ವೇಮನ ಜಯಂತಿ ಪ್ರಯುಕ್ತ ರೆಡ್ಡಿ ಸಮಾಜದಿಂದ ಶಾಸಕ ಹಿಟ್ನಾಳ ಮತ್ತು ಗುಪ್ತಾಗೆ ಸನ್ಮಾನ

MLA Hitna and Gupta felicitated by Reddy Samaj on Vemana Jayanti

ವೇಮನ ಜಯಂತಿ ಪ್ರಯುಕ್ತ ರೆಡ್ಡಿ ಸಮಾಜದಿಂದ ಶಾಸಕ ಹಿಟ್ನಾಳ ಮತ್ತು ಗುಪ್ತಾಗೆ ಸನ್ಮಾನ

ಕೊಪ್ಪಳ 19: ಕೊಪ್ಪಳ ಜಿಲ್ಲಾ ಆಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕೊಪ್ಪಳ ರೆಡ್ಡಿ ಸಮಾಜದ ಕೊಪ್ಪಳ ಜಿಲ್ಲಾ ಘಟಕದಿಂದ ಜರುಗಿದ, ಮಹಾ ಯೋಗಿ ವೇಮನ ಜಯಂತಿಯ ಪ್ರಯುಕ್ತ, ಕೊಪ್ಪಳದ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರನ್ನು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಅವರನ್ನು ರೆಡ್ಡಿ ಸಮಾಜದ ವತಿಯಿಂದ ಸತ್ಕರಿಸಲಾಯಿತು.  ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ತಾಲೂಕ ಘಟಕದ ಅಧ್ಯಕ್ಷ ಪ್ರಭು ಹೆಬ್ಬಾಳ. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್‌. ಬಿ. ನಾಗರಹಳ್ಳಿ. ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್, ಕೊಪ್ಪಳದ ತಹಶೀಲ್ದಾರ್ ವಿಟ್ಟಲ್,  ಚೌಗೋಲ, ಡಾ. ವಿ.ಬಿ. ರೆಡ್ಡೇರ್, ಎಚ್, ಎಲ್, ಹಿರೇಗೌಡರ್, ಎಸ್ ಎಂ.ದಾನರೆಡ್ಡಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.