ತಿಮ್ಮಕ್ಕ ನೆನಪಿನಲ್ಲಿ ಸಸಿ ನೆಟ್ಟು ನಂತರ ಸಂತಾಪ

ತಿಮ್ಮಕ್ಕ ನೆನಪಿನಲ್ಲಿ ಸಸಿ ನೆಟ್ಟು ನಂತರ  ಸಂತಾಪ  Planting saplings in memory of Thimmakka, followed by condolences

 ಶಿಗ್ಗಾವಿ : 16  ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನ ನಿಮಿತ್ಯ ನಗರದ ಶಬರಿಗಿರಿ ವೈಷ್ಣವಿ ಉದ್ಯಾನವನದಲ್ಲಿ ಸಾಲುಮರದ ತಿಮ್ಮಕ್ಕ ಅವರ ನೆನಪಿನಲ್ಲಿ ಸಸಿ ನೆಟ್ಟು ಗೌರವ ನಂತರ ಮೌನಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.  ಈ  ಸಂದರ್ಭದಲ್ಲಿ ಶಬರಿಗಿರಿ ವೈಷ್ಣವಿ ಬಡಾವಣೆಯ  ವೈ ಎಸ್ ಪಾಟೀಲ, ಮಲ್ಲಪ್ಪ ಚಕ್ರಸಾಲಿ, ಚನ್ನಪ್ಪ ನೆಲಗಲ, ಶಿವಲಿಂಗಪ್ಪ ಹುರಳಿ, ಬಸವರಾಜ್ ಬಸರಿಕಟ್ಟಿ ಹಾಗೂ ರಾಜ್ ಡಾನ್ಸ್‌ ಸ್ಕೂಲಿನ ಮಕ್ಕಳು ಭಾಗವಹಿಸಿದ್ದರು.