ಮೆಡಿಸಿನ್ ವಿಭಾಗದಲ್ಲಿ ಕಾಲೇಜ್ ಟಾಪರ್ ಆಗಿ ಉತ್ತೀರ್ಣ: ಅಭಿಷೇಕಸ್ವಾಮಿ
Passed as College Topper in Medicine: Abhishekaswamy
ಮೆಡಿಸಿನ್ ವಿಭಾಗದಲ್ಲಿ ಕಾಲೇಜ್ ಟಾಪರ್ ಆಗಿ ಉತ್ತೀರ್ಣ: ಅಭಿಷೇಕಸ್ವಾಮಿ
ಗಂಗಾವತಿ 29: ನಗರದ ಡಾ.ಅಭಿಷೇಕಸ್ವಾಮಿ ಹೇರೂರ ಎಮ್.ಡಿ.ಜನರಲ್ ಮೆಡಿಸಿನ್ ವಿಭಾಗದಲ್ಲಿ ಕಾಲೇಜ್ ಟಾಪರ್ ಆಗಿ ಉತ್ತೀರ್ಣರಾಗಿದ್ದಾರೆ.ಗಂಗಾವತಿ ನಗರದ ಸೇ0ಟ್ ಫಾಲ್ಸ್ ಮತ್ತು ಲಿಟಲ್ ಹಾರ್ಟ್ಸ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅಭ್ಯಾಸವನ್ನು ಮುಗಿಸಿರುವ ಡಾ.ಅಭಿಷೇಕಸ್ವಾಮಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 98ಅ ಅಂಕಗಳನ್ನು ಗಳಿಸಿ ಜಿಲ್ಲಾ ಟಾಪರ್ ಎನಿಸಿಕೊಂಡಿದ್ದರು.ನಂತರ ಸತ್ಯ ಸಾಯಿ ಲೋಕಸೇವಾ ಟ್ರಸ್ಟ್ ನಡೆಸುವ ಅಳಿಕೆ ಗ್ರಾಮದ ಕಾಲೇಜ್ ನಲ್ಲಿ ಪಿ.ಯು.ಸಿ.ಅಭ್ಯಾಸ ಮಾಡಿ 97ಅ ಅಂಕಗಳಿಸಿ, ಸಿ.ಇ.ಟಿ.ಯಲ್ಲಿ ರಾಜ್ಯಕ್ಕೆ 261 ನೇ ರ್ಯಾಂಕ್ ಪಡೆದಿದ್ದರು.
ಸರಕಾರಿ ಮೈಸೂರು ಮೆಡಿಕಲ್ ಕಾಲೇಜ್ ನಲ್ಲಿ ಎಮ್.ಬಿ.ಬಿ.ಎಸ್.ಪದವಿ ಮುಗಿಸಿ,ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜ್ ನಲ್ಲಿ ಎಮ್.ಡಿ.ಜನರಲ್ ಮೆಡಿಸಿನ್ ವಿಭಾಗದಲ್ಲಿ ಪ್ರವೇಶ ಪಡೆದಿದ್ದರು.ಡಾ.ಅಭಿಷೇಕಸ್ವಾಮಿ ಹೇರೂರ ಅವರ ಸಾಧನೆಗೆ ಕುಟುಂಬ ವರ್ಗ ಮತ್ತು ಓಷಧ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 