ರಾಣೇಬೆನ್ನೂರಲ್ಲಿ 14 ರಂದು ರಾಷ್ಟ್ರಭಕ್ತಿ ಪುನರ್ ಜಾಗೃತಿ ಸಮಾರಂಭ
Patriotism revival ceremony to be held in Ranebennur on the 14th
ರಾಣೇಬೆನ್ನೂರಲ್ಲಿ 14 ರಂದು ರಾಷ್ಟ್ರಭಕ್ತಿ ಪುನರ್ ಜಾಗೃತಿ ಸಮಾರಂಭ
ರಾಣೇಬೆನ್ನೂರು 06: ಅಗಸ್ಟ್ 15ರಂದು ನಡೆಯಲಿರುವ 79 ನೇ ಭಾರತ ಸ್ವಾತಂತ್ರ್ಯೋತ್ಸವದ ಮುನ್ನ ದಿನವಾದ ಗುರುವಾರ 14ರಂದು ಸಂಜೆ, ಭಾರತ ಮಾತಾ ಉತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾರತ ಮಾತಾ ಮೆರವಣಿಗೆ ಮತ್ತು ರಾಷ್ಟ್ರಭಕ್ತಿ ಪುನರ್ ಜಾಗೃತಿ ಸಮಾರಂಭವು ಮಾರುತಿ ನಗರದ ಭಾರತ ಮಾತಾ ಮಂದಿರದ ಆವರಣದಲ್ಲಿ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷ ಎಸ್. ಜಿ. ಮಹಾನುಭಾವಿಮಠ ಹೇಳಿದರು.
ಸ್ವಾತಂತ್ರ್ಯ ಮುನ್ನಾದಿನ ಅಂದು ದೇಶ ಭಕ್ತಿ ಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳು. ದೇಶ ಮತ್ತು ದೇಶಾಭಿಮಾನ ಮತ್ತು ಇತಿಹಾಸದ ಪರಿಕಲ್ಪನೆ ಕುರಿತು "ಸ್ವಾತಂತ್ರ್ಯೋತ್ಸವ " ಸಂಭ್ರಮಾಚರಣೆ ಏರಿ್ಡಸಲಾಗಿದೆ. ಶ್ರೀ ಪ್ರಕಾಶಾನಂದಜಿ ಮಹಾರಾಜ್ ದಿವ್ಯ ಸಾನಿಧ್ಯ ವಹಿಸುವರು. ಎಸ್. ಬಿ ಮಠದ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ ಅವರು, ಉದ್ಘಾಟಿಸುವರು. ನಗರಸಭೆ ಅಧ್ಯಕ್ಷ ಚಂಪಕ ಬಿಸಲಹಳ್ಳಿ , ತಹಸಿಲ್ದಾರ್ ಆರ್.ಎಚ್. ಭಾಗವಾನ, ಪೌರಾಯುಕ್ತ ಎಫ್. ಐ. ಇಂಗಳಗಿ, ಮಾಜಿ ಅಧ್ಯಕ್ಷ ಶೇಖಣ್ಣ ಹೊಸಗೌಡ್ರ, ವರ್ತಕ ಮಲ್ಲೇಶಪ್ಪ ಅರಕೇರಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು. ಗಣ್ಯರು, ಸದಸ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 