ದೇಶಕ್ಕಾಗಿ ಮಧ್ಯಸ್ಥಿಕೆ ಕಾನುನು ಅರಿವು ನೆರವು ಕಾರ್ಯಕ್ರಮ

ದೇಶಕ್ಕಾಗಿ ಮಧ್ಯಸ್ಥಿಕೆ ಕಾನುನು ಅರಿವು ನೆರವು ಕಾರ್ಯಕ್ರಮ  Mediation for the Country Legal Awareness Assistance Program


ಇಂಡಿ  ಜ.02; ರಿಂದ ದೇಶಕ್ಕಾಗಿ ಮಧ್ಯಸ್ಥಿಕೆ ತಾಲೂಕು ಕಾನೂನು ಸೇವಾ ಸಮಿತಿ ಇಂಡಿ, ಜಿಲ್ಲಾಕಾನೂನು ಸೇವಾ ಸಮಿತಿ ವಿಜಯಪುರ ಮತ್ತು ಕಾನೂನು ಪ್ರಾಧಿಕಾರ ಇಂಡಿ ಇವರ ಸಹಯೋಗದಲ್ಲಿ ತಾಲೂಕಿನ ನ್ಯಾಯಾಲಯದಲ್ಲಿ ಜ 02ರಿಂದ ಮಿಡಿಯೇಷನ್ ಫಾರ್ ನೇಶನ್ ದೇಶಕ್ಕಾಗಿ ಮಧ್ಯಸ್ಥಿಕೆ ಕಾನುನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ದಿವಾನಿ ನ್ಯಾಯಾಧೀಶ ಕೊಟಪ್ಪ ಕಾಂಬಳೆ ಹೇಳಿದರು. 

ಪಟ್ಟಣದ ನ್ಯಾಯಾಲಯದ ಆವರಣದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವ್ಯಾಜ್ಯಪೂರ್ವ ಬ್ಯಾಂಕು, ಟ್ರಾಫಿಕ್ ಪ್ರಕರಣ, ಕ್ರಿಮಿನಲ್ಸಾರ್ವಜನಿಕ ಉಪಯುಲಕ್ತತಾ ಪ್ರಕರಣ, ಚೆಕ್ ಬೌನ್ಸ,ಕೌಟುಂಬಿಕ ವ್ಯಾಜ್ಯ, ವಿಭಾಗದ ದಾವೆ, ಸಿವಿಲ್ ಪ್ರಕರಣ, ಮೋಟಾರು ವಾಹನ ಅಪಘಾತ ಪ್ರಕರಣ ಗಳನ್ನುಇತ್ಯರ್ಥಪಡಿಸಲಾಗುದು ಎಂದರು. 

ನ್ಯಾಯಾಲಯದಲ್ಲಿ ಜಾರಿ ಇರುವ ಪ್ರಕರಣ ರಾಜಿಆಗಬಹುದಾದ ಪ್ರಕರಣ ಆಯ್ಕೆ ಮಾಡಿ ಇಬ್ಬರಿಗೂಸಂಧಾನ ಪ್ರಕ್ರಿಯೆ ನಡೆಸಿ ಉಭಯ ಪಕ್ಷಗಳ ಅಹವಾಲು ಕೇಳಿ ಪಕ್ಷಿದಾರರಿಗೆ ಆಗುವ ಹಣಕಾಸಿನ ಹೊರೆ ತಪ್ಪಿಸಲು ಇಂಡಿಯಲ್ಲಿಯೇ ಕೋರ್ಟಿನ ಆವರಣದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿ ಅವರ ಮೂಲಕ ಬಗೆ ಹರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಯಾವದೇ ರೀತಿಯ ತೊಂದರೆ ಬರುವದಿಲ್ಲ ಎಂದರು.ಮಧ್ಯಸ್ಥಿಕೆ ಕೋರ್ಟು ಸುಮಾರು 90 ದಿನಗಳ ಕಾಲನಡೆಯುತ್ತಿದ್ದು ಅಲ್ಲಿ ನಿಮ್ಮ ವ್ಯಾಜ್ಯಬಗೆಹರಿಸಿಕೊಳ್ಳಬಹುದು ಎಂದು ಕಾಂಬಳೆ ತಿಳಿಸಿದರು.