ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಸಂಸದೆ ಪ್ರಿಯಾಂಕ ಜಾರಕಿಹೊಳೆ ಚಾಲನೆ

ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಸಂಸದೆ ಪ್ರಿಯಾಂಕ ಜಾರಕಿಹೊಳೆ ಚಾಲನೆ MP Priyanka Jarkihole launches construction work for garbage disposal unit

ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಸಂಸದೆ ಪ್ರಿಯಾಂಕ ಜಾರಕಿಹೊಳೆ ಚಾಲನೆ 

ರಾಯಬಾಗ, 04 ; ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ರಾಯಬಾಗ ಮತಕ್ಷೇತ್ರದಲ್ಲಿ ಅಭಿವೃದ್ದಿಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ರಸ್ತೆ, ಹೈಮಾಸ್ಟ್‌ ವಿದ್ಯುತ್ ದೀಪ ಅಳವಡಿಕೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಸದೆ ಪ್ರಿಯಾಂಕ ಜಾರಕಿಹೊಳಿ ಹೇಳಿದರು. 

ಬುಧವಾರ ಸಾಯಂಕಾಲ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಮಂಜೂರಾದ 3 ಕೋಟಿ 92 ಲಕ್ಷ ರೂ. ಅನುದಾನದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಭೂ ಪೂಜೆ ನೆರವೇರಿಸಿ, ಪೌರಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಪಟ್ಟಣ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರು ಸೂಕ್ತ ರೀತಿಯಲ್ಲಿ ಕಸವನ್ನು ವಿಲೇವಾರಿ ಮಾಡಲು ಪೌರಕಾರ್ಮಿಕರಿಗೆ ಸಹಕರಿಸಬೇಕು. ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಒಂದೊಂದಾಗಿ ಈಡೇರಿಸುತ್ತಿದ್ದು, ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಪ.ಪಂ.ಅಧ್ಯಕ್ಷೆ ಕವಿತಾ ಯಡ್ರಾಂವೆ, ಮುಖ್ಯಾಧಿಕಾರಿ ವಿ.ಆರ್‌.ಬಳ್ಳಾರಿ, ಜಿತೇಂದ್ರ ಜಾಧವ, ಶಿವನಗೌಡ ಪಾಟೀಲ, ಸಿದ್ದು ಬಂಡಗಾರ, ದೀಲೀಪ ಜಮಾದಾರ, ನಿರ್ಮಲಾ ಪಾಟೀಲ, ಹಾಜಿ ಮುಲ್ಲಾ, ಕುಮಾರ ಹಾರೂಗೇರಿ, ಮಹಾದೇವ ದಂಡಾಪೂರೆ, ಫಿರೋಜ ಮಕಾಂದಾರ, ಸಂಭಾ ಶಿಂಧೆ, ಬಾಹುಬಲಿ ಹಂಡಗೆ, ಅಂಕುಶ ಜಾಧವ, ರವಿ ಭಿರಡಿ, ವಿಲಾಸ ಕಾಂಬಳೆ, ಲಕ್ಷ್ಮಣ ತುಳಸಿಗೇರಿ, ಕುಮಾರ ಖೋತ, ಅಜೀತ ಈರಗಾರ, ರಮೇಶ ಹಾರೂಗೇರಿ, ಜಾಕೀರ ತರಡೆ, ಶೈಲಜಾ ಕರಿಭೀಮಗೋಳ, ತನುಜಾ ಶಿಂಗೆ ಸೇರಿ ಅನೇಕರು ಇದ್ದರು.