ಮುಂಡರಗಿ ಶಾಖಾಮಠ ಕೂಕನೂರ..ಪಟ್ಟಾಭಿಷೇಕ ಮಹೋತ್ಸವ ಪ್ರಯುಕ
ಕೊಪ್ಪಳ 29 : ಸಮಾಜದ ಸಾಮರಸ್ಯವನ್ನು ಸಂಸ್ಕಾರ, ಧರ್ಮ ಬೋಧನೆಯ, ತತ್ವದ ಮೂಲಕ ಕಟ್ಟುತ್ತಿರುವ -ಡಾ ಮಹಾದೇವ ಮಹಾಸ್ವಾಮಿಗಳು ಅನ್ನದಾನೇಶ್ವರ ಮುಂಡರಗಿ ಶಾಖಾಮಠ ಕೂಕನೂರ..ಪಟ್ಟಾಭಿಷೇಕ ಮಹೋತ್ಸವ ಪ್ರಯುಕ್ತ ಲೇಖನ.ಮನುಕುಲದ ಕಲ್ಯಾಣಕ್ಕಾಗಿ ಅನೇಕ ಶರಣರು- ಸಂತರು,ಅವಧೂತರು ಅವತರಿಸಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಸಮಾಜದಲ್ಲಿನ ಕೊಳೆಯನ್ನು ತೊಳೆದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಅವರ ಕೊಡುಗೆ ನೀಡಿದ್ದಾರೆ. ಅಂತಹ ಶರಣರ ಸಾಲಿನಲ್ಲಿ ಕುಕನೂರಿನ ಅನ್ನದಾತ ಅನ್ನದಾನೇಶ್ವರ ಶಾಖಾ ಮಠವೂ ಕೂಡ ಒಂದಾಗಿದೆ, ಮುಂಡರಗಿಯ ಪೂಜ್ಯ ಡಾ// ಅನ್ನದಾನೇಶ್ವರ ಮಹಾಸ್ವಾಮಿಗಳವರ ಅನುಗ್ರಹದಿಂದ ಪ್ರಾರಂಭವಾದ ಶಾಖಾಮಠ ಜನರಲ್ಲಿ ಭಕ್ತಿ-ಭಾವಗಳನ್ನು ತುಂಬುವಲ್ಲಿ , ಆಧ್ಯಾತ್ಮಿಕ ಚಿಂತನೆ, ಶೈಕ್ಷಣಿಕ , ಸಾಮಾಜಿಕ ಮತ್ತು ಧಾರ್ಮಿಕ ಸೂದಾರಣೆಯಲ್ಲಿ ತೊಡಗಿಕೊಳ್ಳುವ ಮೂಲಕ ಧರ್ಮಪ್ರಚಾರ, ಶಿಕ್ಷಣ ಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದೆ.ಸೃಷ್ಟಿಕರ್ತ ಭೂಮಿಗೆ ಬರಲು ಸಾಧ್ಯವಿಲ್ಲದೆ ಇರುವ ಕಾರಣದಿಂದಾಗಿ ದೈವ ಸ್ವರೂಪವುಳ್ಳ ಮಾನವರಿಂದ ಕಲ್ಯಾಣ ಕಾರ್ಯಕ್ಕೆ ತೊಡಗಿಕೊಳ್ಳುವಂತೆ ಸಾಧು-ಸಂತರನ್ನು ಹುಟ್ಟಿಸಿ ಸಮಾಜದ ಹೇಳಿಗೆ, ನಾಡಿನ ಕೀರ್ತಿಯನ್ನು ಬೆಳಗುವ ಮೂಲಕ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ." ಧರ್ಮವಿಲ್ಲದ ವಿಜ್ಞಾನ, ವಿಜ್ಞಾನವಿಲ್ಲದ ಧರ್ಮ, ಎರಡು ಅಪೂರ್ಣ" ಎಂಬ ಮಾತನ್ನು ಖ್ಯಾತ ವಿಜ್ಞಾನಿಗಳಾದ ಐನ್ಸ್ಟೈನ ಅವರು ಹೇಳುತ್ತಾರೆ .ಇವರ ಮಾತಿನ ಮೂಲಕ ವೈಜ್ಞಾನಿಕ ಯುಗದಲ್ಲಿ ಧರ್ಮ ಅದನ್ನು ಮುಂದುವರಿಸಿಕೊಂಡು ಹೊರಟ ಸಾಧು-ಸಂತರ ಬಗ್ಗೆ ಅವರ ದೈವಿಕ ಶಕ್ತಿಯ ಮಹತ್ವದ ಅರಿವಾಗತ್ತದೆ.