ಕೊಪ್ಪಳ : ಕ್ರೀಡಾಕೂಟದಲ್ಲಿ ಯಮನೂರಪ್ಪ, ರೇಣುಕಾ, ಗಣನೀಯ ಸಾಧನೆ
ಲೋಕದರ್ಶನ ವರದಿ
ಕೊಪ್ಪಳ 16: ದಿ. 14ರಂದು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 25ವರ್ಷದ ಒಳಗಿನ ಪುರುಷರ ಕಬಡ್ಡಿ ವಿಭಾಗದಲ್ಲಿ ಕರ್ನಾಟಕ ತಂಡವು ವಿಜಯಶಾಲಿಯಾಗಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಉಡಮಕಲ್ಲ ಗ್ರಾಮದ ಯುವಕ ಯಮನೂರಪ್ಪ ತಂದೆ ದಿಲೀಪ್ ಭಜಂತ್ರಿ ಇವರು ಭಾಗವಹಿಸಿ ಬ್ಯಾಂಪಿಯನ್ನರಾಗಿ ಬಂಗಾರದ ಪದಕವನ್ನು ಪಡೆದಿದ್ದಾರೆ. ಮತ್ತು ಅದೇ ರೀತಿಯಾದ ರಾಯಚೂರ ಜಿಲ್ಲೆಯ ಹಟ್ಟಿ ಗ್ರಾಮದ ಕುಮಾರಿ ರೇಣುಕಾ ಭಜಂತ್ರಿ ಈಕೆಯು 5000 ಮೀ ರನ್ನಿಂಗ್ ರೇಸ್ನಲ್ಲಿ ಭಾಗವಹಿಸಿ ಚಾಂಪಿಯನ್ನರಾಗಿ ಬಂಗಾರದ ಪದಕ ಗೆದ್ದಿದ್ದಾಳೆ. ಇವರು ಅತ್ಯಂತ ಕಡುಬಡವನಾಗಿದ್ದು, ಜೀವನದಲ್ಲಿ ಏನಾದರು ಸಾಧಿಸಬೇಕೆಂದು ಛಲದಿಂದ ಗುರಿಹೊಂದಿ, ಕರ್ನಾಟಕ ಕಬಡ್ಡಿ ಪಂದ್ಯಾವಳಿಯಲ್ಲಿ ಸ್ಥಾನಗಿಟ್ಟಿಸಿಕೊಂಡು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ. ಇವರನ್ನು ನಮ್ಮ ಕೊಪ್ಪಳ ಜಿಲ್ಲೆಯ ಕೊರಮ ಯುವಸೇನೆ ಜಿಲ್ಲಾಧ್ಯಕ್ಷರಾದ ಡಿ.ಕೆ.ಭಜಂತ್ರಿ, ಕಾರ್ಯದಶರ್ಿಯಾದ ಪರಶುರಾಮ ಉಡಮಕಲ್, ಅಂಬಣ್ಣ ಭಜಂತ್ರಿ, ಇಂದ್ರೇಶ್ ಉಡಮಕಲ್, ರಮೇಶ ಭಜಂತ್ರಿ, ಮಂಜುನಾಥ ಮುಸಲಾಪೂರ, ರವಿ ಭಜಂತ್ರಿ, ರಾಘವೇಂದ್ರ ಕುಷ್ಟಗಿ, ಮುತ್ತಣ್ಣ ನವಲಿ, ಹುಲಗಪ್ಪ ವನಬಳ್ಳಾರಿ, ಪರಶುರಾಮ ಇರಕಲ್ಲಗಡಾ ಮತ್ತು ಸಮಾಜದ ಗುರು-ಹಿರಿಯರು, ತಾಯಂದಿರು, ಸಮಾಜದ ಯುವಕರು ಸಮಾಜದ ವತಿಯಿಂದ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 