ಗ್ರಾಮೀಣ ಭಾಗದಲ್ಲಿ ರಂಗಭೂಮಿ ಕಲೆಗೆ ಹೆಚ್ಚು ಪ್ರೋತ್ಸಾಹ: ಪಟೇಲ್
ಕೊಪ್ಪಳ 13: ರಂಗಭೂಮಿ ಕಲೆಯಲ್ಲಿ ನಮ್ಮ ನಾಡಿನ ಸಂಸ್ಕೃತಿ ಕಲೆ ಪರಂಪರೆ ಅಡಗಿದೆ ಇದು ನಶಿಸಿ ಹೋಗಬಾರದು ಇದರ ಉಳಿವಿ ಗಾಗಿ ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು, ರಂಗಭೂಮಿ ಕಲೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ದುರ್ಗಾದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಮಹರ್ಷಿ ವಾಲ್ಮೀಕಿ ಯುವಕ ನಾಟ್ಯ ಸಂಘ ಹ್ಯಾಟಿ ವತಿಯಿಂದ ಏರಿ್ಡಸಿದ ಡಿ ಆರ್ ಪೂಜಾರ್ ವಿರಚಿತ ಕೆರಳಿದ ಗಂಡು ಹುಲಿ ಅರ್ಥಾತ್ ದುರುಳರ ದಮನ ಎಂಬ ಸಾಮಾಜಿಕ ನಾಟಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು,ಮುಂದುವರೆದು ಮಾತನಾಡಿ ಮನುಷ್ಯನ ಜೀವನದ ನಿಜ ಘಟನೆ ಎತ್ತಿ ತೋರಿಸುವ ಕಲೆ ರಂಗಭೂಮಿ ಮಾಡುತ್ತಿದೆ ನಮ್ಮ ನಾಡಿನ ಕಲೆ ಸಂಸ್ಕೃತಿ ಪರಂಪರೆ ಇನ್ನೂ ಜೀವಂತವಾಗಿರಲು ರಂಗಭೂಮಿ ಕಲಾವಿದರ ಪರಿಶ್ರಮ ಹೆಚ್ಚಾಗಿದೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಸನ್ನಿವೇಶ ನಾಟಕ ಪ್ರದರ್ಶನದಲ್ಲಿ ಕಂಡುಬರುತ್ತವೆ ಅದರಂತೆ ನಾವು ನಮ್ಮ ಬದುಕು ಕಟ್ಟಿಕೊಳ್ಳಬೇಕು ನಮ್ಮ ದೇಶ ವಿಶಿಷ್ಟವಾಗಿದೆ ಇಲ್ಲಿರುವ ಪ್ರತಿಯೊಬ್ಬರು ಜಾತ್ಯತೀತ ಮನೋಭಾವನೆ ಬೆಳೆಸಿಕೊಳ್ಳಬೇಕು ಸಾಧು ಸಂತರು, ಋಷಿಮುನಿಗಳು ತೋರಿದ ಮಾರ್ಗದಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಲ್ಲರೊಂದಿಗೆ ಭಾತೃತ್ವ ಬೆಳೆಸಿಕೊಂಡು ಜೀವನ ಸಾಗಿಸಬೇಕು ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಂದ್ರ, ರಂಗಭೂಮಿ ಕಲಾವಿದ ಚಾಂದ್ ಪಾಷಾ ಕಿಲ್ಲೇದಾರ್ ಬಹದ್ದೂರ್ ಬಂಡಿ, ತೋಟಪ್ಪ ಕಾಮನೂರ ಸೇರಿದಂತೆ ದೇವಪ್ಪ ಬಹದ್ದೂರ್ ಬಂಡಿ ,ಗ್ಯಾನಪ್ಪ ,ಸೇತು ಸೊಪ್ಪಿನ ಮಠ ,ಮಹೇಶ್, ನಗರ ಆಶ್ರಯ ಕಮಿಟಿ ಸದಸ್ಯ ಪರಶುರಾಮ್ ಕೆರೆಹಳ್ಳಿ ,ಅಕ್ಬರ್, ಶಿವಣ್ಣ, ಅಲ್ಲದೆ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ನಂತರ ನಾಟಕ ಪ್ರದರ್ಶನ ಗೊಂಡು ಜನ-ಮನ ರಂಜಿಸಿತು.