ನೂತನ ವಕೀಲರ ಸಂಘದ ಅಧ್ಯಕ್ಷರಾದ ಕೋಟಿವಾಲೆ ಅವರಿಗೆ ಸನ್ಮಾನ

ನೂತನ ವಕೀಲರ ಸಂಘದ ಅಧ್ಯಕ್ಷರಾದ ಕೋಟಿವಾಲೆ ಅವರಿಗೆ ಸನ್ಮಾನ Kotivale felicitated as new Bar Association President

ರಾಯಬಾಗ, 12 : ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ನೂತನವಾಗಿ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಆರ್‌.ಕೋಟಿವಾಲೆ ಅವರನ್ನು ಶುಕ್ರವಾರ ರಾಯಬಾಗ ಪಟ್ಟಣದ ಸಮಸ್ತ ಮಾಳಿ ಸಮಾಜದಿಂದ ಸತ್ಕರಿಸಲಾಯಿತು. ಸಮಾಜದ ಹಿರಿಯರಾದ ಅಣ್ಣಾಸಾಹೇಬ ಕುಲಗುಡೆ, ನಾರಾಯಣ ಮೇತ್ರಿ, ಲಕ್ಷ್ಮಣ ಹೊಸಮನಿ, ಅಪ್ಪಾಸಾಹೇಬ ಮಾಳಿ, ಗೋವಿಂದ ಕುಲಗುಡೆ, ವಿದ್ಯಾಧರ ಕುಲಗುಡೆ, ಹರೀಶ ಕುಲಗುಡೆ, ವಸಂತ ಹೊಸಮನಿ, ಸಂತೋಷ ಮೇತ್ರಿ, ಶಶಿಕಾಂತ ಮಾಳಿ, ರವಿ ಮೇತ್ರಿ, ರಾಜು ಕುಲಗುಡೆ, ಶ್ರೀಧರ ಕಿಚಡೆ ಹಾಗೂ ವಕೀಲರಾದ ಆರ್‌.ಎಚ್‌.ಗೊಂಡೆ, ಎನ್‌.ಎಮ್‌.ಯಡವನ್ನವರ, ಜಿ.ಎಸ್‌.ಕಿಚಡೆ, ಎಸ್‌.ಪಿ.ಪಾಟೀಲ, ಎಸ್‌.ಎಮ್‌.ಸಲಗರೆ, ಎಸ್‌.ಬಿ.ಶ್ರೀಗೊಂಡ, ಎಸ್‌.ವಿ.ಪೂಜಾರಿ, ಡಿ.ಎ.ಮನಗುತ್ತಿ ಸೇರಿ ಅನೇಕರು ಇದ್ದರು.