ಮಹಾಲಿಂಗಪುರದಲ್ಲಿ ಡಿ. 7 ರಂದು ನಾಮದೇವ ಶಿಂಪಿ ಸಮಾಜದ ವಧು-ವರರ ಸಮ್ಮೇಳನ
Namdev Shimpi Samaj bride and groom conference to be held in Mahalingapur on December 7th
ರಬಕವಿ-ಬನಹಟ್ಟಿ 23: ಕರ್ನಾಟಕ ರಾಜ್ಯ ಸಂತ ನಾಮದೇವ ಶಿಂಪಿ ಸಮಾಜ ವಧು-ವರರ ವೇದಿಕೆಯಿಂದ ಅನುಬಂಧ-1 ಶೀರ್ಷಿಕೆಯಡಿ ರವಿವಾರ ಡಿಸೆಂಬರ್ 7 ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ರಾಜ್ಯಮಟ್ಟದ ವಧು-ವರರ ಸಮ್ಮೇಳನವನ್ನು ಏರಿ್ಡಸಲಾಗಿದೆ ಎಂದು ಮಹಾಲಿಂಗಪುರ ನಗರದ ನಾಮದೇವ ಶಿಂಪಿ ಸಮಾಜದ ಗೌರವಾಧ್ಯಕ್ಷ ಬಾಳಕೃಷ್ಣ ಮಾಳವದೆ ಹೇಳಿದರು.
ಬನಹಟ್ಟಿ ನಗರದ ವಿಠ್ಠಲ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, ಮಹಾಲಿಂಗಪುರದ ಎಪಿಎಂಸಿ ಯಾರ್ಡನ ರಾಂಭವ ಗಾರ್ಮೆಂಟ್ಸ್ ಎದುರಿನ ಶ್ರೀ ಗಣಪತಿ ದೇವಸ್ಥಾನದಲ್ಲಿ ಜರುಲಿದೆ. ರಾಜ್ಯ ಮಟ್ಟದ ವಧು-ವರ ಸಮ್ಮೇಳನ ಇದಾಗಿದ್ದು ನಮ್ಮ ಸಮಾಜದ ವಧು-ವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನ ಸಮಾಜದ ಬಾಂಧವರು ಸಮ್ಮೇಳನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಅರುಣ ಚಿಕೋರ್ಡೆ, ಬಾಳು ರೇಣಕೆ, ವಿನೋದ ಸಿಂಪಿ, ಮಹಾನಿಂಗ ಹಾಸೀಲಕರ, ವಿವೇಕಾನಂದ ಭಸ್ಮೆ, ವಿಜಯ ಕೋಪರ್ಡೆ, ಮಾಧವಾನಂದ ಪ್ರಭು ಕೋಪರ್ಡೆ, ನಾಗರಾಜ ಖಟಾವಕರ, ಪರಶುರಾಮ ಕೋಪರ್ಡೆ, ಗಂಗಪ್ಪ ಹಾಸೀಲಕರ, ವಜ್ರಕಾಂತ ಕೋಪರ್ಡೆ, ಬಾಳಕೃಷ್ಣ ಹಾಸೀಲಕರ, ಸುರೇಶ ಕೋಪರ್ಡೆ, ರಾಘು ಕೋಪರ್ಡೆ, ಸುನೀಲ ಕೋಪರ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 