ಲೋಕ್ ಅದಾಲತನಲ್ಲಿ : ಒಟ್ಟು 190 ಪ್ರಕರಣ ಇತ್ಯರ್ಥ
Lok Adalat: A total of 190 cases have been disposed of
ಲೋಕ್ ಅದಾಲತನಲ್ಲಿ : ಒಟ್ಟು 190 ಪ್ರಕರಣ ಇತ್ಯರ್ಥ
ಮುಂಡಗೋಡ, 14 ; ಮುಂಡಗೋಡ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರ, ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರವಾರ ರವರ ನಿರ್ದೇಶನ ಮೇರೆಗೆ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನ್ಯಾಯಿಕ ಸ0ದನಕಾರರಾಗಿ ನ್ಯಾಯಾಧೀಶರಾದ ಶ್ರೀಮತಿ ಅಕ್ಷತಾ ಸಿ.ಆರ್. ಹಾಗೂ ನ್ಯಾಯ ಕೇತರ ಸಂಧಾನಕಾರರಾಗಿ ವಕೀಲರಾದ ಕೆ.ಆರ್.ಹಂಚಿನಮನಿ ಹಾಜರಿದ್ದರು.
ಶನಿವಾರ ನಡೆದ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ 172.8 ಆಕ್ಟ್ ಪ್ರಕರಣಗಳು, ಅಮಲ್ದಾರಿ 8 ಪ್ರಕರಣಗಳು, ಮೂಲದಾವಾ 7 ಪ್ರಕರಣಗಳು, ಜನನ-ಮರಣ 41 ಪ್ರಕರಣಗಳು, ಪಿ.ಸಿ.ಆರ್02 ಪ್ರಕರಣಗಳು, ಎಫ್ಡಿಪಿ ಹಾಗೂ 114 ಪೊಲೀಸ ಸಿಬಂದಿ ಪೊಲೀಸ ಸಿಬ0ದಿ ವ್ಯಾಜ್ಯ ಪೂರ್ವ 337 ಪ್ರಕರಣಗಳು ಇತ್ಯರ್ಥಗೊಂಡು ಅವುಗಳ ಪೈಕಿ 11,75, 386/-ರೂ ವಸೂಲಾಗಿಸದ್ರಿ ಹಣವನ್ನು ಸರ್ಕಾರಕ್ಕೆ ಹಾಗೂ ಬ್ಯಾಂಕುಗಳಿಗೆ ಬಣ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕರಾದ ಪ್ರಸಾದ ಹೆಗಡೆ, ಮುಂಡಗೋಡ ವಕೀಲರ ಸಂಘದ ಅಧ್ಯಕ್ಷರಾದ ಎನ್.ಎ.ನಿಂಬಾಯಿ, ಉಪಾದ್ಯಕ್ಷ ರಾದ ಎಸ್.ಎವರ್.ಮಲವಳ್ಳಿ, ಕಾರ್ಯದರ್ಶಿ ಎಸ್.ಕೆ.ಕೊಳ್ಳಾನ ವರ, ಖಜಾಂಚಿ ಕೆ.ಎಸ್. ಗುಲ್ಯಾನವರ ಹಿರಿಯ ವಕೀಲರಾದ ಸಿ.ಎಸ್.ಗಾಣಗೇರಿ, ಕೆ.ಎನ್. ಹೆಗಡೆ, ಬಿ.ಎಫ್.ಪೂಜಾರ, ಗುಡ್ಡಪ್ಪ ಕಾತೂರ, ಮೊಹ್ಮದಸಲೀಂ ನಂದಿಗಟ್ಟಿ, ಸುಜೀತ ಎಸ್., ನಟರಾಜ ಕಾತೂರ, ಆರ್.ಎಸ್. ಹಂಚಿನಮನಿ, ಆರಿ್ಬ. ಹುಬ್ಬಳ್ಳಿ, ಜಿ.ಆರ್.ಆಲದಕಟ್ಟಿ, ಗೀತಾಡಿ.ಕೆ,, ದೀಪ್ತಿ ಅಂಡಗಿ, ಭಾರತಿ, ಪ್ರಮೋದ ಸಣ್ಣಮನಿ, ನಾಗರಾಜ ಬಾರ್ಕಿ, ಹಾಗೂ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 