ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ನೂತನ ಆಡಳಿತ ಮಂಡಳಿಗೆ ಆಯ್ಕೆ

ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ನೂತನ ಆಡಳಿತ ಮಂಡಳಿಗೆ ಆಯ್ಕೆ   Manikbag Digambar Jain Boarding School elected to new board of directors

ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ನೂತನ ಆಡಳಿತ ಮಂಡಳಿಗೆ ಆಯ್ಕೆ   

(ಫೊಟೊ ಕ್ಯಾಫ್ಶನ್‌. : ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಬೆಳಗಾವಿಯ ಈ ಸಂಸ್ಥೆಯ ಸನ್  2025-28 ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯ ಸದಸ್ಯರು)  

ಬೆಳಗಾವಿ:  ದಕ್ಷಿಣ ಭಾರತ  ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಬೆಳಗಾವಿಯ ಈ ಸಂಸ್ಥೆಯ ಸನ್  2025-28 ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಇತ್ತಿಚಿಗೆ ಆಯ್ಕೆ ಮಾಡಲಾಯಿತು.  

ಅಧ್ಯಕ್ಷರಾಗಿ ಪುಷ್ಪಕ ಹನಮಣ್ಣವರ, ಉಪಾಧ್ಯಕ್ಷರಾಗಿ ಸಂಜಯ ಕುಚನೂರೆ, ಕಾರ್ಯದರ್ಶಿಯಾಗಿ ಸನ್ಮತಿ ಕಸ್ತೂರಿ ಸಹ ಕಾರ್ಯದರ್ಶಿಯಾಗಿ ಯಲ್ಲಪ್ಪ ಮೇಲಿನಮನಿ, ಅಧಿಕ್ಷಕರಾಗಿ ಜಿತೇಂದ್ರ ಅಗಸಿಮನಿ , ಸಹ ಅಧಿಕ್ಷಕರಾಗಿ ರಾಜೇಂದ್ರ ಹಲಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಕುಂತಿನಾಥ ಕಲಮನಿ, ಬಾಹುಬಲಿ ಪಾಟೀಲ,ಅಶೋಖ ಬೆಂಢಿಗೇರಿ, ಭಾರತಿ ಸವದತ್ತಿ, ಪದ್ಮಜಾ ಪಾಟೀಲ, ನಾಗರಾಜ ಹುಂಡೆಕರ, ಸಂಜೀವಕುಮಾರ ಜನಗೌಡಾ, ನೀತೀನ ಸೋಲಕನಪಾಟೀಲ, ಹೇಮಂತ  ಲಠ್ಠೆ, ಅಪ್ಪಾಸಾಹೇಬ ಕ್ಪಟಗೆನ್ನವರ, ರತನ ರಾಮಗೊಂಡಾ,ಅನಿಲ ಮ್ಯಾಕಲಮರಡಿ, ಅಶೋಕ ದಾನವಾಡೆ, ಬಮ್ಮಣ್ಣ ಚೌಗುಲೆ, ಅನಿಲ ಪಾಟೀಲ, ನಾಭಿರಾಜ ನಾಂದಣಿ, ಸುರೇಶ ಚೌಗುಲೆ, ರೂಪಾಲಿ ಜನಾಜ,ಸಂತೋಷ ಭಾವಿ, ತವನಪ್ಪಾ ಪಾಲಕರ, ವಿದ್ಯಾಸಾಗರ ಮಾನಗಾಂವೆ, ಪ್ರಮೋದ ಪಾಟೀಲ, ದೀಪಕ ಸುಬೇದಾರ, ವಿನಯಕುಮಾರ ಪಾಟೀಲ, ಆಮಂತ್ರಿತ ಸದಸ್ಯರಾಗಿ ರೇವತಿ ಅಡಕೆ, ಪದ್ಮರಾಜ  ವೈಜನ್ನವರ, ಸುರೇಖಾ ಗೌರಗೊಂಡಾ ಇವರನ್ನು ಆಯ್ಕೆ ಮಾಡಲಾಯಿತು.  

ಅದರಂತೆ ಬೆಳಗಾವಿ ವಿಭಾಗದ ಟ್ರಸ್ಟಿಯಾಗಿ  ಸಿದ್ದಪ್ಪಾ ನಾಗನೂರ, ವಿಭಾಗದ ಉಪಾಧ್ಯಕ್ಷರಾಗಿ ಅಶೋಕ ಜೈನ, ಮಹಾಮಂತ್ರಿಯಾಗಿ ರಾವಸಾಹೇಬ ಕುನ್ನೂರೆ, ಮಹಿಳಾ ಮಹಾಮಂತ್ರಿ ಅನಿತಾ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.  

ಈ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ದಕ್ಷಿಣ ಭಾರತ ಜೈನ ಸಭೆಯ ಚೇರಮನ್ ಸಂಜಯ ಶೆಟೆ, ಹಿರಿಯ ಉಪಾಧ್ಯಕ್ಷ ಅಭಿನಂದನ ಪಾಟೀಲ, ಮುಖ್ಯಮಹಾಮಂತ್ರಿ ಅನಿಲ ಬಾಗನೆ ಖಜಾಂಚಿ ಬಾಳಾಸಾಹೇಬ ಪಾಟೀಲ ಉಪಸ್ಥಿತರಿದ್ದು, ಆಯ್ಕೆ  ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನೀರೀಕ್ಷಕ ಅಶೋಕ ಕುಸನಾಳೆ ಉಪಸ್ಥಿತರಿದ್ದರು.