ಕೃಷ್ಣಶರ್ಮರ ಗೀತ ಗಾಯನ ಸ್ಪರ್ಧೆ ಆಯೋಜನೆ

ಕೃಷ್ಣಶರ್ಮರ ಗೀತ ಗಾಯನ ಸ್ಪರ್ಧೆ ಆಯೋಜನೆ Krishna Sharma's song singing competition organized

                  ಕಾಗವಾಡ 29: ಬೆಳಗಾವಿ ನಗರದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ದಿ. 28 ರಂದು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ಸಹಯೋಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಡಾ. ಬೆಟಗೇರಿ ಕೃಷ್ಣಶರ್ಮ ಅವರ ವಿರಚಿತ ಗೀತೆಗಳ ಗಾಯನ ಸ್ಪರ್ಧೆಯನ್ನು ಏರಿ​‍್ಡಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸರ್ಕಾರಿ ಚಿಂತಾಮಣಿರಾವ ಪ.ಪೂ.ಕಾಲೇಜಿನ ಉಪನ್ಯಾಸಕ ಜ್ಯೋತಿ ಸಿ.ಎಂ. ಭಾಗವಹಿಸಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಮನದಟ್ಟನೆ ಮಾಡಿದರು. ಸ್ಪರ್ಧೆಯಲ್ಲಿ ವಿವಿಧ ಮಹಾವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ  

                       ಪ್ರಾಂಶುಪಾಲ ಪ್ರೊ. ರವಿ ದಂಡಗಿ ವಹಿಸಿ, ಮಾತನಾಡುತ್ತ ಪ್ರಸ್ತುತ ಗೀತೆಗಳಿಗೆ ಹೋಲಿಸಿದರೆ ಮೊದಲ ರಚಿಸಿದ ಹಾಡುಗಳ ಬಹಳ ಅರ್ಥ ಪೂರ್ಣವಾಗಿದ್ದವು. ವಿದ್ಯಾರ್ಥಿಗಳು ಸಾಹಿತ್ಯದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮತ್ತು ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ ಉತ್ತಮವಾದ ಕಾರ್ಯಗಳನ್ನು  ಕೈಗೊಂಡಿದೆ ಎಂದು ಶ್ಲಾಘಿಸಿದರು. ಈ ವೇಳೆ ಉಪ-ಪ್ರಾಂಶುಪಾಲ ಡಾ ಭರತ ಅಲಸಂದಿ, ಪ್ರೊ. ನಿರ್ಮಲಾ ಗಡಾದ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವರಾಂಜಲಿ ಗುಂಪಿನವರು ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ಕಂಚಿ ಸ್ವಾಗತಿಸಿದರು. ಪವಿತ್ರಾ ಹಿರೇಮಠ ಪರಿಚಯಿಸಿದರು. ಸೌಮ್ಯಾ ಹಣಬರಟ್ಟಿ ಮತ್ತು ಸ್ವಾತಿ ಬಾಳೆಕುಂದ್ರಿ ನಿರೂಪಿಸಿದರು. ನಾಗವೇಣಿ ಧರೆಣ್ಣವರ ವಂದಿಸಿದರು.