ನೋವು ನಿವಾರಣೆ ಶಿಬಿರ ಯಶಸ್ವಿ: ಲಾಭ ಪಡೆದ ಗಡಿ ಜನತೆ
Pain relief camp a success: Border people benefitted
ಕಾಗವಾಡ 02: ಸಾಂಗಲಿ ನಗರದ ಹೆಸರಾಂತ ನೋವು ನಿವಾರಣೆ ಕೇಂದ್ರ ಅಕ್ಸಾನ್ ಪೆನ್ ಸೆಂಟರ್ ಇಂಡಿಯಾದ ಡಾ. ಎಸ್.ಎ. ತಿಪ್ಪಣ್ಣವರ ಅವರು ್ರ್ರಥಮ ಬಾರಿಗೆ ಕರ್ನಾಟಕದ ಅಥಣಿ ಪಟ್ಟಣದಲ್ಲಿ ರವಿವಾರ ದಿ. 1 ರಂದು ಹಮ್ಮಿಕೊಂಡಿದ್ದ ಆಪರೇಶನ್ ಇಲ್ಲದೇ ನೋವು ನಿವಾರಣೆ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಡಾ. ಎಸ್.ಎ. ತಿಪ್ಪಣ್ಣವರ ಅವರು ಕಳೆದ ಅನೇಕ ವರ್ಷಗಳಿಂದ ಮಹಾರಾಷ್ಟ್ರದ ಅನೇಕ ನೋವು ಪೀಡಿತರಿಗೆ ಚಿಕಿತ್ಸೆ ನೀಡಿ, ಹೆಸರುವಾಸಿಯಾಗಿದ್ದಾರೆ. ಬೆನ್ನು ನೋವು, ಸೊಂಟ ನೋವು, ಮೊಣಕಾಲು ನೋವು ಸೇರಿದಂತೆ ಶರೀರದ ಅನೇಕ ನೋವುಗಳಿಗೆ ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ್ದು, ಅವರೆಲ್ಲ ಈಗ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ತಮ್ಮ ಅಕ್ಸಾನ್ ಪೆನ್ ಸೆಂಟರ್ ಇಂಡಿಯಾದ ಮೂಲಕ ಈ ಭಾಗದ ರೋಗಿಗಳಿಗೆ ಸೇವೆ ನೀಡುವ ಅವರ ಬಹು ದಿನಗಳ ಕನಸು ಈಗ ಕಾರ್ಯರೂಪಕ್ಕೆ ಬಂದಿದ್ದು, ಅಥಣಿಯಲ್ಲಿ ಮೊದಲ ಬಾರಿಗೆ ಶಿಬಿರ ನಡೆಸಿದ್ದು, ಅದು ಯಶಸ್ವಿಯಾಗಿದೆ. ನೂರಾರು ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಭವಿಷ್ಯದಲ್ಲಿ ಇನ್ನೂ ಅನೇಕ ಶಿಬಿರಗಳನ್ನು ಕರ್ನಾಟಕದ ವಿವಿಧ ಪಟ್ಟಣಗಳಲ್ಲಿ ನಡೆಸುವ ಯೋಜನೆಯನ್ನು ಡಾ. ಎಸ್.ಎ. ತಿಪ್ಪಣ್ಣವರ ಹೊಂದಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 