ಕಾನೂನು ವೃತ್ತಿಯಲ್ಲಿ ತಾಳ್ಮೆ, ಜಾಣ್ಮೆ ಅತ್ಯಂತ ಅವಶ್ಯ - ಸುಭಾಷ್ ವ್ಹಿ ಸಾವುಕರ

Patience and intelligence are essential in the legal profession - Subhash Vhi Saukar

ಕಾನೂನು ವೃತ್ತಿಯಲ್ಲಿ ತಾಳ್ಮೆ, ಜಾಣ್ಮೆ ಅತ್ಯಂತ ಅವಶ್ಯ - ಸುಭಾಷ್ ವ್ಹಿ ಸಾವುಕರ  

ರಾಣೇಬೆನ್ನೂರ 04: ಜ್ಞಾನವಂತರಾಗಿ ನೀವು ಪಡೆದ ದಾನ ಎಂದಿಗೂ ಸಹಾಯ ಮಾಡುತ್ತದೆ. ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅವಶ್ಯಕತೆ ಇದೆ. ಕಾನೂನು ವೃತ್ತಿಯಲ್ಲಿ ತಾಳ್ಮೆ, ಜಾಣ್ಮೆ ಅತ್ಯಂತ ಅವಶ್ಯಕತೆವಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುಭಾಷ್ ಸಾಹುಕಾರ್ ಹೇಳಿದರು.ನಗರದ ಆರಿ​‍್ಟ.ಇ.ಎಸ್ ಕಾನೂನು ಮಹಾವಿದ್ಯಾಲಯದ ಸಭಾ ಭವನದಲ್ಲಿ ನಡೆದ 2024-25ನೇ ಸಾಲಿನ ತೃತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಚನ್ನವೀರ​‍್ಪ ಹರಿಹರ ಮಾತನಾಡಿ, ಕಾನೂನು ವೃತ್ತಿ ಕೈಗೊಳ್ಳುವವರು  ನಡವಳಿಕೆ, ನಂಬಿಕೆ , ಬದ್ಧತೆಯನ್ನು ಅಳವಡಿಸಿಕೊಳ್ಳುವದೂ ಅತಿ ಅವಶ್ಯಕ ಎಂದರು.  

