ವಿಜಯನಗರ ಜಿಲ್ಲೆಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಶ್ರೀಯುತ ಎಂ.ದಾದಾಕಲಂದರ್ ಆಯ್ಕೆ

ವಿಜಯನಗರ ಜಿಲ್ಲೆಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಶ್ರೀಯುತ ಎಂ.ದಾದಾಕಲಂದರ್  ಆಯ್ಕೆ  Mr. M. Dadakalandar elected as the President of the Minority Unit of Vijayanagar District

ವಿಜಯನಗರ 03:   ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ವತಿಯಿಂದ ರಾಷ್ಟ್ರೀಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶ್ರೀಯುತ ಇಮ್ರಾನ್ ಪ್ರತಾಪಗರ್ಹಿ ಜಿ (ಎಂ.ಪಿ) ರವರ ಆದೇಶ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ವಿಜಯನಗರ ಜಿಲ್ಲೆಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಶ್ರೀಯುತ ಎಂ.ದಾದಾಕಲಂದರ್ ರವರನ್ನು ಆಯ್ಕೆ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರಾದ ಕೆ.ಅಬ್ದುಲ್ ಜಬ್ಬಾರ್ ಎಂ.ಎಲ್‌.ಸಿ. ರವರಿಗೆ ಆದೇಶ ನೀಡಿರುತ್ತಾರೆ. ತದನಂತರ ದಿನಾಂಕ : 25.02.2026 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಕೆ.ಅಬ್ದುಲ್ ಜಬ್ಬಾರ್ ಎಂ.ಎಲ್‌.ಸಿ. ರವರ ರಾಜ್ಯ ಕಛೇರಿ ಬೆಂಗಳೂರಿನಲ್ಲಿ ಅವರ ಸ್ವಹಸ್ತಾಂತರದಿಂದ ಆದೇಶ ಪತ್ರವನ್ನು ನೀಡಿರುತ್ತಾರೆ. ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀಯುತ ಸಿರಾಜ್‌ಶೇಖ್ ಮಾಜಿ ಶಾಸಕರು ಶ್ರೀಯುತ ಎಂ.ದಾದಾಕಲಂದರ್ ಇವರನ್ನು ಅಭಿನಂಧಿಸಿದರು.