38 ವರ್ಷಗಳ ಬಳಿಕ ಮುಸ್ಲಿಂ ಪ್ರತಿನಿಧಿಯಾಗಿ ಆಯ್ಕೆ: ಪ್ರೀರಾ ಖಾದಿ

38 ವರ್ಷಗಳ ಬಳಿಕ ಮುಸ್ಲಿಂ ಪ್ರತಿನಿಧಿಯಾಗಿ ಆಯ್ಕೆ: ಪ್ರೀರಾ ಖಾದಿ Preera Khadi elected as Muslim representative after 38 years

ಲೋಕದರ್ಶನ ವರದಿ

ಜಮಖಂಡಿ 8 : ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ನೂತನ ಅಧ್ಯಕ್ಷರಾಗಿ ಪ್ರೀರಾ ಖಾದ್ರಿ ಮತ್ತು ಮಾರುತಿ ಮಾನೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಪ್ರೀರಾ ಖಾದ್ರಿ ಮಾತನಾಡಿ, 38 ವರ್ಷಗಳ ಬಳಿಕ ಮುಸ್ಲಿಂ ಸಮುದಾಯದ ಪ್ರತಿನಿಧಿಯಾಗಿ ನಾನು ಅಧ್ಯಕ್ಷರಾಗಿದ್ದೇನೆ. ನಮ್ಮ ನೂತನ ಆಡಳಿತ ಮಂಡಳಿಯವರು ಬ್ಯಾಂಕಿನ ಸೇವೆಯನ್ನು ಮತ್ತು ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತೇನೆ. ಉನ್ನತ ಮಟ್ಟಕ್ಕೆ ಬ್ಯಾಂಕ್ ಅಭಿವೃದ್ದಿಗೆ ಮಾಡಲು ಬದ್ಧವಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ರಾಹುಲ ಕಲೂತಿ, ಸುಶೀಲಕುಮಾರ ಬೆಳಗಲಿ, ಎಸ್ಪಿ ನೀಲೆ, ಸಂತೋಷ ಬೋಸಲೆ, ಮುಕುಬುಲ್ ಅಥಿಕರ, ಫಕೀರಸಾಬ್ ಭಗವಾನ, ಅಪ್ಪಸಾಬ ಮನಗೂಳಿ, ಸಾಧಿಕ್ ಪಂಡಾರಿ ಮತ್ತು ಗಫುರ್ ಪಾರ್ಥನಳ್ಳಿ ಸೇರಿದಂತೆ ಅನೇಕರು ಇದ್ದರು.ಪೋಟೋ : ಜಮಖಂಡಿ ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ನೂತನ ಅಧ್ಯಕ್ಷರಾಗಿ ಪ್ರೀರಾ ಖಾದ್ರಿ ಮತ್ತು ಮಾರುತಿ ಮಾನೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.