ನಡೆಸಿಕೊಂಡು ಹೋಗುತ್ತಾರೆ. ಸಧ್ಯ ವಿಜಯಪುರ ನಗರದಲ್ಲಿ ಜಿಲ್ಲಾ ಹೋರಾಟಕ್ಕೆ ತಾಲೂಕಿನಿಂದು ಸುಮಾರು 500 ಜನ ಗುತ್ತಿಗೆದಾರರು, ಕಾರ್ಮಿಕರನ್ನು ಕರೆತರಲಾಗುವುದು ಎಂದರು ಗುತ್ತಿಗೆದಾರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಅರುಣ ಮಠ, ಜಿಲ್ಲಾ ಆದ್ಯಕ್ಷ ಸಿ ಅರ್ ರೂಢಗಿ, ಕಾರ್ಯದರ್ಶ ಎಂ ಪಟ್ಟಣಶೇಟ್ಟಿ, ಎಸ್ ಐ. ಡೋರಣಮಡ, ಆರ್ ಎಮ್ ಮಾವಿನಗಿಡ, ಜಯಂತ ಕೊಲ್ಲೂರ, ಅರ್ ಬಿ ಅಸ್ಕಿ, ಸುಜಿತ್ ಬಿಂಜಲಭಾವಿ, ಮೋಹನ ರಾಠೋಡ, ಗುತ್ತಿಗೆದಾರರ ಸಂಘದ ತಾಲೂಕಾ ಅಧ್ಯಕ್ಷ ಸುರೇಶಗೌಡ ಪಾಟೀಲ, ಮುತ್ತಿನಶೆಟ್ಟಿ ಗೂಳಿ, ಯಲ್ಲಪ್ಪ ಚಲವಾದಿ, ರುದ್ರ ಗೌಡ ಅಂಗಡಗೇರಿ ಸೇರಿದಂತೆ ಹಲವರು ಇದ್ದರು