ಗ್ರಾಮೀಣ ರೈತರಿಗೆ ಬಲ: ಹುನಗುಂದದಲ್ಲಿ ಕಾಮಗಾರಿಗೆ ಚಾಲನೆ

ಗ್ರಾಮೀಣ ರೈತರಿಗೆ ಬಲ: ಹುನಗುಂದದಲ್ಲಿ ಕಾಮಗಾರಿಗೆ ಚಾಲನೆ Power to rural farmers: Work begins in Hunagunda

 

 ಮುಂಡಗೋಡ 24: ತಾಲೂಕಿನ ಹುನಗುಂದ ಗ್ರಾಮದ ಶ್ರೀ ವೀರೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಮಂಗಳವಾರ ನೂತನ ಗೋದಾಮು ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಗೆ  ಚಾಲನೆ ನೀಡಲಾಯಿತು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌.ಕೆ.ವಿ.ವೈ) ಅಡಿಯಲ್ಲಿ ಮಂಜೂರಾದ ಈ ಕಾಮಗಾರಿಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ಮಾತನಾಡಿದ ಶಾಸಕ ಶಿವರಾಮ್  ಹೆಬ್ಬಾರ್ ಅವರು, “ಗ್ರಾಮೀಣ ರೈತರು ದಶಕಗಳಿಂದ ಕಂಡಿದ್ದ ಕನಸು ಇದೀಗ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಈ ಗೋದಾಮು ಹಾಗೂ ಕಟ್ಟಡವು ರೈತರಿಗೆ ಆರ್ಥಿಕ ಭದ್ರತೆ ನೀಡುವ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದೆ” ಎಂದು ಹೇಳಿದರು.