ಇಂಡಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ ಸಭೆ

ಇಂಡಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ ಸಭೆ Meeting to review progress of guarantee schemes at Indi Taluk Panchayat Sabha Bhavan


ಇಂಡಿ 08: ಇಂದು ಇಂಡಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಐದು ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷರಾದ ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರೀಶೀಲನಾ ಸಭೆ ಜರುಗಿಸಲಾಯಿತು.  

ಸಹಕಾರ್ಯದರ್ಶಿ ಹಾಗೂ ಇಂಡಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ  ಡಾ.ಭೀಮಾಶಂಕರ ಕನ್ನೂರ   ರವರು ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಸ್ವಾಗತ ಕೋರಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳ ಕುರಿತು ಆಯಾ ಇಲಾಖೆಯ ಅಧಿಕಾರಿಗಳು ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷರಾದ ಪ್ರಶಾಂತ ಕಾಳೆ ರವರು ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಉತ್ತಮ ರೀತಿಯಲ್ಲಿ ಅನುಸ್ಥಾನಗೊಂಡಿದ್ದು ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಈ ಯೋಜನೆಗಳಿಗೆ ಸೇರಿಸುವ ಕಾರ್ಯ ಆಗಬೇಕೆಂದು ಸೂಚಿಸಿದರು.  

ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿಯ ಸದಸ್ಯರುಗಳಾದ   ಮಹೇಶ ಶಿ ಹೊನ್ನಬಿಠಗಿ ,  ಸಂಜಕುಮಾರ್ ಲ ನಾಯ್ಕೊಡಿ , ಸತೀಶ ಶ ಹತ್ತಿ , ಶ್ರೀಮತಿ ನಿರ್ಮಲ ಅ ತಳಕೇರಿ ,ಶ್ರೀಮತಿ ಶೈಲಜಾ ಜಾಧವ ,   ಶಶಿಕುಮಾರ ಮಠ  ಸಿದ್ದು ಕಟ್ಟಿಮನಿ ,ಪ್ರಭು  ಕುಂಬಾರ   ಸಂಕೇತ  ಜೋಶಿ ,  ಮಲೇಶಿ  ಬೋಸಗಿ , ರುದ್ರಗೌಡ  ಆಳಗೊಂಡ ,  ಭೀಮರಾಯ  ಮೇತ್ರಿ ,  ಸೋಮಣ್ಣ  ಪ್ರಚಂಡಿ ,  ಅಜಿತ  ಜೀರಗಿ, ಹಾಗೂ ಯೋಜನಾಧಿಕಾರಿಗಳು ತಾಲೂಕ ಪಂಚಾಯತ ಇಂಡಿ  ನಂದೀಪ ರಾಠೋಡ   ತಾಲೂಕಿನ ಎಲ್ಲ  ಇಲಾಖೆಗಳ ಅಧಿಕಾರಿಗಳು ,ತಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.