ಮಹಾಲಿಂಗಪುರದಲ್ಲಿ ಡಿ. 7 ರಂದು ನಾಮದೇವ ಶಿಂಪಿ ಸಮಾಜದ ವಧು-ವರರ ಸಮ್ಮೇಳನ
Namdev Shimpi Samaj bride and groom conference to be held in Mahalingapur on December 7th
ರಬಕವಿ-ಬನಹಟ್ಟಿ 23: ಕರ್ನಾಟಕ ರಾಜ್ಯ ಸಂತ ನಾಮದೇವ ಶಿಂಪಿ ಸಮಾಜ ವಧು-ವರರ ವೇದಿಕೆಯಿಂದ ಅನುಬಂಧ-1 ಶೀರ್ಷಿಕೆಯಡಿ ರವಿವಾರ ಡಿಸೆಂಬರ್ 7 ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ರಾಜ್ಯಮಟ್ಟದ ವಧು-ವರರ ಸಮ್ಮೇಳನವನ್ನು ಏರಿ್ಡಸಲಾಗಿದೆ ಎಂದು ಮಹಾಲಿಂಗಪುರ ನಗರದ ನಾಮದೇವ ಶಿಂಪಿ ಸಮಾಜದ ಗೌರವಾಧ್ಯಕ್ಷ ಬಾಳಕೃಷ್ಣ ಮಾಳವದೆ ಹೇಳಿದರು.
ಬನಹಟ್ಟಿ ನಗರದ ವಿಠ್ಠಲ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, ಮಹಾಲಿಂಗಪುರದ ಎಪಿಎಂಸಿ ಯಾರ್ಡನ ರಾಂಭವ ಗಾರ್ಮೆಂಟ್ಸ್ ಎದುರಿನ ಶ್ರೀ ಗಣಪತಿ ದೇವಸ್ಥಾನದಲ್ಲಿ ಜರುಲಿದೆ. ರಾಜ್ಯ ಮಟ್ಟದ ವಧು-ವರ ಸಮ್ಮೇಳನ ಇದಾಗಿದ್ದು ನಮ್ಮ ಸಮಾಜದ ವಧು-ವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನ ಸಮಾಜದ ಬಾಂಧವರು ಸಮ್ಮೇಳನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಅರುಣ ಚಿಕೋರ್ಡೆ, ಬಾಳು ರೇಣಕೆ, ವಿನೋದ ಸಿಂಪಿ, ಮಹಾನಿಂಗ ಹಾಸೀಲಕರ, ವಿವೇಕಾನಂದ ಭಸ್ಮೆ, ವಿಜಯ ಕೋಪರ್ಡೆ, ಮಾಧವಾನಂದ ಪ್ರಭು ಕೋಪರ್ಡೆ, ನಾಗರಾಜ ಖಟಾವಕರ, ಪರಶುರಾಮ ಕೋಪರ್ಡೆ, ಗಂಗಪ್ಪ ಹಾಸೀಲಕರ, ವಜ್ರಕಾಂತ ಕೋಪರ್ಡೆ, ಬಾಳಕೃಷ್ಣ ಹಾಸೀಲಕರ, ಸುರೇಶ ಕೋಪರ್ಡೆ, ರಾಘು ಕೋಪರ್ಡೆ, ಸುನೀಲ ಕೋಪರ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 