ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ

ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ National Service Scheme camp launched

ಯಮಕನಮರಡಿ 19: ಸ್ಥಳೀಯ ಸಿಇಎಸ್ ಪಿಯು ಕಾಲೇಜು ಯಮಕನಮರಡಿ ಡಿಸಿ 0072 ವಾರ್ಷಿಕ ವಿಶೇಷ ಶಿಬಿರ 2025 - 26 ನೇ ಸಾಲಿನ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಪರಮ ಪೂಜ್ಯ ಶ್ರೀ ಬಸವಸಿದ್ದ ಸ್ವಾಮೀಜಿ ಶೂನ್ಯ ಸಂಪಾದನಾ ಮಠ ಸುಕ್ಷೇತ್ರ ಹುಣಸಿಕೊಳ್ಳಮಠ ರವರು ಧ್ವಜಾರೋಹಣ ನೆರವೇರಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ರವೀಂದ್ರ .ಅ. ಜಿಂಡ್ರಾಳಿ ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು. 

ಸಂಸ್ಥೆಯ ಉಪಾಧ್ಯಕ್ಷರಾದ ವ್ಹಿ ಎಮ್ ದುಗಾನಿ ನೇತ್ರತ್ವದಲ್ಲಿ ಪ್ರಾಚಾರ್ಯರಾದ ವ್ಹಿ ಬಿ ನಾಶಿಪುಡಿ ಅಧ್ಯಕ್ಷೀಯ ಭಾಷಣ ಮಾಡಿದರು. ಬಿ ಎ ಮನಗಾಂವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುಶೀಲಾ ಮತ್ತು ತೇಜಸ್ವಿನಿ, ಸ್ವಾಗತವನ್ನು ಕುಮಾರಿ ದಿವ್ಯಾ ಮತ್ತು ಪರಿಚಯವನ್ನು ಅಮ್ರತಾ ಹಾಗೂ ವಂದನಾರೆ​‍್ಣಯನ್ನು ಸಾಕ್ಷಿ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಬಿ ಜಿ ಹಿರೇಮಠ, ಕಾರ್ಯಕ್ರಮದ ಅಧಿಕಾರಿಗಳಾದ ಎಮ್ ಆಯ್ ಮಠಪತಿ ಹಾಗೂ ಸಿಬ್ಬಂದಿ ವರ್ಗ ಮತ್ತು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.