ನಾಳೆ ಪಂಚ ತುಲಾಭಾರ, ಸಂಗೀತ ಸಮಾರಾಧನೆ

Panch Tulabhara tomorrow, Sangeet Samaradhana

ನಾಳೆ ಪಂಚ ತುಲಾಭಾರ, ಸಂಗೀತ ಸಮಾರಾಧನೆ

ಕೊಪ್ಪಳ 09: ಲಿಂ.ಡಾ. ಪಂಡಿತ್ ಪುಟ್ಟರಾಜ ಗವಾಯಿಗಳು ಈ ನಾಡು ಕಂಡಂತಹ ಶ್ರೇಷ್ಠ ಬಹುಶೃತ ಸಂಗೀತ ವಿದ್ವಾಂಸರು. ಅಂಧ-ಅನಾಥ ಮಕ್ಕಳಿಗಾಗಿ ತಮ್ಮ ಇಡೀ ಬದುಕನ್ನೇ ಮುಡುಪಾಗಿಟ್ಟ ಸಂತರು. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಹಲವಾರು ಕೃತಿಗಳನ್ನು ರಚನೆ ಮಾಡಿ, ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರು. ಇಂಥ ಮಹಾನ್ ವ್ಯಕ್ತಿಯ ಪುಣ್ಯ ಸ್ಮರಣೆ, ಹಾಗೂ ಪಂಚಾಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ ಮತ್ತು ವೀರೇಶ್ವರ ಪುಣ್ಯಾಶ್ರಮದ ಅಂಧ ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕಲ್ಲಯ್ಯಜ್ಜನವರಿಗೆ ತುಲಾಭಾರ ಹಾಗೂ ’ಸಂಗೀತ ಸಮಾರಾಧನೆ’ಯನ್ನು ನಾಳೆ ದಿನಾಂಕ 11-2-2025 ಮಂಗಳವಾರ ದಂದು ಸಂಜೆ 6 ಕ್ಕೆ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಗೀತ ಕಲಾವಿದರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಂ ಶಂಕರ ಬಿನ್ನಾಳ ಹಾಗೂ ಸುಗಮ ಸಂಗೀತಗಾರ ಪಂ.ಸದಾಶಿವ ಪಾಟೀಲ ಹೇಳಿದರು. 

ಅವರು ರವಿವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ದೇಶದ ಹೆಸರಾಂತ ಕಲಾವಿದರಾದ ಪಂ ಸೋಮನಾಥ್ ಮರಡೂರು, ಪಂ ಸದಾಶಿವಾ ಐಹೊಳಿ, ಸಿತಾರ್ ವಾದಕ ಪಂ.ಶಫಿಖ್ ಖಾನ್, ತಬಲಾ ವಾದಕರಾದ ಪಂ.ರಾಜೇಂದ್ರ ನಾಕೋಡ್, ಗಾಯಕರಾದ ಪಂ ಕುಮಾರ ಮರಡೂರ, ರವೀಂದ್ರ ಜಕಾತಿ ಅಂತ ಸಂಗೀತ ದಿಗ್ಗಜರು ಆಗಮಿಸುತ್ತಿದ್ದು, ಅಹೋರಾತ್ರಿ ಸಂಗೀತ ಸಮಾರಾಧನೆ ನಡೆಯಲಿದೆ. ಆಶ್ರಮದ ಅಭಿಮಾನಿಗಳು, ಕಲಾವಿದರು, ಸುತ್ತುಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ತುಲಭಾರ ಹಾಗೂ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದ ಅವರು ದಿವ್ಯ ಸಾನಿಧ್ಯವನ್ನು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ದಿವ್ಯ ನೇತೃತ್ವವನ್ನು ಗದಗ್ ವೀರೇಶ್ವರ ಪುಣ್ಯ ಆಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಪಂಡಿತ್ ಕಲ್ಲಯ್ಯಜ್ಜನವರು ವಹಿಸುವರು.ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ನೆರವೇರಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ್ ವಹಿಸುವರು, ಪಂಚ ತುಲಾಭಾರ ಸೇವೆಗೆ ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಚಾಲನೆ ನೀಡುವವರು.ಮಾಜಿ ಸಂಸದ ಸಂಗಣ್ಣ ಕರಡಿ, ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಸಮಾಜ ಸೇವಕರಾದ ಕೆ.ಎಂ. ಸೈಯದ್, ಸಿ.ವಿ. ಚಂದ್ರಶೇಖರ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಶಿಕ್ಷಕರಾದ ಪ್ರಾಣೇಶ್ ಪೂಜಾರ, ಮಾರುತಿ ಮ್ಯಾಗಳಮನಿ, ಬಸವಂತಪ್ಪ ಉಪಸ್ಥಿತರಿದ್ದರು.