ಪ.ಪಂ.ಆಯ-ವ್ಯಯ ಬಜೆಟ್ ಮಂಡನೆ : 8.13 ಲಕ್ಷ ಉಳಿತಾಯ
P.P. Revenue and Expenditure Budget Presentation: 8.13 lakh savings
ಪ.ಪಂ.ಆಯ-ವ್ಯಯ ಬಜೆಟ್ ಮಂಡನೆ : 8.13 ಲಕ್ಷ ಉಳಿತಾಯ
ಕಂಪ್ಲಿ.10: ಸಮೀಪದ ಕುಡುತಿನಿ ಪಟ್ಟಣದ ಪಪಂಯ ಸಭಾಂಗಣದಲ್ಲಿ ಅಧ್ಯಕ್ಷ ಬಸಮ್ಮ ಚಂದ್ರ್ಪ ಅವರ ಅಧ್ಯಕ್ಷತೆಯಲ್ಲಿ 2025-26ನೇ ಆಯ-ವ್ಯಯ ಸಭೆ ಶುಕ್ರವಾರ ನಡೆಯಿತು.ನಂತರ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ ಇವರು 8.13 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು.
ಪಪಂ ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು 5ಕೋಟಿ ಅನುದಾನ ಸ್ವಂತ ನಿಧಿಯಿಂದ ಕಾಯ್ದರಿಸಿದ್ದು, ಡಿಪಿಆರ್ ಸಿದ್ದಪಡಿಸಿ, ಸರ್ಕಾರಕ್ಕೆ ಪ್ರಸ್ತಾಪಿಸಲಾಗುವುದು. ಶವ ಸಂಸ್ಕಾರ ಮಾಡಲು ವಿದ್ಯುತ್ ಚಿತಾಗಾರದ ವ್ಯವಸ್ಥೆಗೆ ಸೂಕ್ತಕ್ರಮವಹಿಸಿದೆ. 10 ಲಕ್ಷ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಕರೆದಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಿ, ಎರಡು ತಿಂಗಳಲ್ಲಿ ಮುಗಿಸಿಕೊಡಲಾಗುವುದು. 1 ಸಾವಿರ ಮನೆಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ 600 ಮನೆಗಳ ನಿರ್ಮಾಣ 2ನೇ ಹಂತದಲ್ಲಿ ಉಳಿದ ಮನೆಗಳನ್ನು ಸೂರು ಒದಗಿಸಲಾಗುವುದು 50 ಲಕ್ಷ ವೆಚ್ಚದಲ್ಲಿ ಹಂಪಿ ಮಾದರಿಯಲ್ಲಿ ಕುಡುತಿನಿಯ ದ್ವಾರ ಬಾಗಿಲು ನಿರ್ಮಿಸಲು ಸಿದ್ದತೆ ನಡೆದಿದೆ.
ಆಲಮಟ್ಟಿ ಜಲಾಶಯದಿಂದ ಕೆಪಿಸಿಎಲ್ ಕೆರೆಗೆ ಬರುವ ನೀರನ್ನು ಕುಡುತಿನಿ ಹಳೆ ಕೆರೆಗೆ ಸರಬರಾಜು ಮಾಡಲು ಪೈಪ್ ಲೈನ್ ಮತ್ತು ಮೋಟರ್ ಅಳವಡಿಸಲು ಸೂಕ್ತಕ್ರಮವಹಿಸಿ, ಸಮರ್ಕವಾಗಿ ನೀರು ಪೂರೈಯಿಸಲಾಗುವುದು ಈಗಾಗಲೇ 11 ಜನ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ಪಟ್ಟಣದಲ್ಲಿ 5 ಲಕ್ಷ ಲೀಟರ್ ನೀರಿನ ಟ್ಯಾಂಕ್, ಆಟೋ, ಟಿಪ್ಪರ್, ಲಾರಿ ಖರೀದಿಸಲು ಟೆಂಡರ್ ಕರೆಯಲಾಗಿದೆ. ಶಿಥಿಲಗೊಂಡ ತಿಮ್ಮಲಾಪುರ ಪಂಪ್ ಹೌಸ್ ಅಭಿವೃದ್ಧಿ ಪಡಿಸುವುದು, ಇಂದಿರಾ ಕ್ಯಾಂಟಿನ್ ಮುಗಿಯುವ ಹಂತಕ್ಕೆ ಬಂದಿದ್ದು, ಅತಿ ಶೀಘ್ರದಲ್ಲಿ ಉದ್ಘಾಟಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುವುದು. ಹಲವು ಅಭಿವೃದ್ಧಿಗೆ ಸಂಬಂದಿಸಿದ ಬಜೆಟ್ ಅನ್ನು ಮಂಡಿಸಲಾಯಿತು.ಮುಖ್ಯಾಧಿಕಾರಿ ತೀರ್ಥಪ್ರಸಾದ.ಸದಸ್ಯರಾದಜಿ.ಎಸ್.ವೆಂಕಟರಮಣ, ಹಾಲಪ್ಪ ಕೆ.ಎಂ, ಎಸ್.ಸುನೀಲ್ ಕುಮಾರ, ಸಿ.ಡಿ.ದುಗ್ಗೆಪ್ಪ ಟಿ.ಮಂಜುನಾಥ, ರಾಮಲಿಂಗಪ್ಪ, ಬಿ.ಕೆ.ಲೆನಿನ್, ಯು.ದೇವಮ್ಮ, ಎಸ್.ರತ್ನಮ್ಮ, ಆರ್.ಸಾಲಮ್ಮ .ಸೇರಿ ಅನೇಕರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 