ಇಂತಹ ಶರಣರಲ್ಲಿ ಯುವ ಚೇತನದಂತೆ ಇರುವ,ಮಾದರಿ ಕೆಲಸಗಳನ್ನು ಮಾಡುತ್ತಿರುವ ಕುಕನೂರಿನ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಪೀಠಾಧಿಪತಿಗಳಾಗಿರುವ ಡಾ ಮಹಾದೇವ ದೇವರು ಒಂದಲ್ಲಾ ಒಂದು ಸಾಮಾಜಿಕ ಕಾರ್ಯವನ್ನು ಮಾಡುವುದರ ಮೂಲಕ ಶರಣರ ಕಾಯಕ ತತ್ವವನ್ನು ಪಾಲಿಸುತ್ತಿದ್ದಾರೆ.ಇವರು ಮೂಲತಃ ಬಳ್ಳಾರಿ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿಯ ತಾಲೂಕಿನ ಡಂಬರಹಳ್ಳಿ ಗ್ರಾಮದವರಾಗಿದ್ದಾರೆ. ಮೂತಹ ಕೃಷಿಯನ್ನು ಮಾಡುತ್ತಿರುವ ಇವರ ತಂದೆ ತಾಯಿಗಳು ವಿದ್ಯಾಭ್ಯಾಸಕ್ಕಾಗಿ ಇವರನ್ನು ಗದಗ ಜಿಲ್ಲೆಯ ಮುಂಡರಗಿಯ ಅನ್ನದಾನೇಶ್ವರ ಮಠಕ್ಕೆ ಓದಲು ಇವರನ್ನು ಕಳಿಸುತ್ತಾರೆ. ಈ ಮೂಲಕ ಅನ್ನದಾನೇಶ್ವರ ಮಠಕ್ಕೆ ಪ್ರವೇಶ ಪಡೆದು ಓದುವುದರ ಜೊತೆಗೆ ಕ್ರೀಡೆ,ಸಾಹಿತ್ಯ, ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಬೆಳಸಿಕೊಂಡು ಆ ಕ್ಷೇತ್ರ ಅನುಭವವನ್ನು ಪಡೆದು ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳುತ್ತಾರೆ . ಮೊದಮೊದಲು ಮುಂಗೋಪಿ ಯಾಗಿದ್ದವರು ಇವರು, ಕಾಲೇಜಿನಲ್ಲಿ ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ಶ್ರೀಮಠದ , ಶ್ರೀಗಳವರ ಕೆಲಸವನ್ನು ಮಾಡುವದ ಮೂಲಕ 2007ರಲ್ಲಿ ಡಾ// ಅನ್ನದಾನೇಶ್ವರ ಪೂಜ್ಯ ಶ್ರೀಗಳು ಇವರನ್ನು ತಮ್ಮ ಸೇವಕರನ್ನಾಗಿ ನೇಮಿಸಿಕೊಳ್ಳುತ್ತಾರೆ. ಇಲ್ಲಿಯವರೆಗೆ ಕಾಲೇಜಿನಲ್ಲಿ ಕ್ರೀಡೆ , ಸಾಹಿತ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದ ಇವರು ಮೊಟ್ಟಮೊದಲ ಬಾರಿಗೆ ಆಧ್ಯಾತ್ಮಿಕ ಚಿಂತನೆಯ ಬಗ್ಗೆ ಒಲವನ್ನು ತೋರುತ್ತ ಕ್ಷೇತ್ರದಲ್ಲಿ ಪರಿಣಿತಿಯನ್ನು ,ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಪೂಜ್ಯ ಶ್ರೀಗಳವರ ಸಾಧನೆ ಅವರ ಆಚಾರ- ವಿಚಾರಗಳಿಂದ ಪ್ರಭಾವಿತರಾದ ಇವರು ಶ್ರೀಗಳವರ ಕೆಲವೇ ಕೆಲವು ಶಿಷ್ಯರ ಬಳಗದಲ್ಲಿ ಇವರು ಕೂಡ ಒಬ್ಬರಾಗುತ್ತಾರೆ. ಆಧ್ಯಾತ್ಮ ಕ್ಷೇತ್ರದ ಒಲವು ಮತ್ತು ಅವರಲ್ಲಿದ್ದ ಚಿಂತನೆಗಳು ಮತ್ತು ಶರಣರ ತತ್ವಗಳ ಅವರ ಜೀವನದ ಮೇಲೆ ಪ್ರಭಾವ ಬೀರಿದ್ದನ್ನು ಕಂಡುಕೊಂಡ ಪೂಜ್ಯಶ್ರೀಗಳು ಇವರನ್ನು ತಮ್ಮ ಶಾಖಾ ಮಠಕ್ಕೆ ಸ್ವಾಮಿಗಳನ್ನಾಗಿ ನೇಮಕ ಮಾಡಲು ಬಯಸುತ್ತಾರೆ. ಅದರಂತೆ ಅವರ ತಂದೆ ತಾಯಿಗಳನ್ನು ಶ್ರೀಮಠಕ್ಕೆ ಕರೆತಂದು ಅವರಿಗೆ ನಿಮ್ಮ ಮಗನನ್ನು ಸ್ವಾಮಿಯನ್ನಾಗಿ ಮಾಡಿಕೊಳ್ಳುತ್ತೇವೆ ಎಂಬ ಮಾತನ್ನು ಹೇಳುತ್ತಾರೆ ಮೂಲಕ ತಂದೆ-ತಾಯಿಗಳ ಒಪ್ಪಿಗೆ ಮೇರೆಗೆ ಅವರನ್ನು 2010ಕ್ಕೆ ಮರಿಯಮ್ಮನಹಳ್ಳಿ ಶಾಖಾಮಠಕ್ಕೆ ನೇಮಿಸುತ್ತಾರೆ.ಇದಕ್ಕಿಂತ ಪೂರ್ವದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಇವರು ದೈಹಿಕ ಸದೃಢತೆ ಮತ್ತು ಮಾನಸಿಕ ಸದೃಢತ ಬಂದಿದ್ದುರು ಈ ಕಾರಣದಿಂದ ಛಿಡಿಠಿಜಿ ಪೋಲಿಸ ಇಲಾಖೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಯ್ಕೆಯಾಗಿರುತ್ತಾರೆ ಆದರೆ ತಂದೆ-ತಾಯಿಗಳ ಒಪ್ಪಿಗೆ ಇಲ್ಲದಿರುವುದು ಮತ್ತು ಪೂಜ್ಯ ಶ್ರೀಗಳವರ ಬಯಕೆಯಂತೆ ಸನ್ಯಾಸತ್ವವನ್ನು ಸ್ವೀಕರಿಸಲು ನಿರ್ಧಾರ ಮಾಡುತ್ತಾರೆ.ಅದರಂತೆ ಮರಿಯಮ್ಮನಹಳ್ಳಿಯ ಶಾಖಾ ಮಠಕ್ಕೆ ಬರುತ್ತಾರೆ ಅವರ ಸಮ್ಮುಖದಲ್ಲಿ ಎಲ್ಲಾ ಭಕ್ತರನ್ನು ಆಧ್ಯಾತ್ಮಿಕವಾಗಿ ಮಠದ ಜೀರ್ಣೋದ್ಧಾರ ಕ್ರಿಯೆಯಲ್ಲಿ ಐದು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಭಕ್ತರ ಸಮ್ಮುಖದಲ್ಲಿ ಗೋಪುರ , ಸಂಗೀತ ಪಾಠಶಾಲೆ , ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.ತಾವು ನೇಮಕವಾದ 5ವರ್ಷಗಳಲ್ಲಿ ಮಠದ ಸಂಪೂರ್ಣ ಜೀರ್ಣೋದ್ಧಾರ ಮಾಡಿ ಎಲ್ಲಾ ಭಕ್ತರಲ್ಲಿ ಸ್ಮರಣೀಯರಾಗಿದ್ದಾರೆ.ಇವರ ಈ ಸೇವೆಯನ್ನು ನೋಡಿದ ಮುಂಡರಗಿಯ ಪೂಜ್ಯ ಹಿರಿಯ ಶ್ರೀಗಳು ಇವರನ್ನು ಮತ್ತೆ 2015ರಲ್ಲಿ ಫೆಬ್ರುವರಿ 13 ನೇ ದಿನಾಂಕದಂದು ಕುಕನೂರಿನ ಶಾಖಾ ಮಠಕ್ಕೆ ನಿಯುಕ್ತಿ ಗೊಳಿಸಲು ತೀರ್ಮಾನಿಸುತ್ತಾರೆ . ಅದರಂತೆ ಮರಿಯಮ್ಮನಹಳ್ಳಿಯ ಸೇವೆಯ ನಂತರ ಫೆಬ್ರವರಿ13 2015ರಲ್ಲಿ ಕುಕನೂರಿನ ಶಾಖಾ ಮಠಕ್ಕೆ ನೇಮಕವಾಗುತ್ತಾರೆ.