ನಗರ ಸಭೆ ನಿರ್ಲಕ್ಷ್ಯ: ಗಬ್ಬುನಾರುತ್ತಿವೆ ಚರಂಡಿಗಳು
ಲೋಕದರ್ಶನ ವರದಿ
ಕೊಪ್ಪಳ 21: ನಗರದ ಹೃದಯ ಭಾಗದಲ್ಲಿರುವ 21ನೇ ವಾಡರ್ಿನಲ್ಲಿ ಗಬ್ಬು ನಾರುತ್ತಿರುವ ಚರಂಡಿಗಳು ಬೀದಿಗಳಲ್ಲಿ ಕಸ ರಾಶಿ ರಾಶಿ ಬಿದ್ದು ಸೊಳ್ಳೆಗಳಿಂದ ಮಲೇರಿಯ ಮತ್ತು ಡೆಂಗು ರೋಗದ ಭಯದಲ್ಲಿ ಜನರು ಬದುಕುತ್ತಿದ್ದಾರೆ ಇದಕ್ಕೆಲ್ಲಾ ನಗರ ಸಭೆಯ ನಿರ್ಲಕ್ಷ್ಯವೇ ಕಾರಣ ಎಂದು ವಾಡರ್ಿನ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ವಾಡರ್ಿನ ದಿವಂಗತ ಶಿವಾನಂನದ ಹೂದ್ಲೂರ್ ರವರ ಮನೆಯ ಮುಂದೆ ಇರುವ ಚರಂಡಿಗೆ ಮುಚ್ಚಿರುವ ಕಲ್ಲು ಬಂಡೆಗಳು ಒಡೆದು ಹೋಗಿ ರಸ್ತೆಯ ಮೇಲಿನ ಮಣ್ಣು ಮತ್ತು ಕಸ ಚರಂಡಿಗೆ ಸೇರಿ ಚರಂಡಿಯ ನೀರು ತುಂಬಿ ಮೇಲಿಂದ ಹರಿಯುತ್ತಿದೆ, ಸ್ವಚ್ಚ ಮಾಡದೆ ಕಸ ಚರಂಡಿಗಳಲ್ಲಿ ಬಿದ್ದಿದೆ, 21ನೇ ವಾರ್ಡ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಹಾಗಾಗಿ 21ನೇ ವಾಡರ್ಿನ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ, ಆರಿಸಿ ಹೋದ ಜನಪ್ರತಿನಿಧಿಗಳು ತಿರುಗಿ ನೋಡಿಲ್ಲಾ ನಗರ ಸಭೆ ಎಚ್ಚೇತ್ತು ಕೊಂಡು ಸ್ವಚ್ಚತಾ ಕಾರ್ಯ ಕೈಗೋಳ್ಳ ದಿದ್ದರೆ ವಾಡರ್ಿನ ಜನತೆ ಉಗ್ರ ಹೋರಾಟ ಮಾಡುವುದಾಗಿ 21ನೇ ವಾಡರ್ಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 