ಇಳುವರಿ ಕಡಿಮೆ* ಬೆಲೆ ಕುಸಿತದಿಂದ ರೈತರಲ್ಲಿ ನಿರಾಶೆ* ಕೈಚಲ್ಲಿ ಕುಳಿತ ರೈತರು

ಇಳುವರಿ ಕಡಿಮೆ* ಬೆಲೆ ಕುಸಿತದಿಂದ ರೈತರಲ್ಲಿ ನಿರಾಶೆ* ಕೈಚಲ್ಲಿ ಕುಳಿತ ರೈತರು Low yields* Farmers disappointed due to falling prices* Farmers sitting on their hands

 

ಇಳುವರಿ ಕಡಿಮೆ* ಬೆಲೆ ಕುಸಿತದಿಂದ ರೈತರಲ್ಲಿ ನಿರಾಶೆ* ಕೈಚಲ್ಲಿ ಕುಳಿತ ರೈತರು 

  

ಮಾಂಜರಿ : ಪ್ರಸಕ್ತ ಸಾಲಿನಲ್ಲಿ ಬಂದೆರಗಿದ ಪ್ರವಾಹದಿಂದಾಗಿ ಹಾಗೂ ಹವಾಮಾನ ವೈಫಲ್ಯದಿಂದಾಗಿ ಶೇಂಗಾ ಉತ್ಪಾದನೆ ಶೇ.10 ರಿಂದ 15ರಷ್ಟು ಕುಸಿದಿದ್ದು ಕಳೆದ 8-10 ದಿನಗಳಿಂದ ಶೇಂಗಾ ತೆಗೆಯವ ಕಾರ್ಯ ಗಡಿ ಗ್ರಾಮಗಳಲ್ಲಿ ಚುರುಕುಗೊಂಡಿದೆ. ಈ ನಡುವೆ ಬೆಲೆ ಕೂಡ ಕುಸಿದಿದ್ದರಿಂದ ರೈತರಲ್ಲಿ ನಿರಾಶೆ ಮೂಡಿಸಿದೆ. 

ಪ್ರಸಕ್ತ ಸಾಲಿನಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ 5,300 ಹಾಗೂ ನಿಪ್ಪಾಣಿ ತಾಲೂಕಿನಲ್ಲಿ 4.800 ಹೀಗೆ ಒಟ್ಟು 10,100 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯುವ ಗುರಿ ಹೊಂದಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಪಂಚ ನದಿಗಳಿಗೆ ಪ್ರವಾಹ ಬಂದಿದ್ದರಿಂದ ಸುಮಾರು 1800 ಹೆಕ್ಟೇರ್ ಶೇಂಗಾ ಬೆಳೆ ನಾಶವಾಗಿದೆ. ಕಳೆದ ಸಾಲಿನಲ್ಲಿ ಶೇಂಗಾ ಸರಾಸರಿ 55 ರಿಂದ 65 ರೂ. ಪ್ರತಿ ಕಿಲೋಗೆ ಮಾರಾಟವಾಗಿತ್ತು. ಈ ವರ್ಷದ 40 52 ಹಂಗಾಮಿನಲ್ಲಿ ಸವಾಗುತ್ತಿದೆ. ರಿಂದ ರೂ, ಮಾರಾಟ ಮಾಡಲು ಮುಂದಾಗಿದ್ದು ಪ್ರಸಕ್ತ ಸಾಲಿನಲ್ಲಿ ಶೇಂಗಾ ಉತ್ಪಾದನೆ ಜೊತೆಗೆ ಬೆಲೆಯೂ ಕುಸಿದಿದ್ದರಿಂದ ಉತ್ಪಾದಕರಲ್ಲಿ ನಿರಾಶೆ ಮೂಡಿಸಿದೆ. 

ಪ್ರತಿ ಎಕರೆ 5ರಿಂದ 8 ಕ್ವಿಂಟಾಲ್ ಶೇಂಗಾ ಉತ್ಪಾದನೆ ಯಾಗಿದ್ದು ಇಳುವರಿ ಕಡಿಮೆಯಾಗಿದೆ. ಶೇಂಗಾ ತೆಗೆಯುವ ಸಂದರ್ಭದಲ್ಲಿ ಜಿಟಿಜಿಟಿ ಮಳೆ ಅಡ್ಡಿ ಮಾಡುತ್ತಿದೆ. ತೆಗೆದ ಶೇಂಗಾ ಒಣಗುತ್ತಿಲ್ಲ. ಇದರಿಂದಾಗಿ ರೈತರು ಕೈಚಲ್ಲಿ ಕುಳಿತಿದ್ದಾರೆ. 

