ರಾಜ್ಯದ ಎಲ್ಲಾ ಶಾಸಕರಲ್ಲಿ ಪ್ರಕಾಶ್ ಕೋಳಿವಾಡ್ ಮಾದರಿ ಶಾಸಕ: ಶಿವಾನಂದ್ ಪಾಟೀಲ್‌

Prakash Koliwad is a model MLA among all MLAs in the state: Shivanand Patil

ರಾಜ್ಯದ ಎಲ್ಲಾ ಶಾಸಕರಲ್ಲಿ ಪ್ರಕಾಶ್ ಕೋಳಿವಾಡ್ ಮಾದರಿ ಶಾಸಕ: ಶಿವಾನಂದ್ ಪಾಟೀಲ್‌

ರಾಣಿಬೆನ್ನೂರ   08: ಸ್ಥಳೀಯ ಶಾಸಕರ ಅನುದಾನದ 10 ಕೋಟಿ ರೂಗಳನ್ನು ಶೈಕ್ಷಣಿಕ ರಂಗಕ್ಕೆ ಮೀಸಲಿಡುವ ಮೂಲಕ ಡಿಜಿಟಲ್ ಕ್ರಾಂತಿಗೆ ಕಾರಣರಾಗಿರುವ ಸ್ಥಳೀಯ ಶಾಸಕ ಪ್ರಕಾಶ್ ಕೋಳಿವಾಡ್‌ರವರು ರಾಜ್ಯದ ಎಲ್ಲಾ ಶಾಸಕರುಗಳಿಗೂ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ಹೇಳಿದರು.  

ಅವರು ಸೋಮವಾರ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಸ್ಥಳೀಯ ಪಿಕೆಕೆ ಇನಿಷಿಯೇಟಿವ್ಸ್‌ ಸಹಯೋಗದಲ್ಲಿ ಏರಿ​‍್ಡಸಿದ್ದ ಡಿಜಿಟಲ್ ಲೈಬ್ರರಿಯನ್ನು  ಲೋಕಾರೆ​‍್ಣ ಮಾಡಿ  ಮಾತನಾಡಿದರು.  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಾಣೆಬೆನ್ನೂರುಕ್ಷೇತ್ರದ ಪದವೀಧರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ಈಗಾಗಲೇ ಡಿಜಿಟಲ್ ಲೈಬ್ರರಿಗಳನ್ನು ಕ್ಷೇತ್ರದ 28 ಗ್ರಾಂಪಗಳಲ್ಲೂ ಉದ್ಘಾಟಿಸಲು ಶಾಸಕರು ಮುಂದಾಗಿರುವುದು ಶ್ಲಾಘನೀಯಕಾರ್ಯವಾಗಿದೆಎಂದರು.ದೇಶದಲ್ಲಿಯೇಅಪರೂಪವಾಗಿರುವಡಿಜಿಟಲ್ ಶೈಕ್ಷಣಿಕಕ್ರಾಂತಿಯು ವಿಶ್ವದಾಖಲೆ ಹೊಂದಲಿದೆಎಂದು ಸ್ವತಹ ಕೋಳಿವಾಡ ರವರು ಹೇಳಿರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿಯಾಗಿದೆ .ಇವರ ಮಾರ್ಗದರ್ಶನಎಲ್ಲಾಶಾಸಕರಿಗೂ ಮಾದರಿಯಾಗಲಿ ಎಂದರು. 

ಜಗತ್ತು ವೈಜ್ಞಾನಿಕವಾಗಿ ಮುಂದುವರೆಯುತ್ತಿದ್ದು, ಅದಕ್ಕೆತಕ್ಕಂತೆ ವ್ಯವಸ್ಥೆ ಬದಲಾವಣೆ ಮಾಡಬೇಕು. ಪ್ರಸ್ತುತ ದಿನಗಳಲ್ಲಿ ಜಗತ್ತಿನಾದ್ಯಂತಕಂಪ್ಯೂಟರ್‌ಕ್ಷೇತ್ರದ ಪರಿಣಿತರೇಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.ದೇಶದಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ತಂತ್ರಜ್ಞಾನಕ್ಷೇತ್ರದಲ್ಲಿಕರ್ನಾಟಕ ಮುಂಚೂಣೆಯಲ್ಲಿದೆ.ರಾಜ್ಯದಲ್ಲಿ ಅನೇಕ ಸಿಎಂಗಳು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.ಸಮವಸ್ತ್ರ, ಬಿಸಿಯೂಟ, ಸೈಕಲ್, ಬಸ್ ಪಾಸ್ನಂತಹ ಸೌಲಭ್ಯ ಕಲ್ಪಿಸಿದರು.ರಾಮಕೃಷ್ಣ ಹೆಗಡೆಅವರು ಮಕ್ಕಳಿಗೆ ಸಮವಸ್ತೊ ನೀಡುವ ವ್ಯವಸ್ಥೆಜಾರಿಗೆತಂದು ಮಾದರಿಯಾದರುಎಂದರುಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ.ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಗ್ರಾಪಂನಲ್ಲಿಡಿಜಿಟಲ್‌ಗ್ರಂಥಾಲಯ ಮಾಡಲಾಗುವುದು. ನನ್ನಅನುದಾನದಐದು ವರ್ಷಗಳಲ್ಲಿ  10ಕೋಟಿ ರೂಗಳನ್ನು ತೆಗೆದಿರಿಸಿ ಈ ಕೆಲಸ ಹಮ್ಮಿಕೊಂಡಿದ್ದೇನೆ. ಇದರಿಂದತಾಲೂಕಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮರೀತಿಯಲ್ಲಿತಯಾರಾಗಲು ಸಹಕಾರಿಯಾಗುತ್ತದೆಎಂದರು.ಜಿಲ್ಲಾಧಿಕಾರಿಡಾ.ವಿಜಯಕುಮಾರದಾನಮ್ಮನವರ, ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ಜಿಪಂ ಸಿಇಓ ರುಚಿ ಬಿಂದಲ್, ಎಸ್ ಪಿ ಅಂಶುಕುಮಾರ, ಪಿಕೆಕೆ ಇನಿಷಿಯೇಟಿವ್ಸ್‌ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ತಹಸೀಲ್ದಾರ ಆರ್‌ಎಚ್ ಭಾಗವಾನ್, ಪ್ರಾಚಾರ್ಯರವಿಕುಮಾರ ನಾಯಕ, ನಗರಸಭಾ ಸದಸ್ಯರಾದ ಜಯಶ್ರೀ ಪಿಸೆ, ಚಂದ್ರಕಲಾ ಬಿಷ್ಟಣ್ಣನವರ, ಇರ್ಫಾನ್ ದಿಡಗೂರ, ಸೇರಿದಂತೆಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತಿತರರು ಇದ್ದರು.