ವಿದ್ಯಾವಂತರು ,ವಾಗ್ಮಿಗಳು , ಶಿಕ್ಷಣ ಪ್ರೇಮಿಗಳು , ಪದವೀಧರರಾದ ಮಹಾದೇವ ದೇವರು ಶ್ರೀಮಠದ ಸತ್ಕಾರ್ಯಗಳನ್ನು ,ಧರ್ಮಕಾರ್ಯಗಳನ್ನು, ಪುರಾಣ ,ಮಕ್ಕಳ ಸಂಗೀತ ಪಾಠಶಾಲೆ, ಸಾಹಿತ್ಯ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಹಮ್ಮಿಕೊಳ್ಳುವ ಮೂಲಕ ಸಾವಿರಾರು ಕಲಾವಿದರನ್ನು ಅವರ ವಿದ್ವತ್ ಅನಾವರಣಗೊಳಿಸಲು ಸಹಾಯಕರಾಗಿದ್ದಾರೆ.ಯುವಕರು, ಕ್ರಿಯಾಶೀಲರಾದ ಮಹಾದೇವ ದೇವರು ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಹಾಕುತ್ತಾರೆ ಭಕ್ತರ ಭಕ್ತಿ-ಭಾವಗಳಿಂದ ಸುಂದರವಾದ ಶಾಂತವಾದ ವಾತಾವರಣ ನೀಡುವಂತ ಮಠವನ್ನು ನಿರ್ಮಿಸಲು ಶ್ರಮಿಸುತ್ತಿದ್ದಾರೆ ಭಕ್ತರ ಸಹಕಾರದೊಂದಿಗೆ ದ್ವಾರಬಾಗಿಲು, ವಿಶ್ರಾಂತಿ ಸ್ಥಳ, ಶಾಂತ ವಾತಾವರಣ ಮತ್ತು ಭಕ್ತಾದಿಗಳಿಗಾಗಿ ಶೌಚಾಲಯ ನಿರ್ಮಿಸಿದ್ದಾರೆ.ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಇವರು ಅದೇನೇ ಮುಂದುವರಿಸಿ ಮರಿಯಮ್ಮನಹಳ್ಳಿಯ ಶಾಖಾಮಠದಲ್ಲಿ ಇದ್ದ ಸಂದರ್ಭದಲ್ಲಿ ಮರಿಯಮ್ಮನಹಳ್ಳಿಯ ಶಾಖಾಮಠದ ಇತಿಹಾಸ ಕುರಿತಾದ ಗ್ರಂಥವನ್ನು ರಚಿಸಿದ್ದಾರೆ. ಇದಲ್ಲದೆ 20 ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. " ಎಲ್ಲರಿಗೂ ಸಮಾನ ಅವಕಾಶ ಮತ್ತು ಬೀಳುವನನ್ನ ಮೇಲೇಳುವಂತೆ ಮಾಡುವುದೇ ನಿಜವಾದ ಧರ್ಮ" ಎಂಬ ಮಾತನ್ನು ಪಾಲಿಸುವ ಇವರು. " ಸಮಾಜವನ್ನು ಸಾಮರಸ್ಯದಿಂದ ಕಟ್ಟುವ ಸಂಸ್ಕಾರ, ಧರ್ಮ ಬೋಧನೆಯ ಮೂಲಕ ಶಾಂತಿಯನ್ನು ತಿಳಿಸುವುದೇ ಒಬ್ಬ ಸನ್ಯಾಸಿಯ ನಿಜವಾದ ಕೆಲಸ" ಎಂದು ನಂಬಿರುವವರು ಆ ಮೂಲಕ ಶರಣರ ಕಾಯಕ ತತ್ವದ ಮೂಲಕವಾಗಿ ತಮ್ಮದೇ ಆಗಿರುವಂತ ಕಾರ್ಯಗಳನ್ನು ಮಾಡುತ್ತಿದ್ದಾರೆ.