ಕಷ್ಟ ಮತ್ತು ಸಮಸ್ಯಗಳಿಗೆ ದುಡಿಮೆ ಹಾಗೂ ತಾಳ್ಮೆ ಪರಿಹಾರವಾಗಿದೆ ಎಂದು ಹೇಳಿದರು.ಹಿರಿಯ ಪ್ರಾಧ್ಯಾಪಕರಾದ ಬಿ.ಆರ್‌. ರುದ್ರೇಶ್ ಮಾತನಾಡಿ,  ಲಾ ಅನ್ನು ಲೀಗಲ್ ಆಗಿ ಬಳಸಿ ಇಲ್ಲೀಗಲ್ ಆಗಿ ಬಳಸಬೇಡಿ. ಕಾನೂನು ವೃತ್ತಿ ಶಿಕ್ಷಣ ಹಾಗೂ ವೃತ್ತಿಯಲ್ಲಿ ಅಂತರ್ಜಾಲ ಮಾಹಿತಿಯನ್ನು ಬಳಸದೆ ಪುಸ್ತಕದ ಜ್ಞಾನವನ್ನು ಪಡೆದುಕೊಳ್ಳಿ. ನಿಮ್ಮ ಮುಂದಿನ ಕಾನೂನು ವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭಾರೈಸಿದರು.ಪ್ರಾಧ್ಯಾಪಕರಾದ ಶುಭಾಂಗಿ ದೇಶಪಾಂಡೆ ಅವರು  ಮಾತನಾಡಿ, ಕಕ್ಷಿಗಾರಾರ ಸಮಸ್ಯೆಯನ್ನು  ಸಮಾಧಾನದಿಂದ ಕೇಳಬೇಕು ಅಲ್ಲದೇ ಅವರಿಗೆ ಕೂಡಲೇ ಸಲಹೆ ನೀಡಬಾರದು ಎಂದು ಹೇಳಿದರು.ಪ್ರಾಧ್ಯಾಪಕರಾದ ರೇಣುಕಾ ಮರಡೂರ್  ಅವರು ಮಾತನಾಡಿ, ಕಾನೂನು ವೃತ್ತಿಯಲ್ಲಿ ಸಮಯ ಪ್ರಜ್ಞೆ ಅತಿ ಅವಶ್ಯಕ ಅದನ್ನು ನಿಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಬಿ.ರಮೇಶ್ ಅವರು ಮಾತನಾಡಿ, ವೃತ್ತಿಯಲ್ಲಿ ನೈಪುಣ್ಯತೆಯನ್ನು ಗಳಿಸಿದಾಗ ಮಾತ್ರ ಯಶಸ್ವಿ ವಕೀಲನಾಗಲು ಸಾಧ್ಯ ಎಂದರು.  ಜೊತೆಗೆ ಕನ್ನಡ ಹಾಗೂ ಆಂಗ್ಲ ಭಾಷೆಯ ಮೇಲೆ ಹಿಡಿತವಿರಬೇಕು, ಕಾನೂನನ್ನು ಸರಿಯಾಗಿ ಅರ್ಥೈಸಿಕೊಳ್ಳಿ, ಕೋಪದ ಮೇಲೆ ನಿಯಂತ್ರಣವಿಟ್ಟುಕೊಳ್ಳಿ ಅಲ್ಲದೇ ಸರ್ವೋಚ್ಚ ನ್ಯಾಯಾಲಯದ ತೀಪು ಅಧ್ಯಯನ ಮಾಡಿ ಎಂದರು.ಕನಸನ್ನು ಕಾಣುವುದರ ಜೊತೆ ಅದನ್ನು ಸಾಕಾರಗೊಳಿಸುವಲ್ಲಿ ಪ್ರಯತ್ನಿಸಿದಾಗ ಅದರಲ್ಲಿ ಯಶಸ್ವಿಯಾಗಲು ಸಾಧ್ಯ, ಸಮಾಜದಲ್ಲಿ ಅನೀತಿವಂತರಾಗದೆ ನೀತಿವಂತರಾಗಿ ಜೀವನ ಸಾಗಿಸಿ ಎಂದು ರಾಣೇಬೆನ್ನೂರ ತಾಲ್ಲೂಕು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೀತಾ ಕೋಟಿ ಮಾತನಾಡಿದರು. 

ಅಂತಿಮ ವರ್ಷದ ವಿದ್ಯಾರ್ಥಿಗಳಾದ ಬಸವರಾಜ ಪಿ, ಸೌಜನ್ಯ, ಬಸವನಗೌಡ ಮೇಳಗಟ್ಟಿ, ಸುನೀಲ್ ಕುಮಾರ್ ಬೆಂದ್ರೆ, ವಿನಯ್ ಹುಲ್ಲತ್ತಿ, ಸತೀಶ್, ಸುಧಾ, ಬಸವರಾಜ ಎಸ್, ನಂದೀಶ್, ವಿರೇಶ್, ಅಜೇಯ್ ಕೊಡ್ಲೆರ್, ಸಂತೋಷ, ಆನಂದ ಬಡಿಗೇರ ಅನಿಸಿಕೆ ಮಾತುಗಳನ್ನಾಡಿದರು.ಸಿಬ್ಬಂದಿ ವರ್ಗದ ಎಮ್‌.ಕೆ. ಕಮದೋಡ್, ವಿಜಯಲಕ್ಷ್ಮಿ ವೇದಿಕೆ ಹಂಚಿಕೊಂಡರು. ವಿದ್ಯಾರ್ಥಿ ಅಕ್ಷತಾ  ಸೊಪ್ಪಿನ್ ಸ್ವಾಗತಿಸಿದರು, ಅರುಣ್ ಬಣಕಾರ ವಂದಸಿದರು, ಕೃತಿ ಎಮ್ ಕೆ ಹಾಗೂ ಸುಮಾ ಜಿ ಜಿ ನಿರೂಪಿಸಿದರು. ಕಾನೂನು ಮಹಾವಿದ್ಯಾಲಯದ ಸಿಬ್ಬಂಧಿ ಹಾಗೂ ಅನೇಕ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.