ಸಾಮಾನ್ಯವಾಗಿ ವಾಗಿ ಶೇಂಗಾ ಬೆಳೆಯನು ಮೇ.15ರಿಂದ ಜೂನ್ 15ರವರೆಗೆ ನಾಟ ಬೆಳೆಯನ್ನು ಮಾಡುತ್ತಾರೆ. ಕಳೆದ ಸಾಲಿನಲ್ಲಿ ಪ್ರತಿ ಎಕರೆಗೆ ಸರಾಸರಿ 10 ಕ್ವಿಂಟಾಲ್ ಶೇಂಗಾ ಬೆಳೆ ಉತ್ಪಾದನೆಯಾಗಬೇಕಿತ್ತು. ಆದರೆ ಈ ಸಾಲಿನಲ್ಲಿ ಹವಾಮಾನ ವೈಫಲ್ಯದಿಂದಾಗಿ ಎಕರೆಗೆ ಸರಾಸರಿ 5 ರಿಂದ 8 ಕ್ವಿಂಟಲ್ ಮಾತ್ರ ಉತ್ಪಾದನೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಉತ್ಪಾದನೆ ಕುಸಿದಿದ್ದು ಬೆಲೆ ಹೆಚ್ಚಾಗಬೇಕಿದೆ ಎನ್ನುತ್ತಾರೆ ರೈತರು. 

ಗಡಿಭಾಗದಲ್ಲಿ ಕಬ್ಬು ಮತ್ತು ಸೋಯಾ ಬೆಳೆಯ ನಂತರ 3ನೇ ಸ್ಥಾನದಲ್ಲಿ ಶೇಂಗಾ ಕಾರ್ಮಿಕರು, ಬೆಳೆಯುತ್ತಾರೆ. ಈ ಬೆಳೆಯು 90 ರಿಂದ 100 ದಿನಗಳಲ್ಲಿ ಬರುತ್ತದೆ. ಸೆಪ್ಟೆಂಬರ ತಿಂಗಳಲ್ಲಿ ರೈತರ ಕೈಯಲ್ಲಿ ದುಡ್ಡು ಬರುತ್ತದೆ. 


ಈ ಉತ್ಪಾದನೆ ಹೆಚ್ಚಿಗೆ ಆಗಬಹುದೆಂಬ ನೀರೀಕ್ಷೆ ರೈತರಲ್ಲಿತ್ತು. ಆದರೆ ಪ್ರವಾಹದಿಂದ ಶೇ.15ರಷ್ಟು ಬೆಳೆ ನಾಶವಾಗಿದೆ. ಆಳಿದುಳಿದ ಶೇಂಗಾ ಮಾರಾಟಕ್ಕೆ ರೈತರು ವಲಗುಕಟ್ಟೆಗಳಿಗೆ ಬಾಗುತ್ತಿದ್ದು ವೈಜ್ಞಾನಿಕ ಬೆಲೆಗಾಗಿ ಕಾಯುತ್ತಿದ್ದಾರೆ.  

ಬಾಕ್ಸ್ದಲ್ಲಿ : ಜಿಟಿ-ಜಿಟಿ ಮಳೆಯಿಂದಾಗಿ ಭೂಮಿ ಹಸಿ ಇರುವುದರಿಂದ ಶೇಂಗಾ ತೆಗೆಯಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಇನ್ನೊಂದಡೆ ಹೊಲದಲ್ಲಿ ಶೇಂಗಾ ನಿಗದಿಪಡಿಸಿದ ದಿನಕ್ಕಿಂತ ಹೆಚ್ಚುಕಾಲ ನಿಂತರೆ ಮೊಳಕೆ ಒಡೆದು ನಾಶವಾಗುತ್ತದೆ ಎನ್ನುತ್ತಾರೆ ಉತ್ಪಾದಕರು. ಒಟ್ಟಿನಲ್ಲಿ ಪ್ರಸಕ್ತ ಸಾಲಿನ ಮಳೆ ಮತ್ತು ಪ್ರವಾಹ ರೈತರನ್ನು ಒಂದಲ್ಲಾ ಒಂದು ರೀತಿ ಕಾಡಿರುವುದು ಮಾತ್ರ ಸತ್ಯ!.