ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ
Nagara Panchami festival celebrated with enthusiasm
ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ
ಬೆಟಗೇರಿ 29: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸೋಮವಾರ ಜು.28 ಮತ್ತು ಮಂಗಳವಾರ ಜು.29 ರಂದು ನಾಗರ ಪಂಚಮಿ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ಹಿರಿಯ ನಾಗರಿಕ ಪತ್ರೆಪ್ಪ ನೀಲಣ್ಣವರ ಮಾತನಾಡಿ, ನಾಗರ ಪಂಚಮಿ ಹಬ್ಬ ನಾಡಿಗೆ ದೊಡ್ಡದಾಗಿದೆ, ಎಲ್ಲರ ಮನೆ-ಮನಗಳಲ್ಲಿ ಸಹೋದರತ್ವದ ಪ್ರತೀಕವಾಗಿದೆ ಎಂದರು.ಜು.28ರಂದು ಗ್ರಾಮದ ಹಲವಡೆವಿರುವ ಹಾವಿನ ಹುತ್ತಗಳಿಗೆ ಹಾಲಿನ ಅಭಿಷೇಕ, ಪೂಜೆ, ಪುನಸ್ಕಾರ ದೇವಸ್ಥಾನಗಳಲ್ಲಿಯೂ ಸಹ ಪುರಜನರಿಂದ ನಡೆದು, ಸಂಜೆ ಹೊತ್ತಿನಲ್ಲಿ ಎಲ್ಲರ ಮನೆಗಳಲ್ಲಿ ಮಣ್ಣಿನಿಂದ ರೂಪಿಸಿದ ನಾಗರ ಹಾವಿನ ಮೂರ್ತಿಗೆ ಹತ್ತಿ ಅರಳಿಯಿಂದ ಮಾಡಿದ ಹೊಂಗನೂಲು ಹಾಕಿ, ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿದ ಬಳಿಕ ರುಚಿಕರ ಉಂಡಿ, ತಿಂಡಿ ತಿನಿಸುಗಳನ್ನು ಆದಿಶೇಷನಿಗೆ ನೈವೇದ್ಯ ಸಮರ್ಿಸಿದ ಬಳಿಕ ಮನೆ ಮಂದಿಯಲ್ಲ ಒಟ್ಟೂಟ್ಟಿಗೆ ಕುಳಿತು ಸಿಹಿ ಸಿಹಿಯಾದ ತರತರಹದ ಉಂಡಿ, ತಿಂಡಿ ತಿನಸುಗಳನ್ನು ತಿಂದು ಆಸ್ವಾದಿಸಿದರು.
ಜು.29ರಂದು ಜಿಟಿ ಜಿಟಿ ಮಳೆಯ ಹನಿಯ ಮೋಜಿನಲ್ಲಿ ಹೆಣ್ಣು ಮಕ್ಕಳು ನವನವೀನ ಉಡುಗೆ-ತೊಡುಗೆ ತೊಟ್ಟು ಗ್ರಾಮದ ಮನೆಗಳಲ್ಲಿ ಕಟ್ಟಿದ ಜೋಕಾಲಿ ಹಾಗೂ ಊರಿನ ಹಲವಡೆ ಗಿಡ-ಮರಗಳ ರಂಬೆ-ಕೊಂಬೆಗಳಿಗೆ ಹಗ್ಗದಿಂದ ಕಟ್ಟಿದ ಜೋಕಾಲಿ ಜೀಕುವ ಹಾಗೂ ಬಾಲಕರು ಕೊಬರಿ ಬಟ್ಟಲಿನ ಬಿಂಗರಿಕೆ ಆಡಿಸುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಯುವಕ-ಯುವತಿಯರು, ವೃದ್ಧರು ಸೇರಿದಂತೆ ಬಾಲಕ-ಬಾಲಕಿಯರು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಜೋಕಾಲಿ ಆಡಿ ನಲಿದು ಸಂಭ್ರಮಿಸಿದರು.
ಸ್ಥಳೀಯ ಹಿರಿಯ ನಾಗರಿಕ ಪುಂಡಲೀಕಪ್ಪ ಪಾರ್ವತೇರ ಅವರು, ನಾಗರ ಪಂಚಮಿ ಹಬ್ಬ ತಮ್ಮ ತಮ್ಮ ಬಂಧು ಬಳಗದವರಿಗೆ ಸಿಹಿಯಾದ ತಿಂಡಿಗಳನ್ನು ಹಂಚಿಕೊಳ್ಳುವ ಅವಿನಾಭಾವ ಸಂಬಂಧ ಬೆಸೆಯುವ ವೈಶಿಷ್ಟ್ಯ ಪೂರ್ಣ ಹಬ್ಬವಾಗಿದೆ ಎಂದು ನಾಗರ ಪಂಚಮಿ ಹಬ್ಬದ ವೈಶೀಷ್ಟ್ಯದ ಕುರಿತು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 