ರಾಜ್ಯ ಸಂಚಾಲಕರಾಗಿ ಮಹಾನಂದ ಅಮಲಾಪೂರ ನೇಮಕ

ರಾಜ್ಯ ಸಂಚಾಲಕರಾಗಿ ಮಹಾನಂದ ಅಮಲಾಪೂರ ನೇಮಕ Mahananda Amalapur appointed as state coordinator


ಬಾಗಲಕೋಟೆ 07: ಜಿಲ್ಲೆಯ ರಬಕವಿ -ಬನಹಟ್ಟಿ ತಾಲೂಕಿನ ಸೈದಾಪುರ- ಸಮೀರವಾಡಿ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೆಪಿಸಿಸಿ ಅಧ್ಯಕ್ಷ ಆರ್ ಧರ್ಮಸೇನ ಅವರು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರಾಗಿ ಸಮೀರವಾಡಿ ನಿವಾಸಿಯಾಗಿ ಮಹಾನಂದ ಸಂಜೀವ ಅಮಲಾಪೂರ ಅವರನ್ನು ನೇಮಕ ಮಾಡಲಾಯಿತು. 

ಈ ಕುರಿತು ಇತ್ತೀಚಿನ ಆದೇಶ ಪತ್ರಿಕೆ ನೀಡಿರುವ ಅವರು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಮಲ್ಲಿಕಾರ್ಜುನ ಖರ್ಗೆ, ಸಂಚಾಲಕ ಕೆ ರಾಜು ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷರ ರಾಜೇಂದ್ರ ಪಾಲ್ ಗೌತಮ ಅವರ ಆದೇಶ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಅನುಮೋ   ದನೆಮೇರೆಗೆ          ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಈ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೆಪಿಸಿಸಿ ಲೇಬರ್ ಸೆಲ್ ಉಪಾಧ್ಯಕ್ಷರಾದ ಎಚ್‌ಎಸ್ ಭಜಂತ್ರಿ, ಸಂಜೀವ ಅಮಲಾಪೂರ ಇದ್ದರು.