ನಾಳೆ ಮಹಿಪತಿದಾಸರ ಉಪನ್ಯಾಸ ಕಾರ್ಯಕ್ರಮ

  ನಾಳೆ ಮಹಿಪತಿದಾಸರ  ಉಪನ್ಯಾಸ ಕಾರ್ಯಕ್ರಮ Mahipatidasa's lecture program tomorrow

  ನಾಳೆ ಮಹಿಪತಿದಾಸರ  ಉಪನ್ಯಾಸ ಕಾರ್ಯಕ್ರಮ 


ವಿಜಯಪುರ  02 : ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ನಾಳೆ ಅಂದರೆ ಅಗಸ್ಟ್‌ 3 , ರವಿವಾರ ಸಂಜೆ 5.30 ಗಂಟೆಗೆ "ದಾಸವರೇಣ್ಯ ಮಹಿಪತಿದಾಸರ ಜೀವನ,ಸಾಹಿತ್ಯ ಹಾಗೂ ಸಮಕಾಲೀನ ಇತಿಹಾಸ” ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. 

"ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ" ಆಯೋಜನೆಯ ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಶೋಧಕರು , ಇತಿಹಾಸ ತಜ್ಞರ ಸಾಹಿತಿಗಳು ಜೊತೆಗೆ ಮಹಿಪತಿ ದಾಸರ ಮೇಲೆ ಪಿಎಚ್ಡಿ (ಡಾಕ್ಟರೇಟ್) ಮಾಡಿರುವ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಹಾಗೂ ಸಾಹಿತಿಗಳು , ಅಭಾಸಾಪ ಜಿಲ್ಲಾಧ್ಯರಾದ ನಾರಾಯಣ ಬಾಬಾನಗರ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ಕೃಷ್ಣ ಕೊಲ್ಗಾರ ಕುಲಕರ್ಣಿ ಅವರ ಪುಸ್ತಕಗಳು ಹಾಗೂ ಮಹಿಪತಿದಾಸರ ಕುರಿತ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ ಎಂದು 

"ಅಭಾಸಾಪ ವಿಜಯಪುರ" ಉಪಾಧ್ಯಕ್ಷರಾದ ವಿವೇಕ ಕುಲಕರ್ಣಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880050818 , 9535792295 ,9900460373 ಸಂಪರ್ಕಿಸಲು ಕೋರಲಾಗಿದೆ.