ಮನೋಹರ್ ಬಾಬು.ಜಿ ಅವರಿಗೆ ಪಿಎಚ್ಡಿ ಪದವಿ
ಬಳ್ಳಾರಿ 03:ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾ ಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ ಮನೋಹರ್ ಬಾಬು.ಜಿ ಅವರಿಗೆ ಪಿಎಚ್ಡಿ ಪದವಿ ಲಭಿಸಿದೆ.
ವಿವಿಯ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ರವಿ ನಾರಾಯಣ.ಕೆ.ಎಸ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದ “ಎ ಸ್ಟಡಿ ಆನ್ ಪ್ರಾಬ್ಲಮ್ಸ್ ಪ್ರಾಸ್ಪೆಕ್ಟಸ್ ಆಫ್ ಎಂಪ್ಲಾಯಿಸ್ ಇನ್ ಗಾಮೆಂರ್ಟ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್ಸ್ ವಿತ್ ಸ್ಪೆಷಲ್ ರೆಫರೆನ್ಸ್ ಟು ಕಲ್ಯಾಣ ಕರ್ನಾಟಕ ರೀಜನ್” ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.