ಕೊಪ್ಪಳ : ಕ್ರೀಡಾಕೂಟದಲ್ಲಿ ಯಮನೂರಪ್ಪ, ರೇಣುಕಾ, ಗಣನೀಯ ಸಾಧನೆ
ಲೋಕದರ್ಶನ ವರದಿ
ಕೊಪ್ಪಳ 16: ದಿ. 14ರಂದು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 25ವರ್ಷದ ಒಳಗಿನ ಪುರುಷರ ಕಬಡ್ಡಿ ವಿಭಾಗದಲ್ಲಿ ಕರ್ನಾಟಕ ತಂಡವು ವಿಜಯಶಾಲಿಯಾಗಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಉಡಮಕಲ್ಲ ಗ್ರಾಮದ ಯುವಕ ಯಮನೂರಪ್ಪ ತಂದೆ ದಿಲೀಪ್ ಭಜಂತ್ರಿ ಇವರು ಭಾಗವಹಿಸಿ ಬ್ಯಾಂಪಿಯನ್ನರಾಗಿ ಬಂಗಾರದ ಪದಕವನ್ನು ಪಡೆದಿದ್ದಾರೆ. ಮತ್ತು ಅದೇ ರೀತಿಯಾದ ರಾಯಚೂರ ಜಿಲ್ಲೆಯ ಹಟ್ಟಿ ಗ್ರಾಮದ ಕುಮಾರಿ ರೇಣುಕಾ ಭಜಂತ್ರಿ ಈಕೆಯು 5000 ಮೀ ರನ್ನಿಂಗ್ ರೇಸ್ನಲ್ಲಿ ಭಾಗವಹಿಸಿ ಚಾಂಪಿಯನ್ನರಾಗಿ ಬಂಗಾರದ ಪದಕ ಗೆದ್ದಿದ್ದಾಳೆ. ಇವರು ಅತ್ಯಂತ ಕಡುಬಡವನಾಗಿದ್ದು, ಜೀವನದಲ್ಲಿ ಏನಾದರು ಸಾಧಿಸಬೇಕೆಂದು ಛಲದಿಂದ ಗುರಿಹೊಂದಿ, ಕರ್ನಾಟಕ ಕಬಡ್ಡಿ ಪಂದ್ಯಾವಳಿಯಲ್ಲಿ ಸ್ಥಾನಗಿಟ್ಟಿಸಿಕೊಂಡು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ. ಇವರನ್ನು ನಮ್ಮ ಕೊಪ್ಪಳ ಜಿಲ್ಲೆಯ ಕೊರಮ ಯುವಸೇನೆ ಜಿಲ್ಲಾಧ್ಯಕ್ಷರಾದ ಡಿ.ಕೆ.ಭಜಂತ್ರಿ, ಕಾರ್ಯದಶರ್ಿಯಾದ ಪರಶುರಾಮ ಉಡಮಕಲ್, ಅಂಬಣ್ಣ ಭಜಂತ್ರಿ, ಇಂದ್ರೇಶ್ ಉಡಮಕಲ್, ರಮೇಶ ಭಜಂತ್ರಿ, ಮಂಜುನಾಥ ಮುಸಲಾಪೂರ, ರವಿ ಭಜಂತ್ರಿ, ರಾಘವೇಂದ್ರ ಕುಷ್ಟಗಿ, ಮುತ್ತಣ್ಣ ನವಲಿ, ಹುಲಗಪ್ಪ ವನಬಳ್ಳಾರಿ, ಪರಶುರಾಮ ಇರಕಲ್ಲಗಡಾ ಮತ್ತು ಸಮಾಜದ ಗುರು-ಹಿರಿಯರು, ತಾಯಂದಿರು, ಸಮಾಜದ ಯುವಕರು ಸಮಾಜದ ವತಿಯಿಂದ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 