ಪ್ರತಿ ಮಾಸದಂತೆ ಕುಕನೂರಿನ ಶಾಖಾಮಠದಲ್ಲಿ ಯುವ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಕಲ್ಪಿಸುವುದರ ಮೂಲಕವಾಗಿ ಕಲೆ-ಸಾಹಿತ್ಯ ಜನಪದಂತ ಹಲವಾರು ಕ್ಷೇತ್ರಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ . ಯುವಕರಿಗೆ ,ಹಳೆ ತಲೆಮಾರುಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.ಈ ಮೊದಲು ಇದ್ದ ಬೈಲಾಟ ಸಂಘಕ್ಕೆ ಚೈತನ್ಯವನ್ನು ತುಂಬಿ ಹೊಸ ತಂಡವನ್ನು ರಚಿಸಿದ್ದಾರೆ. ಇದಲ್ಲದೆ ಮುಂದಿನ ಪೀಳಿಗೆಗಾಗಿ ಮಕ್ಕಳ ಬಯಲಾಟ ಸಂಘದ ಸ್ಥಾಪನೆ , ಮಹಿಳೆಯರಿಗಾಗಿ ಜನಪದ,ತತ್ವಪದ,ಲಾವಣಿ ಮುಂತಾದವುಗಳಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ " ಮಹಿಳಾ ಜನಪದ ಕಲಾತಂಡ ರಚಿಸಿ ಅವರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.ಈ ಹಿಂದೆ ಶ್ರೀಮಠದಲ್ಲಿ ನಡೆಯುತ್ತಿದ್ದ.ದಾಸೊಹ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾ ,ನಮ್ಮೂರು ನಮ್ಮ ಶಾಲೆ ಎಂಬ ಪರಿಕಲ್ಪನೆಯ ಮೂಲಕ ಗ್ರಾಮಗಳಲ್ಲಿ ಮತ್ತು ಭಕ್ತರ ಸಮ್ಮುಖದಲ್ಲಿ ತಾವೇ ಸ್ವತಃ ಸರಕಾರಿ ಶಾಲೆಗಳನ್ನು ಶುಚಿತ್ವದ ಗೊಳಿಸಿ, ಗೋಡೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಕೊಂಡಿದದ್ದಾರೆ.ಒಬ್ಬ ಸನ್ಯಾಸಿ ಮಠದ ಪೀಠಕ್ಕೆ ಮಾತ್ರ ಸಿಮಿತನಾಗದೇ ಭಕ್ತರ ಹೃದಯ ಪೀಠಕ್ಕೆ ಬರುವಂತ ಕಾರ್ಯಗಳನ್ನು ಮಾಡುತ್ತಿರಬೇಕು ಎಂಬುದನ್ನು ನಂಬಿಕೊಂಡವರಿವರು ಸಮಾಜದಲ್ಲಿ ಆಗುತ್ತಿರುವ ಅನಾಚಾರ , ಅಪನಂಬಿಕೆಗಳನ್ನು ಹೋಗಲಾಡಿಸಲು ಹಲವಾರು ಕಾರ್ಯಕ್ರಮಗಳ ಆಯೋಜನೆ ಮಾಡುವುದರ ಮೂಲಕ ಅವರಲ್ಲಿ ಮನಪರಿವರ್ತನೆ ಮಾಡಿದ್ದಾರೆ. ಶ್ರೀಮಠದ ಸುತ್ತಮುತ್ತಲಿನಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ,ಸಾಮಾಜಿಕ, ಧಾರ್ಮಿಕ,ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ನೇತೃತ್ವವನ್ನು ಇವರೇ ವಹಿಸಿ ಎಲ್ಲ ಕಾರ್ಯಕ್ರಮಗಳನ್ನು ಭಕ್ತರ ಮತ್ತು ಸಾಹಿತ್ಯಿಕ ಆಸಕ್ತರ ಸಮ್ಮುಖದಲ್ಲಿ ಮುಂಚೂಣಿಯಲ್ಲಿ ನಿಂತು ಯುವಕರಾಗಿ, ಆ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಕಾರ್ಯವನ್ನ ಕಂಡುಕೊಂಡ ಪ್ರಜಾವಾಣಿ ದಿನಪತ್ರಿಕೆ ಜನವರಿ ತಿಂಗಳಲ್ಲಿ ಆಯೋಜಿಸಿದ್ದ ಯುವ ಸಾಧಕರ ಪಟ್ಟಿಯಲ್ಲಿ ಪೂಜ್ಯ ಡಾ ಮಹಾದೇವ ದೇವರ ಧಾರ್ಮಿಕ , ಸಾಮಾಜಿಕ ಸೇವೆಗಳ ಪುರಸ್ಕರಿಸಿ " ಯುವ ಸಾಧಕರ "ಪ್ರಶಸ್ತಿಯನ್ನು ನೀಡುವುದು ಸ್ವಾಮಿಗಳವರ ಯುವ ನಿಸ್ವಾರ್ಥ ಸೇವೆ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿದೆ.ಧಾರ್ಮಿಕ ವಿಚಾರಗಳಿಗೆ ಮಾತ್ರ ಮಠ ಎಂಬಂತಿದ್ದ ಕಾಲದಲ್ಲಿ ಇಂಥ ಯುವ ಸನ್ಯಾಸಿಗಳು ಸಮಾಜ ಸುಧಾರಣೆಯ ಉದ್ದೇಶವನ್ನಿಟ್ಟುಕೊಂಡು ಸಮಾಜದಲ್ಲಾಗುತ್ತಿರುವ ಅನಾಚಾರಗಳನ್ನು ಸಮಾಜದಲ್ಲಾಗುತ್ತಿರುವ ವ್ಯತ್ಯಾಸಗಳನ್ನು ಮನಃಪರಿವರ್ತನೆಯ ಮಾಡುವುದರ ಮೂಲಕ ಮಾದರಿಯಾಗಿದ್ದು. ಸನ್ಯಾಸತ್ವದ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಕಾರ್ಯಕ್ರಮಗಳನ್ನು ತರುವಂತ ಕೆಲಸವನ್ನು ಮಾಡುತ್ತಿರುವ ಶ್ರೀಗಳಲ್ಲಿ ಅತ್ಯಂತ ಕಿರಿಯ ಶ್ರೀಗಳ ಆಗಿರುವ ಇವರು ವಯಸ್ಸು ಚಿಕ್ಕದಾಗಿದ್ದರೂ ಕೂಡ ಅತಿ ದೊಡ್ಡದಾಗಿರುವ ಸಮಾಜ ಸುಧಾರಣ ಕಾರ್ಯಗಳನ್ನು ಮಾಡುತ್ತಿದ್ದಾರೆ ಇಂತಹ ಶ್ರೀಗಳ ಪಡೆದಿರುವದು ಕುಕನೂರಿನ ಶಾಖಾಮಠದ ಸದ್ಭಕ್ತರೇ ಪುಣ್ಯವಂತರು. ಶ್ರೀಮಠದ ಭಕ್ತರೆಲ್ಲಾ ಸೇರಿ ಪೂಜ್ಯಶ್ರೀ ಗಳವರ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಿಸಬೇಕೆಂದು ವಿನಂತಿಸಿ ಕೊಂಡಾಗ. ಆಚರಿಸಿ ಆದರೆ ಯಾವುದಾದರೂ ಒಂದು ಸಾಮಾಜಿಕ ಸೇವೆ ನೀಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳಬೇಕು ಎಂಬುದನ್ನು ವಿಕಲಚೇತನರಿಗೆ ಸಾಮೂಹಿಕ ಮದುವೆಗಳನ್ನು ಮಾಡುವುದರ ಮೂಲಕ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಿಸುತ್ತಿರುವುದು ಇವರ ಸಮಾಜ ಸೇವೆಗೆ ಸಮಾಜ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ.ಶಿವನಗೌಡ ಪೋಲಿಸ್ ಪಾಟೀಲ ನವಲಹಳ್ಳಿ ಉಪನ್ಯಾಸಕರು ಲೇಖಕರು ಕೊಪ್ಪಳ9845646370.