ಪಾಂಡುರಂಗ ವಿಠ್ಠಲ ರುಕ್ಮೀಣಿ ಜಾತ್ರಾ ಮೋಹತ್ಸವ
Pandurang Vithala Rukmini Jatra Festival
ತಾಂಬಾ: ಗುರುವಿನ ಗುಲಾಮನಾಗುವತನಕ ದೋರೆಯದಣ್ಣ ಮುಕುತಿ ಮನೆಯಲ್ಲಿ ಮೋದಲು ಮಾತಾ-ಪಿತೃ ಗುರು ನಂತರ ವಿದ್ಯಾಗುರು ತದನಂತರ ಅಧ್ಯಾತ್ಮೀಕ ಗುರು ಜೀವನದಲ್ಲಿ ಗುರುವಿನ ಸೇವಕನಾಗಿ ವಿದೇಕನಾಗಿ ನಡೆದುಕೊಂಡರೆ ಪಾಂಡುರಂಗ ವಿಠ್ಠಲ್ ತಮ್ಮ ಸಾಧನೆ ಯಶಸ್ವಿಯಾಗಲು ಅನುಗ್ರಹಿಸುತ್ತಾನೆ ಎಂದು ಶ್ರೀ ರಾಮರಾವ ಮಹಾರಾಜರು ಹೇಳಿದರು. ಗ್ರಾಮದ ವಿಠ್ಠಲ ಪಾಂಡುರಂಗ ರುಕ್ಮೀಣಿ ಜಾತ್ರಾ ಮೊಹತ್ಸವದ ನಿಮಿತ್ಯ ಹಮ್ಮಿಕೊಂಡ ಧರ್ಮಸಭೆಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಮನುಷ್ಯ ಬೇಕಾದಷ್ಟು ಹಣ ಆಸ್ತಿ, ಅಂತಸ್ಥು ಸಂಪತ್ತು ಗಳಿಸಬಹುದು ಆದರೆ ನೆಮ್ಮದಿಮಾತ್ರ ಸಿಗದು ಮನುಷ್ಯನಿಗೆ ಶಾಂತಿ ನೆಮ್ಮದಿ ದೋರೆಯಬೇಕಾದರೆ ಒಳ್ಳೆಯ ಸಂಸ್ಕಾರದಿಂದ ಮಾತ್ರ ಸಿಗುತ್ತದೆ. ಗುಡಿ-ಗುಂಡಾರಗಳು ಕಟ್ಟುವದು ಸುಲಭ ಆದರೆ ಅವುಗಳನ್ನು ಸ್ವಚ್ಚವಾಗಿ ಇಟ್ಟುಕೋಂಡು ಎಲ್ಲ ಭಕ್ತ ಸಮೂಹವನ್ನು ಒಂದು ಗುಡಿಸಿಕೊಂಡು ತನ್ನ ಸ್ವಂತ ಆಸ್ಥಿಯ 11ಗುಂಟೆ ಜಮೀನನ್ನು ದೇವಸ್ಥಾನಕ್ಕಾಗಿ ಕೊಟ್ಟು ಸ್ವಂತ ಗುಡಿಯನ್ನು ಕಟ್ಟಿದ ಶರಣ ಸೋಮಣ್ಣ ದೇವೂರ ಅವರ ಕಾರ್ಯ ಶ್ಲಾಘನಿಯವಾದದ್ದು ಎಂದರು.
ಮಡಿವಾಳಪ್ಪ ಬಮ್ಮನಜೋಗಿ, ಆರ್.ಎ.ಹೊರ್ತ್ತಿ ಮಾತನಾಡಿದರು, ಗ್ರಾಪಂ ಅಧ್ಯಕ್ಷ ಆಸ್ಮಾ ರಜಾಕ ಚಿಕ್ಕಗಸಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ತಾಪಂ ಸದಸ್ಯ ಪ್ರಕಾಶ ಮುಂಜಿ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಜೆ.ಎಸ್.ಹತ್ತಳಿ, ಅಪ್ಪಣ್ಣ ಕಲ್ಲೂರ, ಸೋಮಣ್ಣ ದೆವೂರ, ರಾಜು ಗಂಗನಳ್ಳಿ, ಶ್ರೀಧರ ಉಕ್ಕಲಿ, ಭೀಮರಾವ ಕುಲಕರ್ಣಿ, ಶಿವಾನಂದ ಲೋಣಿ, ಶಿವಾಜಿ ಕೆರೂಟಗಿ, ಶಿವಪ್ಪ ನಾಟೀಕಾರ, ಶ್ರೀಶೈಲ್ ದೋಡ್ಡಮನಿ, ಟಿ.ಎಸ್.ಗಿರಿಗೌಡರ, ಪ್ರಕಾಶ ಪಾಟೀಲ, ಎ.ಎಸ್.ಸರಸಂಬಿ, ಗುರಲಿಂಗಪ್ಪ ಗೊಡಿಹಾಳ, ಲಕ್ಷ್ಮಣ ಕನ್ನೂರ, ದಯಾನಂದ ಮೂಲಿಮನಿ, ಸೋಮರಾಯ ಮಾದರ ಸೇರಿದಂತೆ ಮತ್ತಿತರರು ಇದ್ದರು. ನಂತರ ಜಾಗರಣೆ ನಡೆಯಿತ್ತು, ಇದಕ್ಕೂಮೊದಲು ಲಕ್ಷ ತುಳಸಿ ಬಿಲ್ವಾರ್ಚನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ದಿಂಡಿಯ ಭವ್ಯ ಮೇರವಣಿಗೆ ಮಾಡಲಾಯಿತ್ತು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 