ನೂತನ ಗಣಪತಿ ಪ್ರಾಣ ಪ್ರತಿಷ್ಠಾಪನೆ

ನೂತನ ಗಣಪತಿ ಪ್ರಾಣ ಪ್ರತಿಷ್ಠಾಪನೆ New Ganesha idol installation

ನೂತನ ಗಣಪತಿ ಪ್ರಾಣ ಪ್ರತಿಷ್ಠಾಪನೆ 

ಶಿಗ್ಗಾವಿ 09: ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ ಸರಕಾರಿ ಕಚೇರಿಗಳ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಶ್ರೀ ಮಹಾಲಕ್ಷ್ಮಿ ಹಾಗೂ ನೂತನ ಗಣಪತಿ ದೇವರ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಮಹಾಪ್ರಸಾದ ನೇರವೇರಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣನವರ ಸೇರಿದಂತೆ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಿ.ಎನ್‌.ಕುಂಬಾರ, ರಾಮಣ್ಣ ಗೌಳಿ, ಸಂಗಪ್ಪ ಕನವಳ್ಳಿ, ಎಸ್‌.ಎಸ್‌.ಕಲಬುರಗಿ, ಮಂಜುನಾಥ ಹಳೇಪ್ಪನವರ, ಬಸವರಾಜ ಗೌಳಿ, ವಿಜಯ ಚಿಕ್ಕಮಠ, ನಾಗರಾಜ ಉಪ್ಪಾರ,ಸಂಕಲ್ಪ ಹಳೇಪ್ಪನವರ, ಕೃಷ್ಣಾ ಸಲಾಖೆ ಸೇರಿದಂತೆ ಎಲ್ಲಾ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಶಿಕ್ಷಕರು, ಭಕ್ತಾದಿಗಳು ಉಪಸ್ಥಿತರಿದ್ದರು.